ಚಂದನ ವಾಹಿನಿಯಲ್ಲಿ ಶಾಲಾ ಮಕ್ಕಳಿಗೆ ಪಾಠ; ವೇಳಾಪಟ್ಟಿ
ಬೆಂಗಳೂರು, ಜುಲೈ 21 : ಕರ್ನಾಟಕ ಸರ್ಕಾರ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ತರಗತಿಗಳನ್ನು ನಡೆಸಲು ಅನುಮತಿಯನ್ನು ನೀಡಿದೆ. ಜುಲೈನಿಂದ ಡಿಸೆಂಬರ್ ತನಕ ಪಾಠ ಪ್ರಸಾರ ಮಾಡಲಾಗುತ್ತದೆ.
ಕೊರೊನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಶಾಲೆಗಳು ಬಾಗಿಲು ಮುಚ್ಚಿವೆ. ಖಾಸಗಿ ಶಾಲೆಗಳು ಆನ್ಲೈನ್ ಮೂಲಕ ತರಗತಿ ಆರಂಭಿಸಿವೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿತಿ ಮೂಲಕ ಪಾಠ ಮಾಡಲಾಗುತ್ತದೆ.
ಕರ್ನಾಟಕ ಸರ್ಕಾರ ಈ ಯೋಜನೆಗಾಗಿ 1.60 ಕೋಟಿ ರೂ. ವೆಚ್ಚ ಮಾಡಲು ಅನುಮತಿ ನೀಡಿದೆ. ಹೆಚ್ಚು ವಿದ್ಯಾರ್ಥಿಗಳಿಗೆ ಪಾಠ ತಲುಪಲು ಸಹಾಯಕವಾಗುವಂತೆ ಯೂ ಟ್ಯೂಬ್ನಲ್ಲಿಯೂ ಪಾಠಗಳ ವಿಡಿಯೋ ಲಭ್ಯವಾಗುವಂತೆ ಮಾಡಲಾಗುತ್ತಿದೆ.
8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಪಾಠಗಳನ್ನು ಮಾಡಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರದಿಂದ ಶುಕ್ರವಾರದ ತನಕ ಚಂದನ ವಾಹಿನಿಯಲ್ಲಿ ಪಾಠ ಪ್ರಸಾರವಾಗಲಿದೆ.

10 ನೇ ತರಗತಿ ವೇಳಾಪಟ್ಟಿ
* ಸೋಮವಾರ 9.30 ರಿಂದ 10 ಗಣಿತ, 10.30 ರಿಂದ 11 ವಿಜ್ಞಾನ, 3 ರಿಂದ 3.30 ಕನ್ನಡ.
* ಮಂಗಳವಾರ 9.30 ರಿಂದ 10 ವಿಜ್ಞಾನ, 10.30 ರಿಂದ 11 ಸಮಾ ವಿಜ್ಞಾನ, 3 ರಿಂದ 3.30 ಗಣಿತ
* ಬುಧವಾರ 9.30 ರಿಂದ 10 ಗಣಿತ, 10.30 ರಿಂದ 11 ಇಂಗ್ಲಿಶ್, 3 ರಿಂದ 3.30 ಹಿಂದಿ
* ಗುರುವಾರ 9.30 ರಿಂದ 10 ಸಮಾಜ ವಿಜ್ಞಾನ, 10.30 ರಿಂದ 11 ಕನ್ನಡ
* ಶುಕ್ರವಾರ 9.30 ರಿಂದ 10 ವಿಜ್ಞಾನ, 3 ರಿಂದ 3.30 ಸಮಾಜ ವಿಜ್ಞಾನ

9ನೇ ತರಗತಿ ಟೈಮ್ ಟೇಬಲ್
* ಸೋಮವಾರ 10 ರಿಂದ 10.30 ಇಂಗ್ಲಿಶ್, 3.30 ರಿಂದ 4 ಗಣಿತ, 5 ರಿಂದ 5.30 ಸಮಾಜ ವಿಜ್ಞಾನ
* ಮಂಗಳವಾರ 10 ರಿಂದ 10.30 ಸಮಾಜ ವಿಜ್ಞಾನ, 5 ರಿಂದ 5.30 ಸಮಾಜ ವಿಜ್ಞಾನ
* ಬುಧವಾರ 10 ರಿಂದ 10.30 ವಿಜ್ಞಾನ, 3.30 ರಿಂದ 4 ಗಣಿತ
* ಗುರುವಾರ 10 ರಿಂದ 10.30 ಹಿಂದಿ, 3.30 ರಿಂದ 4 ವಿಜ್ಞಾನ
* ಶುಕ್ರವಾರ 3. 30 ರಿಂದ 4 ಕನ್ನಡ

8ನೇ ತರಗತಿಗೆ ಪಾಠ
* ಸೋಮವಾರ 11.30 ರಿಂದ 12 ಗಣಿತ, 4 ರಿಂದ 4.30 ವಿಜ್ಞಾನ
* ಮಂಗಳವಾರ 11.30 ರಿಂದ 12 ಕನ್ನಡ, 4 ರಿಂದ 4.30 ಸಮಾಜ ವಿಜ್ಞಾನ
* ಬುಧವಾರ 11.30 ರಿಂದ 12 ಇಂಗ್ಲೀಶ್, 4 ರಿಂದ 4.30 ವಿಜ್ಞಾನ
* ಗುರುವಾರ 11.30 ರಿಂದ 12 ಗಣಿತ
* ಶುಕ್ರವಾರ 11.30 ರಿಂದ 12 ಸಮಾಜ ವಿಜ್ಞಾನ, 4 ರಿಂದ 4.30 ಹಿಂದಿ

ಸರ್ಕಾರದಿಂದ ಹಣ ಪಾವತಿ
8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಪಾಠ ಮಾಡಲು ಕರ್ನಾಟಕ ಸರ್ಕಾರ 30 ನಿಮಿಷಗಳ ಎಂಟು ಅವಧಿಯ 120 ದಿನದ ಕಾರ್ಯಕ್ರಮ ಪ್ರಸಾರಕ್ಕೆ ಗಂಟೆಗೆ 24,426 ರೂ.ಗಳಂತೆ 1.17 ಕೋಟಿ ರೂ. ಪಾವತಿ ಮಾಡಲಿದೆ.
-
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ












Click it and Unblock the Notifications