Lok Sabha Election 2024: ಬಿಜೆಪಿ- ಕಾಂಗ್ರೆಸ್ನಲ್ಲಿ ಯಾವ ಜಾತಿಗೆ ಎಷ್ಟು ಟಿಕೆಟ್? ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ!
ಬೆಂಗಳೂರು, ಮಾರ್ಚ್ 22: ಲೋಕಸಭಾ ಚುನಾವಣೆಗೆ ಕರ್ನಾಟಕ 28 ಲೋಕಸಭಾ ಕ್ಷೇತ್ರಗಳ ಫೈಕಿ ಕಾಂಗ್ರೆಸ್ 24 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದ್ದು, ಬಿಜೆಪಿಯ 20 ಅಭ್ಯರ್ಥಿ ಹೆಸರನ್ನ ಪ್ರಕಟಿಸಿದೆ. ಬಹುತೇಕ ಕ್ಷೇತ್ರಗಳಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ.
ಇನ್ನೂ ಕಾಂಗ್ರೆಸ್ ಹಾಗೂ ಬಿಜೆಪಿ ಹಲವು ಲೆಕ್ಕಾಚಾರ ಹಾಕಿಕೊಂಡು ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದು, ಅದರಲ್ಲಿ ಜಾತಿ ಲೆಕ್ಕಾಚಾರ ಕೂಡ ಪ್ರಮುಖವಾಗಿದೆ. ಕರ್ನಾಟಕದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿದ್ದು,ಬಿಜೆಪಿಯ ಪ್ರಕಟಿತ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದವರಿಗೆ ಸಿಂಹಪಾಲು ಸಿಕ್ಕಿದ್ದು, ಒಕ್ಕಲಿಗರಲ್ಲಿ ಇಬ್ಬರಿಗೆ ಸ್ಥಾನ ಸಿಕ್ಕಿದ್ರೆ, ಇತ್ತ ರಾಜ್ಯದಲ್ಲಿ ಹೆಚ್ಚು ಪ್ರಾಬಲ್ಯವಿರುವ ಕುರುಬ ಸಮುದಾಯವನ್ನ ಬಿಜೆಪಿ ಹೈಕಮಾಂಡ್ ಕಡೆಗಣಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಯಾವ ಜಾತಿಗಳಿಗೆ ಮಣೆ ಹಾಕಿವೆ. ಅಭ್ಯರ್ಥಿಗಳ ಜಾತಿವಾರು ಲೆಕ್ಕಾಚಾರ ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಂಗ್ರೆಸ್ ಹೈಕಮಾಂಡ್ ಇದುವರೆಗೂ 24 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಅದರಲ್ಲಿ 6 ಒಕ್ಕಲಿಗ, 5 ಲಿಂಗಾಯತ, 3 ಎಸ್ಸಿ, 2 ಎಸ್ಟಿ, 2 ಕುರುಬ, ಈಡಿಗ, ಬಿಲ್ಲವ, ಬಂಟ, ರೆಡ್ಡಿ, ಮುಸ್ಲಿಂ, ಮರಾಠ ಸಮುದಾಯಕ್ಕೆ ತಲಾ ಒಂದು ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದೆ. ಇನ್ನು, ಬಿಜೆಪಿ ಇದುವರೆಗೂ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಅದರಲ್ಲಿ 8 ಲಿಂಗಾಯತ, 3 ಒಕ್ಕಲಿಗ, 2 ಎಸ್ಸಿ, 2 ಬ್ರಾಹ್ಮಣ, ಕ್ಷತ್ರೀಯ, ಬಂಜಾರ, ವಾಲ್ಮೀಕಿ ನಾಯಕ, ಬಂಟ, ಬಿಲ್ಲವ ಸಮುದಾಯಕ್ಕೆ ಟಿಕೆಟ್ ನೀಡಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಜಾತಿವಾರು ಹಂಚಿಕೆ ಪಟ್ಟಿ
1. ಹಾಸನ: ಶ್ರೇಯಸ್ ಪಟೇಲ್- ಒಕ್ಕಲಿಗ
2.ಬೆಂಗಳೂರು ಗ್ರಾಮಾಂತರ: ಡಿಕೆ ಸುರೇಶ್- ಒಕ್ಕಲಿಗ
3.ಶಿವಮೊಗ್ಗ ಕ್ಷೇತ್ರ: ಗೀತಾ ಶಿವರಾಜ್ಕುಮಾರ್- ಈಡಿಗ
4.ಹಾವೇರಿ: ಆನಂದಸ್ವಾಮಿ ಗಡ್ಡದೇವರಮಠ- ವೀರಶೈವ ಲಿಂಗಾಯತ
5.ಮಂಡ್ಯ ಕ್ಷೇತ್ರ : ಸ್ಟಾರ್ ಚಂದ್ರು -ಒಕ್ಕಲಿಗ
6.ತುಮಕೂರು: ಮುದ್ದಹನುಮೇಗೌಡ-ಒಕ್ಕಲಿಗ
7.ವಿಜಯಪುರ: ರಾಜು ಅಲಗೂರು-ಎಸ್ಸಿ
8.ಕಲಬುರಗಿ: ರಾಧಾಕೃಷ್ಣ ದೊಡ್ಮನಿ- ಎಸ್ಸಿ
9.ಚಿತ್ರದುರ್ಗ: ಬಿಎನ್ ಚಂದ್ರಪ್ಪ-ಎಸ್ಸಿ
10.ಬೆಳಗಾವಿ: ಮೃಣಾಲ್ ಹೆಬ್ಬಾಳ್ಕರ್- ಪಂಚಮಸಾಲಿ ಲಿಂಗಾಯತ
11.ಚಿಕ್ಕೋಡಿ: ಪ್ರಿಯಾಂಕಾ ಜಾರಕಿಹೊಳಿ-ವಾಲ್ಮೀಕಿ ನಾಯಕ
12.ಬಾಗಲಕೋಟೆ: ಸಂಯುಕ್ತಾ ಪಾಟೀಲ್-ಲಿಂಗಾಯತ
13.ಧಾರವಾಡ: ವಿನೋದ್ ಅಸೂಟಿ-ಕುರುಬ
14.ಕೊಪ್ಪಳ: ರಾಘವೇಂದ್ರ ಹಿಟ್ನಾಳ್-ಕುರುಬ
15.ದಾವಣಗೆರೆ: ಡಾ ಪ್ರಭಾ ಮಲ್ಲಿಕಾರ್ಜುನ್-ವೀರಶೈವ ಲಿಂಗಾಯತ
16.ಬೀದರ್: ಸಾಗರ್ ಖಂಡ್ರೆ- ವೀರಶೈವ ಲಿಂಗಾಯತ
17.ದಕ್ಷಿಣ ಕನ್ನಡ: ಪದ್ಮರಾಜ್-ಪೂಜಾರಿ (ಬಿಲ್ಲವ)
18.ಉಡುಪಿ - ಚಿಕ್ಕಮಗಳೂರು: ಡಾ ಜಯಪ್ರಕಾಶ್ ಹೆಗ್ಡೆ-ಬಂಟ
19.ಬೆಂಗಳೂರು ದಕ್ಷಿಣ: ಸೌಮ್ಯ ರೆಡ್ಡಿ-ರೆಡ್ಡಿ
20.ಬೆಂಗಳೂರು ಕೇಂದ್ರ: ಮನ್ಸೂರ್ ಅಲಿಖಾನ್-ಮುಸ್ಲಿಂ
21.ಬೆಂಗಳೂರು ಉತ್ತರ: ಪ್ರೋ. ರಾಜೀವ್ ಗೌಡ-ಒಕ್ಕಲಿಗ
22.ಮೈಸೂರು: ಎಂ ಲಕ್ಷ್ಮಣ್-ಒಕ್ಕಲಿಗ
23.ರಾಯಚೂರು: ಜಿ ಕುಮಾರ್ ನಾಯ್ಕ್-ವಾಲ್ಮೀಕಿ ನಾಯಕ
24.ಉತ್ತರ ಕನ್ನಡ:ಅಂಜಲಿ ನಿಂಬಾಳ್ಕರ್- ಮರಾಠ

ಬಿಜೆಪಿ ಅಭ್ಯರ್ಥಿಗಳ ಜಾತಿವಾರು ಹಂಚಿಕೆ ಪಟ್ಟಿ
1.ಬೆಂಗಳೂರು ಗ್ರಾಮಾಂತರ: ಡಾ ಸಿಎನ್ ಮಂಜುನಾಥ್-ಒಕ್ಕಲಿಗ
2.ಶಿವಮೊಗ್ಗ: ಬಿವೈ ರಾಘವೇಂದ್ರ-ಲಿಂಗಾಯತ
3.ಹಾವೇರಿ: ಬಸವರಾಜ ಬೊಮ್ಮಾಯಿ- ಲಿಂಗಾಯತ
4.ಮೈಸೂರು: ಯದುವೀರ್ ಒಡೆಯರ್-ಕ್ಷತ್ರೀಯ
5.ತುಮಕೂರು: ವಿ ಸೋಮಣ್ಣ-ಲಿಂಗಾಯತ
6.ಬಳ್ಳಾರಿ: ಶ್ರೀರಾಮುಲು-ಎಸ್ಟಿ ವಾಲ್ಮೀಕಿ
7.ವಿಜಯಪುರ: ರಮೇಶ್ ಜಿಗಜಿಣಗಿ-ಎಸ್ಸಿ
8.ಕಲಬುರಗಿ: ಡಾ ಉಮೇಶ್ ಜಾಧವ್-ಬಂಜಾರ
9.ಚಾಮರಾಜನಗರ: ಎಸ್ ಬಾಲರಾಜ್-ಎಸ್ಸಿ
10.ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ-ಒಕ್ಕಲಿಗ
11.ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ-ಲಿಂಗಾಯತ
12.ಬಾಗಲಕೋಟೆ: ಪಿಸಿ ಗದ್ದಿಗೌಡರ್-ಲಿಂಗಾಯತ ಗಾಣಿಗ
13.ಧಾರವಾಡ: ಪ್ರಹ್ಲಾದ್ ಜೋಶಿ-ಬ್ರಾಹ್ಮಣ
14.ಕೊಪ್ಪಳ: ಡಾ ಬಸವರಾಜ್ ಕ್ಯಾವಟೂರು-ಲಿಂಗಾಯತ ಪಂಚಮಸಾಲಿ
15.ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್-ವೀರಶೈವ ಲಿಂಗಾಯತ
16.ಬೀದರ್: ಭಗವಂತ್ ಖೂಬಾ-ಲಿಂಗಾಯತ
17.ದಕ್ಷಿಣ ಕನ್ನಡ: ಕ್ಯಾ. ಬ್ರಿಜೇಶ್ ಚೌಟಾ-ಬಂಟ್ಸ್
18.ಉಡುಪಿ - ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ-ಬಿಲ್ಲವ
19.ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ-ಬ್ರಾಹ್ಮಣ
20. ಬೆಂಗಳೂರು ಕೇಂದ್ರ: ಪಿಸಿ ಮೋಹನ್-ಒಕ್ಕಲಿಗ (ಬಲಿಜ)
-
ಮರ್ಯಾದೆ ಹತ್ಯೆಗೆ ಬೀಳಲಿದೆ ಬ್ರೇಕ್: ವಿಧಾನಸಭೆಯಲ್ಲಿ ಐತಿಹಾಸಿಕ 'ಇವ ನಮ್ಮವ' ಮಸೂದೆ ಮಂಡಿಸಿದ ಸರ್ಕಾರ -
ಇಂದಿನಿಂದ SSLC ಪರೀಕ್ಷೆ: 8.66 ಲಕ್ಷ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಶುಭಹಾರೈಕೆ; ಆತಂಕಬೇಡ ಎಂದ ಸರ್ಕಾರ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ












Click it and Unblock the Notifications