ಭಟ್ಕಳ-ಪಾಕಿಸ್ತಾನ ಮದುವೆ ಸಂಬಂಧ ಬೆಸೆದಿದ್ದು ನವಾಯತರು
ಭಾರತದಿಂದ ಪಾಕಿಸ್ತಾನಕ್ಕೆ ಹೋಗುವ ಪ್ರತಿ ದೂರವಾಣಿ ಕರೆ ಮೇಲೆ ಗೂಢಚಾರರು ಹದ್ದಿನ ಕಣ್ಣಿಟ್ಟಿರುತ್ತಾರೆ. ಆದರೆ, ಇಂದು ಉಗ್ರರ ನೆಲೆವೀಡು ಎಂಬಂತೆ ನೋಡಲಾಗುತ್ತಿರುವ ಭಟ್ಕಳದಲ್ಲಿ ಹಲವರು ಪಾಕಿಸ್ತಾನೀಯರ ಜೊತೆ ಮದುವೆ ಸಂಬಂಧ ಹೊಂದಿದ್ದಾರೆ. ಈ ಸಂಪ್ರದಾಯ ಹಲವು ದಶಕಗಳಿಂದ ನಡೆದುಬರುತ್ತಿದೆ.
ಸೈಯದ್ ಇಸ್ಮೈಲ್ ಅಫಾಕ್ ಪಾಕಿಸ್ತಾನದ ಮಹಿಳೆಯನ್ನು ಮದುವೆಯಾಗಿದ್ದಾನೆ. ಹಲವು ಬಾರಿ ಪಾಕಿಸ್ತಾನಕ್ಕೆ ಕರೆ ಮಾಡಿದ್ದಾನೆ. ಇದು ಗೂಢಚಾರರ ಗಮನ ಸೆಳೆದಿದೆ.
ಭಟ್ಕಳದಲ್ಲಿ ಹೆಚ್ಚಾಗಿ ಹಿಂದೂಗಳು, ಮುಸ್ಲಿಮರು, ನವಾಯತರು ಹಾಗೂ ಜೈನರು ಇದ್ದಾರೆ. ಇಲ್ಲಿ 60 ಮಸೀದಿಗಳು, ದೇಗುಲಗಳು ಮತ್ತು ಬಸದಿಗಳಿವೆ. [ಶಂಕಿತರಿಂದ ಬಯಲಾಗುತ್ತಾ ಉಗ್ರರ ಜಾಲ?]

ವ್ಯಾಪಾರಕ್ಕೆ ಬಂದು ನೆಲೆನಿಂತ ನವಾಯತರು : ಈ ಕರಾವಳಿ ಪ್ರದೇಶಕ್ಕೆ ಪರ್ಶಿಯನ್ನರು, ಅರಬ್ಬರು ಸೇರಿದಂತೆ ಹಲವು ವಿದೇಶೀಯರು 1,000 ವರ್ಷಗಳಿಂದಲೂ ಭೇಟಿ ನೀಡಿ ವಾಣಿಜ್ಯ ಚಟುವಟಿಕೆ ನಡೆಸಿದ್ದಾರೆ. ಹಲವು ಅರಬ್ ವ್ಯಾಪಾರಿಗಳು ಭಟ್ಕಳದಲ್ಲಿ ನೆಲೆನಿಂತು ತಮ್ಮನ್ನು ನವಾಯತರೆಂದು ಕರೆದುಕೊಂಡರು. ಇವರು ಪಾಕಿಸ್ತಾನ, ಶ್ರೀಲಂಕಾ, ನೆಲ್ಲೋರ್ ಹಾಗೂ ಆರ್ಕಟ್ನಲ್ಲೂ ಕಂಡುಬರುತ್ತಾರೆ. [ಬೆಂಗಳೂರಲ್ಲಿ ಮತ್ತಿಬ್ಬರು ಶಂಕಿತರು ವಶಕ್ಕೆ]
ನವಾಯತರು ಭಟ್ಕಳದಲ್ಲಿ ನೆಲೆನಿಂತರೂ ಸ್ಥಳೀಯ ಸಂಪ್ರದಾಯ ಪಾಲಿಸಲಿಲ್ಲ. ತಮ್ಮದೇ ಜೀವನಶೈಲಿ ಮುಂದುವರಿಸಿದರು. ತಮ್ಮದೇ ಕೇರಿ ಸ್ಥಾಪಿಸಿಕೊಂಡರು. ಅವರ ಭಾಷೆಗೂ ನವಯತಿ ಎಂದೇ ಹೆಸರಿದೆ. ಈ ಭಾಷೆಯಲ್ಲಿ ಪರ್ಶಿಯನ್, ಅರೇಬಿಕ್, ಕೊಂಕಣಿ, ಉರ್ದು, ಕನ್ನಡ ಮತ್ತು ಮಳಯಾಳಂ ಶಬ್ದಗಳು ಹೇರಳವಾಗಿ ಕಂಡುಬರುತ್ತವೆ.
ಭಟ್ಕಳದಲ್ಲಿರುವ ನವಾಯತರು ಪಾಕಿಸ್ತಾನದಲ್ಲಿನ ನವಾಯತರೊಂದಿಗೆ ಮದುವೆ ಸಂಬಂಧ ಹೊಂದಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.
ಎಲ್ಲವನ್ನೂ ಬದಲಿಸಿದ್ದು ದಂಗೆ : ಭಟ್ಕಳದಲ್ಲಿ 1993ರಲ್ಲಿ ನಡೆದ ಬಹುದೊಡ್ಡ ದಂಗೆಯು ಪಾಕಿಸ್ತಾನವನ್ನು ಸೆಳೆಯಿತು. ಆ ನಂತರವೇ ಐಎಸ್ಐ ಏಜೆಂಟ್ಗಳು ಭಟ್ಕಳಕ್ಕೆ ಬಂದರು. ಅವರಿಗೆ ರಿಯಾಜ್ ಭಟ್ಕಳ್ ಬಾತ್ಮೀದಾರನಾಗಿ ಕೆಲಸ ಮಾಡುತ್ತಿದ್ದ. [ಭಟ್ಕಳ ಬಂದ್ ಕರೆ ವಾಪಸ್]
ಆತನಲ್ಲಿದ್ದ ಹಣದ ಹಪಾಹಪಿ ಐಎಸ್ಐನೊಂದಿಗೆ ಸಂಪರ್ಕ ಪಡೆಯುವಂತೆ ಮಾಡಿತು. ಅನಂತರ ಆತ ನಡೆಸಿದ ಎಲ್ಲ ಹಿಂಸಾಚಾರಗಳೂ ಹಣಕ್ಕಾಗಿಯೇ ಆಗಿದ್ದವು ಎನ್ನಲಾಗಿದೆ. [ಹಣ ಉಳಿಸಲು ಹೋಗಿ ಸಿಕ್ಕಿಬಿದ್ದ ರಿಯಾಜ್]
ಆದರೆ ರಿಯಾಜ್ನನ್ನು ಇಷ್ಟಪಡುತ್ತಿದ್ದ ಇತರರು ಸೇರಿ ಇಂಡಿಯನ್ ಮುಜಾಹಿದೀನ್ ಸ್ಥಾಪಿಸಿದರು. ಭಟ್ಕಳದಲ್ಲಿ ಕೆಲವರು ತಪ್ಪಿತಸ್ಥರಿದ್ದಾರೆ. ಆದರೆ, ಆದರೆ, ಸಂಪೂರ್ಣ ಸಮುದಾಯ ಉಗ್ರವಾದಿಗಳಲ್ಲ ಎಂಬುದು ಸ್ಥಳೀಯರ ವಾದ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications