ಹೊಸ ಕನ್ನಡ ಧ್ವಜ ರೆಡಿ, ಕೇಂದ್ರ ಒಪ್ಪುವುದಷ್ಟೆ ಬಾಕಿ
Recommended Video

ಬೆಂಗಳೂರು, ಮಾರ್ಚ್ 08: ಪ್ರತ್ಯೇಕ ಧ್ವಜ ಸಮಿತಿಯ ಶಿಫಾರಿಸಿನಂತೆ ವಿನ್ಯಾಸ ಮಾಡಲಾಗಿರುವ ನೂತನ ನಾಡ ಧ್ವಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅನಾವರಣ ಮಾಡಿದರು.
ಈ ಮುಂಚೆ ಇದ್ದ ಹಳದಿ ಮತ್ತು ಕೆಂಪು ಬಣ್ಣದ ಜೊತೆಗೆ ಹೊಸ ಧ್ವಜದಲ್ಲಿ ಬಿಳಿ ಬಣ್ಣವನ್ನೂ ಸೇರಿಸಲಾಗಿದ್ದು, ಜೊತೆಗೆ ಸರ್ಕಾರದ ಲಾಂಛನದ ಚಿತ್ರವೂ ಧ್ವಜದಲ್ಲಿದೆ ಆದರೆ ಧ್ವಜವನ್ನು ಹಿಂದೆ ಮುಂದೆ ಹಿಡಿದಾಗ ಅಕ್ಷರಗಳು ಉಲ್ಟಾ ಕಾಣುತ್ತವಾದ್ದರಿಂದ 'ಸತ್ಯ ಮೇವ ಜಯತೆ' ಧ್ಯೇಯ ವಾಕ್ಯವನ್ನು ಕೈಬಿಡಲಾಗಿದೆ. ನೂತನ ಧ್ವಜನವನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ಅನಾವರಣ ಮಾಡಿದರು.
ಧ್ವಜ ಅನಾವರಣದ ನಂತರ ಮಾತನಾಡಿದ ಸಿದ್ದರಾಮಯ್ಯ ಅವರು ಬಹಳ ದಿನದಿಂದ ರಾಜ್ಯಕ್ಕೆ ನಾಡಧ್ವಜ ಬೇಕೆಂಬ ಚರ್ಚೆ ನಡೆದಿತ್ತು ನಡೆದಿತ್ತು. ಇದೇ ವಿಚಾರವಾಗಿ ಹಿರಿಯ ಸಾಹಿತಿಗಳಾದ ಪಾಟೀಲ್ ಪುಟ್ಟಪ್ಪ ಅವರು ಕೂಡ ಪತ್ರ ಬರೆದಿದ್ದರು. ಹಾಗಾಗಿ ಎಸ್.ಜಿ.ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಸಮಿತಿ ಕೂಡ ರಚನೆ ಮಾಡಲಾಗಿತ್ತು. ಸಮಿತಿಯು ಕೂಲಂಕುಷವಾಗಿ ಚರ್ಚಿಸಿ, ವರದಿ ಕೊಟ್ಟಿದೆ. ಕನ್ನಡದ ಇತಿಹಾಸ, ಬಾವುಟ, ಸಂವಿಧಾನದಲ್ಲಿ ತೊಡಕಿನ ಬಗ್ಗೆ ಅಧ್ಯಯನ ಮಾಡಿದ ಬಳಿಕ ಈ ಬಾವುಟವನ್ನು ತಯಾರಿಸಲಾಗಿದೆ' ಎಂದು ಅವರು ಹೇಳಿದರು.

ಧ್ವಜ ಸಮಿತಿಯ ವರದಿಗೆ ಸಂಪುಟ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿದೆ. ಆದರೆ ನಾವಿದನ್ನು ಘೋಷಣೆ ಮಾಡುತ್ತಿಲ್ಲ, ಇದಕ್ಕೆ ಕೇಂದ್ರದ ಒಪ್ಪಿಗೆಯೂ ಬೇಕಿರುವ ಕಾರಣ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರಧ್ವಜದ ಅಡಿಯಲ್ಲಿಯೇ ನಾಡಧ್ವಜ ಹಾರಲಿದೆ ಎಂದು ಕೇಂದ್ರಕ್ಕೆ ಭರವಸೆ ಸಹ ನಿಡಿದ್ದೇವೆ ಎಂದ ಅವರು ಇದೊಂದು ಐತಿಹಾಸಿಕ ನಿರ್ಣಯ ಎಂದು ಬಣ್ಣಿಸಿದರು.
ನಾಡ ಧ್ವಜದ ಮಾದರಿ ಹಾಗೂ ಪ್ರಸ್ತಾವನೆ ಹಾಗೂ ವರದಿ ಪ್ರತಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದ್ದು, ಕೇಂದ್ರದ ಒಪ್ಪಿಗೆ ದೊರೆತ ನಂತರವಷ್ಟೆ ಅಧಿಕೃತವಾಗಿ ಕನ್ನಡ ಧ್ವಜ ಅಸ್ಥಿತ್ವಕ್ಕೆ ಬರಲಿದೆ. ದೇಶದಲ್ಲಿ ಜಮ್ಮು ಕಾಶ್ಮೀರ ಹೊರತು ಪಡಿಸಿದರೆ ಇನ್ನಾವ ರಾಜ್ಯಕ್ಕೂ ಪ್ರತ್ಯೇಕ ಧ್ವಜ ಇಲ್ಲ.
-
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಿದ್ದರಾಮಯ್ಯ ಬಜೆಟ್; ಹಣಕಾಸು ಶಿಸ್ತು, AI ಉತ್ತೇಜನ ಸ್ವಾಗತಾರ್ಹ:ರಂಗಸ್ವಾಮಿ ಮೂಕನಹಳ್ಳಿ -
ಯಾವ ಧರ್ಮವೂ ಧ್ವೇಷ ಬೋಧಿಸಲ್ಲ: ಸಮಾನತೆ ಸ್ಥಾಪಿಸುವುದೇ ಯೋಜನೆಗಳ ಗುರಿ: ಸಿದ್ದರಾಮಯ್ಯ -
ಬಜೆಟ್ನಲ್ಲಿ ಅನಿವಾಸಿ ಸಚಿವಾಲಯ ಘೋಷಣೆ ಇಲ್ಲ: ನಿರಾಶೆ ವ್ಯಕ್ತಪಡಿಸಿದ ಡಾ.ರೊನಾಲ್ಡ್ ಕೊಲಾಸೊ -
Karnataka Budget: ಹೆಚ್ಚು ಹಾಲು ಕೊಡುವ ಹಸುವಿಗೆ ಹೆಚ್ಚಿನ ಆರೈಕೆ ಬೇಕು: ಬಜೆಟ್ ಭಾಷಣವಿಡೀ ಕೇಂದ್ರಕ್ಕೆ ಕುಟುಕಿದ ಸಿದ್ದರಾಮಯ್ಯ -
Karnataka Budget 2026: 4.5 ಲಕ್ಷ ಕೋಟಿಯ ರಾಜ್ಯ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಗುವುದೇ ಭರ್ಜರಿ ಕೊಡುಗೆ? -
ಬಜೆಟ್ನಲ್ಲಿ ಜನರ ಮೇಲೆ ಸಾಲದ ಹೊರೆ, ಖಾಲಿ ಚೊಂಬು ನೀಡಿದ ಕಾಂಗ್ರೆಸ್ ಸರ್ಕಾರ: ಪ್ರತಿಪಕ್ಷ ನಾಯಕ ಆರ್.ಅಶೋಕ -
ಸಿನಿಮಾ ಚಿತ್ರೀಕರಣ ಅನುಮತಿಗೆ "ಸಿನಿ ಮಿತ್ರ" ಆನ್ಲೈನ್ ವ್ಯವಸ್ಥೆ: ಸ್ಯಾಂಡಲ್ವುಡ್ಗೆ ಸಿದ್ದರಾಮಯ್ಯ ಬಜೆಟ್ ಕೊಟ್ಟಿದ್ದೇನು? -
Horoscope March 6: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಒಳಿತು, ಪ್ರೇಮಿಗಳಿಗೆ ಕಾದಿವೆ ಮಧುರ ಕ್ಷಣ, ದಿನ ಭವಿಷ್ಯ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ಶ್ರೀ ಮಾತಾ ವೈಷ್ಟೋದೇವಿ ಭಕ್ತರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಭರ್ಜರಿ ಸುದ್ದಿ | Karnataka Budget 2026 -
5,00,00,000 ರೂಪಾಯಿ, ಕನ್ನಡ ನಾಡಿನ ಭಕ್ತರಿಗೆ ಭರ್ಜರಿ ಉಡುಗೊರೆ... Karnataka Budget 2026












Click it and Unblock the Notifications