ಬೆಂಗಳೂರು ನಗರದಲ್ಲಿ ಗರಿಷ್ಠ ಸೆಂ.ಮೀ. ಮಳೆ
ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರು ನಗರದಲ್ಲಿ ಅತಿ ಹೆಚ್ಚು (5 ಸೆಂ.ಮೀ.) ಮಳೆ ಬಿದ್ದಿದ್ದರೆ, ಮಂಡ್ಯ, ಚಾಮರಾಜ ನಗರ ಮಂತಾದೆಡೆ ಕಡಿಮೆ (1 ಸೆಂ.ಮೀ. ) ಮಳೆ ಬಿದ್ದಿದೆ.
ಬೆಂಗಳೂರು, ಮೇ 22: ರಾಜ್ಯಾದ್ಯಂತ ಭಾನುವಾರ ಸಾಧಾರಣ ಮಳೆಯಾಗಿದ್ದ ಬೇಸಿಗೆ ಬಿಸಿಲಿನ ತಾಪವನ್ನು ಕೊಂಚ ಕಡಿಮೆ ಮಾಡಿದೆ.
ಈ ಬಗ್ಗೆ ಹವಾಮಾನ ಇಲಾಖೆಯು ರಾಜ್ಯದ ನಾನಾ ಭಾಗಗಳಲ್ಲಿ ನಗರಗಳಲ್ಲಿ ಬಿದ್ದ ಮಳೆಯ ಪ್ರಮಾಣವನ್ನು ಪ್ರಕಟಿಸಿದ್ದು, ಬೆಂಗಳೂರು ನಗರದಲ್ಲಿ ಅತಿ ಹೆಚ್ಚು (5 ಸೆಂ.ಮೀ.) ಮಳೆಯಾಗಿದ್ದು, ಕೊಡಗು, ಚಾಮರಾಜ ನಗರ, ಬೆಂಗಳೂರಿನ ಎಚ್ಎಎಲ್ ನಲ್ಲಿ ಕಡಿಮೆ (1 ಸೆಂ.ಮೀ. ) ಮಳೆ ಬಿದ್ದಿರುವುದಾಗಿ ತಿಳಿಸಿದೆ.
ಹವಾಮಾನ ಇಲಾಖೆ ಪ್ರಕಟಿಸಿದ ಪ್ರಾಂತ್ಯಾವಾರು ಮಳೆ ಪ್ರಮಾಣ ಈ ರೀತಿಯಲ್ಲಿದೆ.

- ಜಿಕೆವಿಕೆ (ಬೆಂಗಳೂರು ನಗರ) 5 ಸೆಂ.ಮೀ., ಸುಳ್ಯ (ದಕ್ಷಿಣ ಕನ್ನಡ), ಬೆಂಗಳೂರು ನಗರ ತಲಾ 4 ಸೆಂ.ಮೀ.
- ಭಾಗ ಮಂಡಲ, ಪೊನ್ನಂಪೇಟೆ (ಕೊಡಗು), ಸರಗೂರು (ಮೈಸೂರು), ಗೋಪಾಲ ನಗರ (ಬೆಂಗಳೂರು ನಗರ), ಚಿಂತಾಮಣಿ (ಚಿಕ್ಕಬಳ್ಳಾಪುರ) ತಲಾ 3 ಸೆಂ.ಮೀ.
- ಸೋಮವಾರ ಪೇಟೆ (ಕೊಡಗು), ನಂಜನಗೂಡು (ಮೈಸೂರು), ಬೇಗೂರು, ಕೊಳ್ಳೇಗಾಲ (ಚಾಮರಾಜ ನಗರ), ಚಿಂತಾಮಣಿ ಪಿಟಿಒ, ಶಿಡ್ಲಘಟ್ಟ (ಚಿಕ್ಕಬಳ್ಳಾಪುರ), ಮಾಗಡಿ (ರಾಮನಗರ) ತಲಾ 2 ಸೆಂ.ಮೀ
- ಬೆಳ್ತಂಗಡಿ, ಪುತ್ತೂರು (ದಕ್ಷಿಣ ಕನ್ನಡ), ನಾಪೋಕ್ಲು, ಕುಶಾಲನಗರ (ಕೊಡಗು), ಚಾಮರಾಜನ ನಗರ, ಯಳಂದೂರು (ಚಾಮರಾಜ ನಗರ ಜಿಲ್ಲೆ), ಬೆಳ್ಳೂರು, ಹೊನಾಕೆರೆ (ಮಂಡ್ಯ), ಮಂಡ್ಯ ನಗರ, ಹೆಸರು ಘಟ್ಟ, ಯಲಹಂಕ, ಬೆಂಗಳೂರು ಕಿಯಾಲ್, ಬೆಂಗಳೂರು ಎಚ್ ಎಎಲ್ ಎಪಿಗಳಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.
ಮಳೆ ಪ್ರಮಾಣದ ಪಟ್ಟಿಯ ಜತೆಯಲ್ಲೇ, ನಾನಾ ಭಾಗಗಳಲ್ಲಿ ದಾಖಲಾದ ಉಷ್ಣಾಂಶ ಪ್ರಮಾಣವನ್ನೂ ಹವಾಮಾನ ಇಲಾಖೆ ಪ್ರಕಟಿಸಿದೆ.
- ರಾಜ್ಯದ ಕೆಲವೆಡೆ ಮಳೆಯಾಗುತ್ತಿದ್ದರೂ ಉತ್ತರ ಒಳನಾಡಿದ ಹಲವೆಡೆ ಬಿಸಿ ಗಾಳಿಯ ಪ್ರವಾಹ ಮುಂದುವರಿದಿದೆ. ಇದರ ಜತೆಯಲ್ಲೇ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಕೆಲ ಭಾಗಗಳಲ್ಲಿ ಉಷ್ಣಾಂಶ ಹೆಚ್ಚಾಗಿಯೇ ಇತ್ತು.
- ಭಾನುವಾರ ಹಾಗೂ ಸೋಮವಾರ (ಮೇ 21 ಹಾಗೂ ಮೇ 22) ಕಲಬುರಗಿಯಲ್ಲಿ ಗರಿಷ್ಠ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. ಭಾನುವಾರ 42.6 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದ್ದರೆ, ಸೋಮವಾರ ಈ ಉಷ್ಣಾಂಶ ಮತ್ತಷ್ಟು ಹೆಚ್ಚಾಗಿ 43.6 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ












Click it and Unblock the Notifications