ನಿಗಮ-ಮಂಡಳಿ ಪಟ್ಟಿ ಬಿಡುಗಡೆ, ಯಾರಿಗೆ ಯಾವ ಸ್ಥಾನ?
ಬೆಂಗಳೂರು, ನ.24 : ಕೊನೆಗೂ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಪಟ್ಟಿ ಪ್ರಕಟಗೊಂಡಿದೆ. 92 ಪ್ರಮುಖ ನಿಗಮ-ಮಂಡಳಿಗಳ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಂತಿಮಗೊಳಿಸಿ ಸೋನಿಯಾ ಗಾಂಧಿ ಅವರಿಗೆ ನೀಡಿದ್ದರು. ಈ ಪಟ್ಟಿಗೆ ಸೋನಿಯಾ ಗಾಂಧಿ ಅಂತಿಮ ಒಪ್ಪಿಗೆ ನೀಡಿದ್ದಾರೆ.
ಸೋಮವಾರ ಸೋನಿಯಾ ಗಾಂಧಿ ಅವರು ಸಹಿ ಮಾಡಿದ ನಿಗಮ-ಮಂಡಳಿಗಳ ಅಧ್ಯಕ್ಷರ ಪಟ್ಟಿ ಬಿಡುಗಡೆಗೊಂಡಿದೆ. ನಿಗಮ-ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು 18 ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಹೆಚ್ಚು ಆಕಾಂಕ್ಷಿಗಳಿರುವುದರಿಂದ ಈ ನಿರ್ಧಾರವನ್ನು ಹೈ ಕಮಾಂಡ್ ತೆಗೆದುಕೊಂಡಿದೆ.

ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಮತ್ತು ವಸತಿ ಸಚಿವ ಅಂಬರೀಶ್ ಅವರು ತಮ್ಮ ಬೆಂಬಲಿಗರಿಗೆ ನಿಗಮ ಮಂಡಳಿಯಲ್ಲಿ ಸ್ಥಾನಗಳನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಟಾಳ್ ನಾಗರಾಜ್ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತುಗಳು ಹಬ್ಬಿತ್ತು, ಅವರಿಗೂ ಯಾವುದೇ ಸ್ಥಾನ ಸಿಕ್ಕಿಲ್ಲ.
| ಅಧ್ಯಕ್ಷರು | ನಿಗಮ-ಮಂಡಳಿಗಳು |
| ಎಲ್.ಹನುಮಂತಯ್ಯ | ಕನ್ನಡ ಅಭಿವೃದ್ಧಿ ಪ್ರಾಧಿಕಾರ |
| ಎಸ್.ಜಿ.ನಂಜಯ್ಯನ ಮಠ | ಕರ್ನಾಟಕ ಗೃಹ ಮಂಡಳಿ |
| ಪಿ.ಆರ್.ರಮೇಶ್ | ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ |
| ಎಂ.ರಾಮಚಂದ್ರಪ್ಪ | ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ |
| ವಾಸಂತಿ ಶಿವಣ್ಣ | ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ |
| ಎಸ್.ವಿ.ರಾಜೇಂದ್ರ ಸಿಂಗ್ ಬಾಬು | ಕರ್ನಾಟಕ ಚಲನಚಿತ್ರ ಅಕಾಡೆಮಿ |
| ವಿಜಯಲಕ್ಷ್ಮೀ ಅರಸ್ | ಕಂಠೀರವ ಸ್ಟುಡಿಯೊ ನಿಗಮ |
| ರಂಗಸ್ವಾಮಯ್ಯ | ಮದ್ಯಪಾನ ಸಂಯಮ ಮಂಡಳಿ |
| ಮಲ್ಲಾಜಮ್ಮ | ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ |
| ಬಸವರಾಜು | ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ |
| ಜಯಸಿಂಹ | ಜಂಗಲ್ ಲಾಡ್ಜಸ್ |
| ಮಹಮದ್ ಫೌಜ್ದಾರ್ | ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ |
| ಬಲ್ಕೀಸ್ ಬಾನು | ರಾಜ್ಯ ಅಲ್ಪ ಸಂಖ್ಯಾತರ ಆಯೋಗ |
| ಆರ್.ಮೂರ್ತಿ | ವಸ್ತುಪ್ರದರ್ಶನ ಪ್ರಾಧಿಕಾರ |
| ನಾಭಿರಾಜು | ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ |
| ಎಸ್.ಎ.ಹುಸೇನ್ | ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ |
| ಛಾಯಾ ಗೋಳ್ | ಗಡಿ ಅಭಿವೃದ್ಧಿ ಪ್ರಾಧಿಕಾರ |
| ಕೃಷ್ಣಂರಾಜು | ರಾಜ್ಯ ರಸ್ತೆ ಅಭಿವೃದ್ಧಿ ನಿಗಮ |
| ಭಾವನಾ ರಾಮಣ್ಣ | ಬಾಲಭವನ |
| ದಾಕ್ಷಾಯಿಣಿ | ಬಾಲ ವಿಕಾಸ ಮಂಡಳಿ (ಧಾರವಾಡ) |
| ರಾಣಿ ಸತೀಶ್ | ಹಟ್ಟಿ ಚಿನ್ನದ ಗಣಿ ಕಂಪನಿ |
| ಎಸ್.ಎಂ.ಆನಂದ್ | ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ |
| ಮಹಮದ್ ಮುಝಮಿಲ್ | ರಾಜ್ಯ ಸಂಬಾರ ಮಂಡಳಿ |
| ವಿ.ಎಸ್.ಆರಾಧ್ಯ | ರಾಜ್ಯ ಮಾವು ಅಭಿವೃದ್ಧಿ ಮಂಡಳಿ |
| ಶಶಿಕುಮಾರ್ | ರಾಜ್ಯ ನವೀಕರಿಸಬಹುದಾದ ಇಂಧನ ಮೂಲಗಳ ನಿಗಮ (ಕ್ರೆಡಲ್) |
| ಆನಂದಕುಮಾರ್ | ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ |
| ಜೆ.ಸಿ.ಚಂದ್ರಶೇಖರ್ | ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ |
| ಕೆ.ಆರ್.ಮೋಹನ್ ಕುಮಾರ್ | ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ |
| ರೆಹನಾ ಬೇಗಂ | ಮೃಗಾಲಯ ಪ್ರಾಧಿಕಾರ |
| ಅನಂತ | ಬಣ್ಣ ಮತ್ತು ಅರಗು ಕಾರ್ಖನೆ |
| ನಾರಾಯಣ | ರಾಜ್ಯ ಸಫಾಯಿ ಕರ್ಮಚಾರಿ ಆಯೋಗ |
| ಸೋಮಶೇಖರ್ | ಕರ್ನಾಟಕ ಕ್ರೀಡಾ ಪ್ರಾಧಿಕಾರ |
| ಗುರುಚರಣ್ | ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ |
| ಎಂ.ಬಿ.ಸೌದಾಗರ್ | ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ |
| ಭೀಮಣ್ಣ ಸಾಲಿ | ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ |
| ಡಾ.ಲೋಹಿತ್ ಡಿ.ನಾಯ್ಕರ್ | ರಾಜ್ಯ ರಸ್ತೆ ಸಾರಿಗೆ ನಿಗಮ (ಉಪಾಧ್ಯಕ್ಷರು) |
| ಭೀಮಾಶಂಕರ್ | ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಉಪಾಧ್ಯಕ್ಷರು) |
| ಮೋಹನ್ ಅಸುಂಡಿ | ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ಉಪಾಧ್ಯಕ್ಷರು) |












Click it and Unblock the Notifications