ಹಾಸನದ ಆಕಾಶವಾಣಿ ಎಫ್ ಎಂಗೆ 25ರ ಸಂಭ್ರಮ
ಹಾಸನ, ಮೇ 04: ಹಾಸನದ ಸಾಲಗಮೆ ರಸ್ತೆಯಲ್ಲಿರುವ ಆಕಾಶವಾಣಿ ಎಫ್ ಎಂ ಕೇಂದ್ರಕ್ಕೆ ಬುಧವಾರ (ಮೇ 04) ಸಂಭ್ರಮದ ದಿನ. ಆಕಾಶವಾಣಿ ಎಫ್ ಎಂ ರೇಡಿಯೋ ಕೇಂದ್ರ ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಖುಷಿ.
ಕರ್ನಾಟಕದ ಎರಡನೇ ಎಫ್ ಎಂ ಕೇಂದ್ರವಾಗಿ 1991ರ ಮೇ 04ರಂದು ಹಾಸನದಲ್ಲಿ ಈ ಕೇಂದ್ರ 102.2 ಕಂಪನಾಂಕಗಳೊಂದಿಗೆ ಆರಂಭವಾಯಿತು. ಹಾಸನದ ಸಾಂಸ್ಕೃತಿಕ ಭಾಗವಾಗಿರುವ ಹಾಸನ ಎಫ್ ಎಂ ಕೇಂದ್ರ ಬೆಳ್ಳಿ ಹಬ್ಬದ ಸಂಭ್ರಮವನ್ನು ವಿಶಿಷ್ಟವಾಗಿ ತನ್ನ ಶೋತೃಗಳೊಡನೆ ಆಚರಿಸಲು ಮುಂದಾಗಿದೆ.
ಆಕಾಶವಾಣಿ ಎಂದ ಮೇಲೆ ನಾಟಕಗಳನ್ನು ಕೇಳಿಸಿಕೊಳ್ಳುವುದು ಒಂದು ಅದ್ಭುತ ಅನುಭವ. ಮೇ 4ರಂದು ರಾತ್ರಿ 9.30ಕ್ಕೆ ಹಾಗೂ ಮೇ 5ರಂದು ರಾತ್ರಿ 10.30ಕ್ಕೆ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ನಾಟಕಗಳನ್ನು ಬಿತ್ತರಿಸಲಾಗುತ್ತದೆ.

ಮೇ 6ರಂದು ರಾಷ್ಟ್ರೀಯ ಪುರಸ್ಕೃತ ನಾಟಕ ಅದ್ಯಮ್ಯ (ಜ ಹೋ ನಾರಾಯಣ ಸ್ವಾಮಿ ರಚನೆ ಹಾಗೂ ಎ.ಆರ್ ಗೋಪಾಲ ನಾಯಕ್ ನಿರ್ಮಾಣ ಹಾಗೂ ನಿರ್ದೇಶನ) ಕೇಳಿಸಿಕೊಳ್ಳಬಹುದು.

ಜತೆಗೆ ಕೇಳುಗರೊಂದಿಗೆ ನೇರ ಸಂವಾದ, ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ, ಪತ್ರಗಳನ್ನು ಆಧಾರಿಸಿ ಕಾರ್ಯಕ್ರಮ, ಏನಂತೆರಿ-ಚಿನ್ನ ಏಕೆ ಚೆನ್ನ ಎಂಬ ಮಹಿಳಾ ಕಾರ್ಯಕ್ರಮ, ನೇರ ಫೋನ್ ಇನ್ ಕಾರ್ಯಕ್ರಮ, ಕಿಸಾನ್ ವಾಣಿಯಲ್ಲಿ ರೈತರೊಡನೆ ನೇರ ಸಂವಾದ ಕಾರ್ಯಕ್ರಮವಿದೆ. ವರ್ಷವಿಡಿ ಬೆಳಗ್ಗೆ 6.50ಕ್ಕೆ ನಿತ್ಯ ಸಂಜೀವಿನಿ ಆರೋಗ್ಯ ಕಾರ್ಯಕ್ರಮವನ್ನು ಧರ್ಮಸ್ಥಳ ಮಂಜುನಾಥ ಆಯುರ್ವೇದ ಮಹಾವಿದ್ಯಾಲಯ ಪ್ರಾಯೋಜಿಸಿದೆ.

ಮಲಬಾರ್ ಗೋಲ್ಡ್ ಅರ್ಪಿಸುವ ಚಿನ್ನದಂಥ ಹಾಡುಗಳ ಜೊತೆಗೆ ಹಲವು ಜನಪ್ರಿಯ ಕಾರ್ಯಕ್ರಮಗಳು ಕೇಳುಗರನ್ನು ತಲುಪಲಿದೆ. ಹಾಸನದ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಕಲೆ, ಶೈಕ್ಷಣಿಕ ಕಾರ್ಯಕ್ರಮಗಳ ವರದಿ ಮಾಡುತ್ತಾ ಬಂದಿರುವ ಎಫ್ ಎಂ ಕೇಂದ್ರಕ್ಕೆ ಒನ್ ಇಂಡಿಯಾ ಕನ್ನಡ ತಂಡದಿಂದಲೂ ಶುಭ ಹಾರೈಕೆಗಳು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ













Click it and Unblock the Notifications