ಬಿಜೆಪಿ ಮತ್ತು ಆರ್. ಎಸ್. ಎಸ್ ವಿಷದ ಹಾವು ಇದ್ದಂತೆ ಎಂದ ಖರ್ಗೆ ವಿರುದ್ಧ ಯತ್ನಾಳ್‌ ಕಿಡಿ

ವಿಜಯಪುರ,ನವೆಂಬರ್‌ 19: ಬಿಜೆಪಿ ಮತ್ತು ಆರ್. ಎಸ್. ಎಸ್ ವಿಷದ ಹಾವು ಇದ್ದಂತೆ. ಈ ವಿಷಕಾರಿ ಹಾವು ಕಚ್ಚಿದರೆ ವ್ಯಕ್ತಿ ಸತ್ತೇ ಹೋಗುತ್ತಾನೆ. ಹೀಗಾಗಿ ಈ ವಿಷಕಾರಿ ಹಾವನ್ನು ನೀವು ಸಾಯಿಸಬೇಕು ಎಂದು ಎ. ಐ. ಸಿ. ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್‌ಟರದ ಸಾಂಗಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರಿಯಾಂಕ ಖರ್ಗೆ ಎಂಬ ಬುದ್ಧಿವಂತ ರಾಜಕಾರಣಿ ಕರ್ನಾಟಕದಲ್ಲಿದ್ದಾರೆ. ರಜಾಕರು ಮುಸ್ಮಿಮರಲ್ಲ ಎಂದು ಹೇಳುತ್ತಾರೆ. ಅವರೇನು ಲಿಂಗಾಯಿತರಾ? ಎಂದು ಅವರು ಪ್ರಶ್ನಿಸಿದರು.

Basavanagouda Patil Has Made A Promise Against AICC President Mallikarjun Kharge

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅರಿವು ಮುರಿವು ಹಿಡಿದಿದೆ. ಒಬ್ಬ ರಾಷ್ಟ್ರೀಯ ಅಧ್ಯಕ್ಷರಾಗಿ ಹೇಗೆ ಮಾತನಾಡಬೇಕೆಂಬ ಕಾಮನ್ ಸೆನ್ಸ್ ಇಲ್ಲ. ಆರ್. ಎಸ್. ಎಸ್. ಮತ್ತು ಬಿಜೆಪಿ ಇವರಿಗೇನು ಮಾಡಿದೆ? ರಜಾಕರು ತಮ್ಮ ತಾಯಿಯನ್ನು ಹೊಡೆದರೂ ಮುಸ್ಲಿಮರ ಪರ ಏಜೆಂಟರಂತೆ ನಿಂತಿರುವುದು ದೇಶದ ದುರ್ದೈವ ಎಂದು ಅವರು ಹೇಳಿದರು.

ಇಂಥ ದಲಿತರ ಹೆಸರನ್ನು ಹೇಳಿಕೊಂಡು ಜೀವನ ಮಾಡುತ್ತಿರುವ ಖರ್ಗೆ ಕಂಪನಿ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ದ್ರೋಹ ಮಾಡಿದ್ದಾರೆ. ಬಾಬಾಸಾಹೇಬ ದಲಿತರು ಎಂದೂ ಕಾಂಗ್ರೆಸ್ಸಿಗೆ ಸೇರಬಾರದು ಎಂದು ಹೇಳಿದ್ದರು. ಕಾಂಗ್ರೆಸ್ ಒಂದು ವಿಷದ ನಾಗರ ಹಾವು. ಅದು ದಲಿತರನ್ನು ಉದ್ಧಾರ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ಖರ್ಗೆಯವರು ಇದರ ಉಲ್ಟಾ ಹೇಳುತ್ತಿರುವುದು ಅವರು ಅಂಬೇಡ್ಕರ್ ವಿರೋಧಿ ಎಂಬುದನ್ನು ಪ್ರೂವ್ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ವಾಗ್ದಾಳಿ ನಡೆಸಿದರು.

ವಕ್ಫ್ ವಿಚಾರದಲ್ಲಿ ಬಿಜೆಪಿ ತಂಡಗಳ ಪ್ರವಾಸ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರ ಪ್ರವಾಸ ಅವರು ಮಾಡಲಿ. ನಮ್ಮ ಪ್ರವಾಸ ನಾವು ಮಾಡುತ್ತೇವೆ. ವಿಜಯಪುರದಲ್ಲಿ ಮೂರು ಬಾರಿ ಸಭೆ ಮಾಡಿದ್ದೇವೆ. ಇಲ್ಲಿ ಮುಗಿದು ಹೋಗಿದೆ. ಎಲ್ಲ ಅಂಕಿ-ಸಂಖ್ಯೆ ಸಿಕ್ಕಿವೆ. ನಾವು ತೇರದಾಳದಲ್ಲಿ ಸಭೆ ಮಾಡಬೇಕಿದೆ. ಅಲ್ಲಿನ ಕೆಲವು ಕಾಂಗ್ರೆಸ್ ಏಜೆಂಟರು ಮೊನ್ನೆ ದೇವಸ್ಥಾನದ ಉದ್ಘಾಟನೆ ಸಮಯದಲ್ಲಿ ವಕ್ಫ್ ಮಾತನಾಡಿದರೆ ರಾಜಕಾರಣ ಎಂದು ಹೇಳಿದ್ದಾರೆ. ಹೀಗಾಗಿ ಅಲ್ಲೋಂದು ಸಭೆ ಮಾಡುತ್ತೇವೆ. ಬಾಗಲಕೋಟೆ ಜಿಲ್ಲೆಯ ಬಗ್ಗೆ ಮಾಹಿತಿ ಇಲ್ಲ. ವಿಜಯಪುರದಲ್ಲಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ವಿಜಯಪುರದಲ್ಲಿ ಸರಕಾರಿ ಆಸ್ಪತ್ರೆ, ಪೊಲೀಸ್ ಪರೇಡ್ ಮೈದಾನ, ವಸತಿ ನಿಲಯಗಳು ವಕ್ಫ್ ಎಂದು ಆಗಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಕ್ಫ್ ತಿದ್ದುಪಡಿ ಕಾಯಿದೆ ಮಂಡನೆಯಾದ ಬಳಿಕ ಅದರಲ್ಲಿ ಮತ್ತೆ ಏನೇನು ತಿದ್ದುಪಡಿ ಮಾಡಬೇಕು ಎಂಬುದನ್ನು ಸೇರಿಸಲಾಗುವುದು ಎಂದು ಹೇಳಿದರು.

ಮೊನ್ನೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರು ಬಂದಾಗ ಎಲ್ಲ ಗೊಂದಲ ನಿವಾರಿಸುವುದಾಗಿ ಹೇಳಿದ್ದಾರೆ. ಸವಿಸ್ತಾರವಾದ ವರದಿಯನ್ನು ಮೊದಲ ಹಂತದಲ್ಲಿ ನಾವು ನೀಡುತ್ತೇವೆ. ಎರಡನೇ ಹಂತದಲ್ಲಿ ಪ್ರವಾಸ ಕೈಗೊಂಡ ಬಳಿಕ ವಕ್ಫ್ ಕಾನೂನು ದೇಶದಿಂದ ನಿರ್ಮೂಲನೆ ಆಗುವ ವರೆಗೆ ಹೋರಾಟ ಮಾಡುತ್ತೇವೆ. ವಿಜಯಪುರದ ಯಾವುದೇ ಸರಕಾರಿ ಅಥವಾ ಖಾಸಗಿ ಆಸ್ತಿಯೂ ವಕ್ಫ್ ಸೇರಲು ಬಿಡುವುದಿಲ್ಲ. ಒಂದು ವೇಳೆ ಏನಾದರೂ ರೈತರ ಜಮೀನುಗಳಲ್ಲಿ ಸರಕಾರಿ ಕಚೇರಿಗಳಲ್ಲಿ ತೊಂದರೆ ಮಾಡಿದರೆ ಅದರ ವಿರುದ್ಧವೂ ಹೋರಾಟ ಮಾಡುತ್ತೇವೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+