ಸಿದ್ಧಾರ್ಥ ಮೇಲಿದ್ದ 9409 ಕೋಟಿ ಸಾಲದ ಪೂರ್ಣ ಅಂಕಿ-ಅಂಶ
ಬೆಂಗಳೂರು, ಜುಲೈ 31: ಸಿದ್ಧಾರ್ಥ ಅವರಿಗೆ 8053 ಕೋಟಿ ಸಾಲವಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಲದ ಪಟ್ಟಿಯೊಂದು ನಿನ್ನೆ ಹರಿದಾಡುತ್ತಿದ್ದು, ಆದರೆ ಸಿದ್ಧಾರ್ಥ ಅವರಿಗಿದ್ದ ಒಟ್ಟು ಸಾಲದ ಬಗ್ಗೆ ಮಾಹಿತಿ ಇದೀಗ ಬಹಿರಂಗವಾಗಿದೆ.
ಸಿದ್ಧಾರ್ಥ ಅವರಿಗೆ ಇದ್ದ ಒಟ್ಟು ಸಾಲದ ಮೊತ್ತ 9409 ಕೋಟಿ ರೂಪಾಯಿಗಳು. ಇದು ಅವರ ಒಟ್ಟು ಆಸ್ತಿಯ ಅರ್ಧದಷ್ಟೂ ಸಹ ಅಲ್ಲ, ಸಿದ್ಧಾರ್ಥ ಅವರು ಕಟ್ಟಿ ಬೆಳಿಸಿದ ಕೆಫೆ ಕಾಫಿ ಡೇ ಯ ಬ್ರ್ಯಾಂಡ್ ವ್ಯಾಲ್ಯೂ ಒಂದೇ 20,000 ಕೋಟಿಗೂ ಅಧಿಕ ಇದೆ.
ಸಾಲಕ್ಕಿಂತ ಎರಡು ಪಟ್ಟು ಹೆಚ್ಚಿನ ಆಸ್ತಿ, ಉದ್ಯಮದಲ್ಲಿ ಅತ್ಯುತ್ತಮ ಹೆಸರು, ರಾಜಕಾರಣದಲ್ಲಿ ಗಾಡ್ಫಾದರ್ಗಳು, ಆತ್ಮೀಯ ಗೆಳೆಯರು, ಕರೆದ ಕೂಡಲೇ ಬೆನ್ನಿಗೆ ನಿಲ್ಲುವ ಲಕ್ಷಾಂತರ ಮಂದಿ ಜನರಿದ್ದರೂ ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಣಯಕ್ಕೆ ಬಂದದ್ದಾದರೂ ಏಕೆ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ.

ಕೆಫೆ ಕಾಫಿ ಡೇ ಯಂತವ ದೊಡ್ಡ ಸಂಸ್ಥೆ ನಡೆಸುತ್ತಿದ್ದರು ಇಷ್ಟು ದೊಡ್ಡದಾಗಿ ಸಾಲ ಬೆಳೆದಿದ್ದು ಹೇಗೆ? ಎಂಬ ಅನುಮಾನವೂ ಕಾಡುತ್ತದೆ. ಸಿದ್ಧಾರ್ಥ ಅವರ ಒಟ್ಟು ಸಾಲದ ಮಾಹಿತಿ, ಸಾಲ ಬೆಳೆದ ಬಗೆ, ಇಕ್ಕಟ್ಟಿಗೆ ಸಿಲುಕಿದ್ದು ಹೇಗೆ ಎಲ್ಲದರ ಮಾಹಿತಿ ಇಲ್ಲಿದೆ.
ಸಿದ್ಧಾರ್ಥ ಅವರ ಸಂಸ್ಥೆಗಳ ಮೇಲೆ 2017 ರಲ್ಲಿ ಐಟಿ ರೇಡ್ ಆದ ನಂತರ ಅವರ ಸಾಲದ ಪ್ರಮಾಣ ಏರಿಕೆ ಆಗಿದ್ದು, ಇಲ್ಲಿ ಗಮನಿಸಬೇಕಾದ ಅಂಶ. ಸಿದ್ಧಾರ್ಥ ಅವರು ಪಡೆದಿದ್ದ ಸಾಲದ ಅಂಕಿ-ಅಂಶಗಳು ಇಲ್ಲಿವೆ.
ಸಿದ್ಧಾರ್ಥ ಅವರ ಒಡೆತನದ ಕೆಫೆ ಕಾಫಿ ಡೇ ಸಮೂಹದ ಮೇಲೆ 8083 ಕೋಟಿ ಸಾಲ ಇದೆ. ಕಾಫಿ ಡೇ ಗ್ಲೋಬಲ್ ಮೇಲೆ 1252 ಕೋಟಿ ಸಾಲ ಇದೆ. ಸಿವನ್ ಸೆಕ್ಯೂರಿಟೀಸ್ ಸಂಸ್ಥೆಯ ಮೇಲೆ 42 ಕೋಟಿ ಸಾಲ ಇದೆ. ಇಟ್ಟಾಯಿಮ್ ಸಿಸ್ಟಮ್ ಮೇಲೆ 32 ಕೋಟಿ ಸಾಲ ಇದೆ. ಒಟ್ಟು 9409 ಕೋಟಿ ಸಾಲ ಇದೆ.
ಐಟಿ ದಾಳಿ ಆದ ನಂತರ 46% ಸಾಲ ಹೆಚ್ಚಾಗಿದೆ. ಜೂನ್ 2018 ರಿಂದ ಈಚೆಗೆ ಸಿದ್ಧಾರ್ಥ ಅವರು ಕೆಫೆ ಕಾಫಿ ಡೇ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಡಮಾನ ಇಟ್ಟಿದ್ದಾರೆ.
ಜೂನ್ 2018 ರಲ್ಲಿ 39% ಷೇರುಗಳನ್ನು ಸಾಲಕ್ಕಾಗಿ ಅಡಮಾನ ಇಟ್ಟಿದ್ದಾರೆ, ಸೆಪ್ಟೆಂಬರ್ ತಿಂಗಳಲ್ಲಿ 38% ಅಡಮಾನ ಇಟ್ಟಿದ್ದಾರೆ. ಡಿಸೆಂಬರ್ನಲ್ಲಿ 70% ಷೇರು ಅಡಮಾನ ಇಟ್ಟಿದ್ದಾರೆ. ಮಾರ್ಚ್ 2019 ರಲ್ಲಿ 70% ಷೇರು ಅಡಮಾನ ಇಟ್ಟಿದ್ದಾರೆ. ಜೂನ್ 71% ಷೇರು ಅಡಮಾನ ಇಟ್ಟಿದ್ದಾರೆ.
ಈ ನಡುವೆ ಸಿದ್ಧಾರ್ಥ ಅವರ ಒಡೆತನದ ಮೈಂಡ್ ಟ್ರೀ ಸಂಸ್ಥೆಯನ್ನು ಎಲ್ ಆಂಡ್ ಟಿ ಗೆ ಮಾರಾಟ ಮಾಡಿದರು. ಸಂಸ್ಥೆಯಲ್ಲಿದ್ದು ತಮ್ಮ 20.32% ಷೇರುಗಳನ್ನು ಮಾರಾಟ ಮಾಡಿದ್ದರು. ಆ ಮಾರಾಟದಲ್ಲಿಯೂ ಕೆಲವು ತೊಡಕುಗಳು ಕಾಣಿಸಿಕೊಂಡಿತು. ಹೀಗಾಗಿ ಸಿದ್ಧಾರ್ಥ ಪೂರ್ಣವಾಗಿ ಅಧೀರರಾಗಿದ್ದಾರು.
ಸಿದ್ಧಾರ್ಥ ಅವರಿಗೆ ಹೊಸ ಸಾಲಗಳು ಹುಟ್ಟುವುದು ಅತ್ಯಂತ ಕಠಿಣವಾಗಿಬಿಟ್ಟಿತ್ತು, ಇದು ಅವರಿಗೆ ಬಹಳವೇ ಇಕ್ಕಟ್ಟಿಗೆ ಸಿಲುಕಿಸಿತ್ತು ಎಂದು ಹೇಳಲಾಗುತ್ತಿದೆ. ಇದೇ ಸಿದ್ಧಾರ್ಥ ಅವರ ಅಂತ್ಯಕ್ಕೆ ಕಾರಣವಾಯಿತೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications