ಮನೆ ಕೆಲಸ ಮಾಡುವ ಶಾಲಿನಿ ಮೇರು ಸಾಧನೆಗಿಲ್ಲ ಸಾಟಿ
ಬೆಂಗಳೂರು,ಮೇ 20: ಓದಿ ಸಾಧಿಸಲೇಬೇಕು ಎಂಬ ಮಹತ್ವಾಕಾಂಕ್ಷೆಗೆ ಪರಿಶ್ರಮ ಎಂಬ ಟಾನಿಕ್ ಸಿಕ್ಕರೆ ಎಂಥ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ದ್ವಿತೀಯ ಪಿಯುಸಿಯಲ್ಲಿ ಶೇ.85 ಅಂಕ ಪಡೆದ ರಾಜಾಜಿನಗರದ ಮರಿಯಪ್ಪನಪಾಳ್ಯದ ಶಾಲಿನಿ ನಿದರ್ಶನ.
ತಮ್ಮನಿಗೆ ಮಾರಕ ಕಾಯಿಲೆ ಕ್ಯಾನ್ಸರ್ ಬಾಧಿಸುತ್ತಿದೆ, ತಂದೆ ಹಾಸಿಗೆ ಹಿಡಿದು ಅದಾವುದೋ ಕಾಲವಾಯಿತು. ತಾಯಿ ಜತೆ ಮನೆ ಮನೆಯ ಮುಸುರೆ ತಿಕ್ಕಿದರೆ ಮಾತ್ರ ಹೊಟ್ಟೆ ಚೀಲ ತುಂಬುತ್ತದೆ. ಇಂಥ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತ ಬಾಲಕಿಯ ಕಣ್ಣಲ್ಲಿನ ಹೊಳಪು ಯಾವ ನಕ್ಷತ್ರಕ್ಕೂ ಕಡಿಮೆಯಿಲ್ಲ. ಇಂಜಿನಿಯರ್ ಆಗಬೇಕು ಎಂಬ ಕನಸು ಹೊತ್ತ ಬಾಲಕಿಗೆ ದೊಡ್ಡ ಮನೆ ಕಟ್ಟಿ ಅದರಲ್ಲಿ ತನ್ನ ತಾಯಿಯನ್ನು ರಾಣಿಯಂತೆ ನೋಡಿವ ಆಸೆ.[ದ್ವಿತೀಯ ಪಿಯು ಫಲಿತಾಂಶ : ವಿದ್ಯಾರ್ಥಿಗಳ ಯಶಸ್ಸಿನ ಕಥೆ]

ಮಹಾನಗರಲ್ಲಿರುವ ಈಕೆ ಟಿವಿ ನೋಡಿಲ್ಲ. ಮನೆಯಲ್ಲಿರುವ ಟಿವಿ ಮೂಲೆ ಸೇರಿ ಧೂಳು ಹಿಡಿದು ಕೂತಿದೆ. ಟಿವಿ ನೋಡುವುದಕ್ಕೆ ಸಮಯವಿದ್ದರೆ ತಾನೇ. ಆಕೆಯ ದಿನಚರಿಯನ್ನು ಒಮ್ಮೆ ನೋಡಿದರೆ ದಿಗಿಲಾಗುವುದು ಖಂಡಿತ. ಬೆಳಗ್ಗೆ 4.30ರಿಂದ 5.30ವರೆಗೆ ಒಂದು, 5.30-6.30ವರೆಗೆ ಮತ್ತೊಂದು ಮನೆ, 6.30ರಿಂದ 7.30ರವರೆಗೆ ಮಗದೊಂದು ಹೀಗೆ ಐದು ಮನೆಗಳ ಕೆಲಸ ಮುಂಜಾನೆಯಿಂದ ಬೆಳಗಿನವರೆಗೆ ಮಾಡಿದರೆ ನಂತರ ಕಾಲೇಜಿಗೆ ತೆರಳುವುದು. ಮತ್ತೆ ಮನೆಗೆ ಹಿಂದಿರುಗಿದ ನಂತರ ಅಡುಗೆ ಕೆಲಸಕ್ಕೆ ನೆರವಾಗುವುದು. ರಾತ್ರಿ 10 ಗಂಟೆಯಿಂದ ಓದಲು ಕುಳಿತರೆ 1 ಗಂಟೆವರೆಗೆ ನಾನ್ ಸ್ಟಾಪ್.[ಪಿಯು ಟಾಪರ್ ಕುಡ್ಲದ ರಶ್ಮಿತಾ ಜೊತೆ ಚಿಟ್ ಚಾಟ್]
ಪ್ರಾಥಮಿಕ ಶಾಲೆ ತಮಿಳು ಮಾಧ್ಯಮದಲ್ಲಿ, ಹೈಸ್ಕೂಲ್ ಕನ್ನಡ ಮಾಧ್ಯಮದಲ್ಲಿ ಆದರೆ ಇದೀಗ ಶೇ. 85 ಗಳಿಸಿದ್ದು ಆಂಗ್ಲ ಮಾಧ್ಯಮದಲ್ಲಿ. ನಿನಗೆ ಯಾವ ಹಿರೋಯಿನ್ ಇಷ್ಟ ಎಂದು ಕೇಳಿದರೇ 'ನನ್ನ ತಾಯಿಯೇ ನನಗೆ ಹಿರೋಯಿನ್' ಎಂದು ಆಕೆ ನೀಡುವ ಉತ್ತರ ನಮ್ಮ ಮಾತನ್ನು ಅಲ್ಲಿಗೆ ನಿಲ್ಲಿಸುತ್ತದೆ.
ಅಬ್ಬಾ...ಈಕೆ ನಿದ್ರೆ ಮಾಡುತ್ತಿದುದು ಕೇವಲ ಮೂರು ವರೆ ಗಂಟೆ! ಮನೆಯ ನಿರ್ವಹಣೆ, ಕಾಲೇಜಿನ ಓದು ಎಲ್ಲವನ್ನು ಸರಿದೂಗಿಸಿಕೊಂಡು ಈಕೆ ತಾಳ್ಮೆ ಮತ್ತು ಪರಿಶ್ರಮವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆಕೆಯ ಉನ್ನತ ವ್ಯಾಸಂಗದ ಕನಸಿಗೆ ಗುಡ್ ಲಕ್ ಹೇಳುವಷ್ಟಾದರೂ ಔದಾರ್ಯ ತೋರಿಸೋಣ.
-
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ?












Click it and Unblock the Notifications