ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟ ನಾಲ್ವರು ಶಾಸಕರು
ಬೆಂಗಳೂರು, ಜೂನ್ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿ ತಲುಪಿದ್ದು, ಸಚಿವ ಸಂಪುಟ ಪುನಾರಚನೆ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಮೊದಲ ಬಾರಿ ಶಾಸಕರಾದವರಿಗೆ ಸಚಿವ ಸ್ಥಾನ ನೀಡದಿರಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ
ದಿಗ್ವಿಜಯ್
ಸಿಂಗ್,
ಆಸ್ಕರ್
ಫರ್ನಾಂಡೀಸ್
ಮತ್ತು
ಮಲ್ಲಿಕಾರ್ಜುನ
ಖರ್ಗೆ
ಅವರ
ಜೊತೆ
ಮಾತುಕತೆ
ನಡೆಸಲಿರುವ
ಸಿದ್ದರಾಮಯ್ಯ
ಅವರು,
ಶುಕ್ರವಾರ
ಕಾಂಗ್ರೆಸ್
ಅಧ್ಯಕ್ಷೆ
ಸೋನಿಯಾ
ಗಾಂಧಿ
ಅವರನ್ನು
ಭೇಟಿ
ಮಾಡಲಿದ್ದಾರೆ.
[ಸಂಪುಟ
ಸೇರಲಿರುವ
ಅದೃಷ್ಟವಂತರು
ಯಾರು?]
ಸಿದ್ದರಾಮಯ್ಯ ಭೇಟಿ ಮಾಡಿದ ಶಾಸಕರು : ಬೆಂಗಳೂರಿನ ಮೂವರು ಶಾಸಕರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಮುಂದಿಟ್ಟಿದ್ದಾರೆ. ಶಾಸಕ ಮುನಿರತ್ನ (ರಾಜರಾಜೇಶ್ವರಿ ನಗರ), ಬೈರತಿ ಬಸವರಾಜು (ಕೆ.ಆರ್.ಪುರಂ), ಎಸ್.ಟಿ.ಸೋಮಶೇಖರ್ (ಯಶವಂತಪುರ) ಅವರು ಗುರುವಾರ ಮಧ್ಯಾಹ್ನ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. [ಯಾರ ಕೈ ತಪ್ಪಲಿದೆ ಸಚಿವ ಸ್ಥಾನ?]
ಮುಖ್ಯಮಂತ್ರಿಗಳ ಗೃಹ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಮುನಿರತ್ನ ಅವರು, 'ಮೂವರು ಶಾಸಕರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದೇವೆ. ಸಿದ್ದರಾಮಯ್ಯ ಅವರು ದೆಹಲಿಗೆ ಬರಬೇಡಿ ಎಂದು ಹೇಳಿದ್ದಾರೆ. ಆದ್ದರಿಂದ, ಹೋಗುತ್ತಿಲ್ಲ' ಎಂದರು. [ಸಂಪುಟ ಪುನಾರಚನೆ : ಎಲ್ಲರ ಚಿತ್ತ ದೆಹಲಿಯತ್ತ!]
ಸಚಿವ
ಸ್ಥಾನದ
ಬಗ್ಗೆ
ಸಿಎಂ
ಮೌನ
:
ಬೆಳ್ತಂಗಡಿ
ಕ್ಷೇತ್ರದ
ಶಾಸಕ
ವಸಂತ
ಬಂಗೇರ
ಅವರು
ಸಚಿವ
ಸ್ಥಾನಕ್ಕಾಗಿ
ಬೇಡಿಕೆ
ಇಟ್ಟಿದ್ದಾರೆ.
ಗುರುವಾರ
ಮಾಧ್ಯಮಗಳ
ಜೊತೆ
ಮಾತನಾಡಿದ
ಅವರು,
'ಕಳೆದ
ವಿಧಾನಸಭೆ
ಚುನಾವಣೆಯಲ್ಲಿ
ನನಗೆ
ಸ್ಪರ್ಧಿಸುವ
ಮನಸಿರಲಿಲ್ಲ.
ಆದರೆ
ಸಿದ್ದರಾಮಯ್ಯ
ಅವರು
ಸಚಿವ
ಸ್ಥಾನ
ನೀಡುವ
ಭರವಸೆ
ನೀಡಿ
ಚುನಾವಣೆಗೆ
ನಿಲ್ಲಿಸಿದರು.
ಆದರೆ,
ಈಗ
ಕೇಳಿದರೆ
ಸಿಎಂ
ಮೌನ
ವಹಿಸಿದ್ದಾರೆ'
ಎಂದು
ದೂರಿದರು.
ಸಚಿವ ಸ್ಥಾನವಿಲ್ಲ : ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಶಾಸಕರು ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರಲು ದೆಹಲಿಗೆ ಬರಬೇಡಿ ಎಂದು ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ. ಎರಡಕ್ಕಿಂತ ಹೆಚ್ಚು ಬಾರಿ ಶಾಸಕರಾದವರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ ಎಂಬುದು ಪಕ್ಷದ ಮೂಲಗಳ ಮಾಹಿತಿ.