Get Updates
Get notified of breaking news, exclusive insights, and must-see stories!

ಕೊರೊನಾ ಜಾಗೃತಿ ಮೂಡಿಸಿ ಎಲ್ಲರಂತೆ ಸಾಲಿನಲ್ಲಿ ನಿಂತ ತಹಶೀಲ್ದಾರ್

ದಕ್ಷಿಣ ಕನ್ನಡ, ಮಾರ್ಚ್ 25: ಕೊರೊನಾ ವೈರಸ್ ಹರಡದಂತೆ ಎಷ್ಟೇ ಮಾಹಿತಿ ನೀಡಿದರೂ, ಜನರು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಆದರೆ, ತಾವೇ ಅದನ್ನು ಪಾಲಿಸುವ ಮೂಲಕ ಜನರಿಗೆ ಬೆಳ್ತಂಗಡಿ ತಹಶೀಲ್ದಾರ್ ತಿಳಿ ಹೇಳಿದ್ದಾರೆ.

ಬೆಳ್ತಂಗಡಿ ತಹಶೀಲ್ದಾರರಾದ ಗಣಪತಿ ಶಾಸ್ತ್ರಿಯವರು ಜನರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಿದ್ದಾರೆ. ದಿನಸಿ ಅಂಗಡಿಯಲ್ಲಿ ವಸ್ತುಗಳ ಖರೀದಿ ಸಮಯದಲ್ಲಿ ಸಾಮಾಜಿಕ ಅಂತರ ಬಗ್ಗೆ ಹೇಳಿ, ಜನರು ಸಾಲಿನಲ್ಲಿ, ಒಂದು ಮೀಟರ್ ಅಂತರ ಬಿಟ್ಟು ನಿಲ್ಲುವಂತೆ ತಿಳಿಸಿದ್ದಾರೆ. ತಾವು ಕೂಡ ಎಲ್ಲರಂತೆ ಸಾಲಿನಲ್ಲಿ ನಿಂತಿದ್ದಾರೆ.

ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಪರಿಣಾಮವಾಗಿ ಕೇಂದ್ರ ಸರ್ಕಾರವು‌ ಏಪ್ರಿಲ್ 14 ರವರೆಗೆ 'ಭಾರತ ಲಾಕ್ ಡೌನ್'ಗೆ ಕರೆ ನೀಡಿದೆ. ಬೆಳ್ತಂಗಡಿಯಲ್ಲಿ ಬೆಳಿಗ್ಗೆ 12.00 ಗಂಟೆಯವರೆಗೆ ಜನರಿಗೆ ಅತ್ಯವಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ವಸ್ತುಗಳು ಸಿಗುವುದಿಲ್ಲವೆನೋ ಎನ್ನುವ ಆತಂಕದಲ್ಲಿ ನಾ ಮುಂದೊ, ನೀ ಮುಂದೊ ಎಂದು ಹೊರಟ ಜನಕ್ಕೆ ಗಣಪತಿ ಶಾಸ್ತ್ರಿ ಬುದ್ದಿವಾದ ಹೇಳಿದ್ದಾರೆ.

Belthangady Tahsildar Spreading Awareness About Coronavirus

ಸದ್ಯ, ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ. ಕರ್ನಾಟಕದಲ್ಲಿ 41 ಪಾಸಿಟಿವ್ ಪ್ರಕರಣಗಳು ದೃಢವಾಗಿವೆ. ಹೀಗಾಗಿ ಕೇಂದ್ರ ಸರ್ಕಾರ ಇಡೀ ದೇಶವನ್ನು ಲಾಕ್ ಡೌನ್ ಮಾಡುವ ನಿರ್ಧಾರವನ್ನು ನಿನ್ನೆ ತಿಳಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+