ಚಂದನ ವಾಹಿನಿಯಲ್ಲಿ ಶಾಲಾ ಮಕ್ಕಳಿಗೆ ಪಾಠ; ವೇಳಾಪಟ್ಟಿ
ಬೆಂಗಳೂರು, ಜುಲೈ 21 : ಕರ್ನಾಟಕ ಸರ್ಕಾರ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ತರಗತಿಗಳನ್ನು ನಡೆಸಲು ಅನುಮತಿಯನ್ನು ನೀಡಿದೆ. ಜುಲೈನಿಂದ ಡಿಸೆಂಬರ್ ತನಕ ಪಾಠ ಪ್ರಸಾರ ಮಾಡಲಾಗುತ್ತದೆ.
ಕೊರೊನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಶಾಲೆಗಳು ಬಾಗಿಲು ಮುಚ್ಚಿವೆ. ಖಾಸಗಿ ಶಾಲೆಗಳು ಆನ್ಲೈನ್ ಮೂಲಕ ತರಗತಿ ಆರಂಭಿಸಿವೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿತಿ ಮೂಲಕ ಪಾಠ ಮಾಡಲಾಗುತ್ತದೆ.
ಕರ್ನಾಟಕ ಸರ್ಕಾರ ಈ ಯೋಜನೆಗಾಗಿ 1.60 ಕೋಟಿ ರೂ. ವೆಚ್ಚ ಮಾಡಲು ಅನುಮತಿ ನೀಡಿದೆ. ಹೆಚ್ಚು ವಿದ್ಯಾರ್ಥಿಗಳಿಗೆ ಪಾಠ ತಲುಪಲು ಸಹಾಯಕವಾಗುವಂತೆ ಯೂ ಟ್ಯೂಬ್ನಲ್ಲಿಯೂ ಪಾಠಗಳ ವಿಡಿಯೋ ಲಭ್ಯವಾಗುವಂತೆ ಮಾಡಲಾಗುತ್ತಿದೆ.
8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಪಾಠಗಳನ್ನು ಮಾಡಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರದಿಂದ ಶುಕ್ರವಾರದ ತನಕ ಚಂದನ ವಾಹಿನಿಯಲ್ಲಿ ಪಾಠ ಪ್ರಸಾರವಾಗಲಿದೆ.

10 ನೇ ತರಗತಿ ವೇಳಾಪಟ್ಟಿ
* ಸೋಮವಾರ 9.30 ರಿಂದ 10 ಗಣಿತ, 10.30 ರಿಂದ 11 ವಿಜ್ಞಾನ, 3 ರಿಂದ 3.30 ಕನ್ನಡ.
* ಮಂಗಳವಾರ 9.30 ರಿಂದ 10 ವಿಜ್ಞಾನ, 10.30 ರಿಂದ 11 ಸಮಾ ವಿಜ್ಞಾನ, 3 ರಿಂದ 3.30 ಗಣಿತ
* ಬುಧವಾರ 9.30 ರಿಂದ 10 ಗಣಿತ, 10.30 ರಿಂದ 11 ಇಂಗ್ಲಿಶ್, 3 ರಿಂದ 3.30 ಹಿಂದಿ
* ಗುರುವಾರ 9.30 ರಿಂದ 10 ಸಮಾಜ ವಿಜ್ಞಾನ, 10.30 ರಿಂದ 11 ಕನ್ನಡ
* ಶುಕ್ರವಾರ 9.30 ರಿಂದ 10 ವಿಜ್ಞಾನ, 3 ರಿಂದ 3.30 ಸಮಾಜ ವಿಜ್ಞಾನ

9ನೇ ತರಗತಿ ಟೈಮ್ ಟೇಬಲ್
* ಸೋಮವಾರ 10 ರಿಂದ 10.30 ಇಂಗ್ಲಿಶ್, 3.30 ರಿಂದ 4 ಗಣಿತ, 5 ರಿಂದ 5.30 ಸಮಾಜ ವಿಜ್ಞಾನ
* ಮಂಗಳವಾರ 10 ರಿಂದ 10.30 ಸಮಾಜ ವಿಜ್ಞಾನ, 5 ರಿಂದ 5.30 ಸಮಾಜ ವಿಜ್ಞಾನ
* ಬುಧವಾರ 10 ರಿಂದ 10.30 ವಿಜ್ಞಾನ, 3.30 ರಿಂದ 4 ಗಣಿತ
* ಗುರುವಾರ 10 ರಿಂದ 10.30 ಹಿಂದಿ, 3.30 ರಿಂದ 4 ವಿಜ್ಞಾನ
* ಶುಕ್ರವಾರ 3. 30 ರಿಂದ 4 ಕನ್ನಡ

8ನೇ ತರಗತಿಗೆ ಪಾಠ
* ಸೋಮವಾರ 11.30 ರಿಂದ 12 ಗಣಿತ, 4 ರಿಂದ 4.30 ವಿಜ್ಞಾನ
* ಮಂಗಳವಾರ 11.30 ರಿಂದ 12 ಕನ್ನಡ, 4 ರಿಂದ 4.30 ಸಮಾಜ ವಿಜ್ಞಾನ
* ಬುಧವಾರ 11.30 ರಿಂದ 12 ಇಂಗ್ಲೀಶ್, 4 ರಿಂದ 4.30 ವಿಜ್ಞಾನ
* ಗುರುವಾರ 11.30 ರಿಂದ 12 ಗಣಿತ
* ಶುಕ್ರವಾರ 11.30 ರಿಂದ 12 ಸಮಾಜ ವಿಜ್ಞಾನ, 4 ರಿಂದ 4.30 ಹಿಂದಿ

ಸರ್ಕಾರದಿಂದ ಹಣ ಪಾವತಿ
8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಪಾಠ ಮಾಡಲು ಕರ್ನಾಟಕ ಸರ್ಕಾರ 30 ನಿಮಿಷಗಳ ಎಂಟು ಅವಧಿಯ 120 ದಿನದ ಕಾರ್ಯಕ್ರಮ ಪ್ರಸಾರಕ್ಕೆ ಗಂಟೆಗೆ 24,426 ರೂ.ಗಳಂತೆ 1.17 ಕೋಟಿ ರೂ. ಪಾವತಿ ಮಾಡಲಿದೆ.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications