ಕರ್ನಾಟಕದ ಈ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿದೆ ಟಾಟಾ-ಏರ್ಬಸ್ ಹೆಲಿಕಾಪ್ಟರ್ ಉತ್ಪಾದನಾ ಘಟಕ
ಬೆಂಗಳೂರು, ಮೇ 27: ನಾಗರಿಕರಿಗೆ ಏರ್ಬಸ್ ಸೌಲಭ್ಯ ನೀಡುವ H125 ಹೆಲಿಕಾಪ್ಟರ್ಗಳ ಉತ್ಪಾದನೆಯು ಭಾರತದ ಕರ್ನಾಟಕದಲ್ಲಿ ನಡೆಯಲಿದೆ. ಈ ಸಂಬಂಧ ಹೊಸ ಉತ್ಪಾದನಾ ಘಟಕ ನಿರ್ಮಿಸಲಾಗುತ್ತದೆ. ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಈ ವಿಚಾರದಲ್ಲಿ ಕರ್ನಾಟಕ ಹೊಸ ಘಟಕ ಸ್ಥಾಪಿಸಲು ಎಲ್ಲ ಸಂಪನ್ಮೂಲ ಹೊಂದಿದೆ. ಪ್ರಮುಖ ಏರ್ಬಸ್ ಮತ್ತು ಟಾಟಾ ಸಮೂಹದ ಏರೋಸ್ಪೇಸ್ ಅಂಗವಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ (TASL) ಈ ಘಟಕ ಸ್ಥಾಪಿಸಲು ಮುಂದೆ ಬಂದಿದೆ.
ಕರ್ನಾಟಕದ ಕೋಲಾರದಲ್ಲಿ H125 ಹೆಲಿಕಾಪ್ಟರ್ಗಳಿಗಾಗಿ ಫೈನಲ್ ಅಸೆಂಬ್ಲಿ ಲೈನ್ (FAL) ಉತ್ಪಾದಿಸಲು ಘಟಕ ಸ್ಥಾಪಿಸಲಾಗುತ್ತದೆ. ಈ ಮೂಲಕ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಲಾಗುತ್ತದೆ. ನಾಗರಿಕರಿಗೆ ಸೇವೆ ಒದಗಿಸುವ ಏರ್ಬಸ್ ಹೆಲಿಕಾಪ್ಟರ್ಗಳು ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ತಯಾರಾಗುತ್ತವೆ ಎಂಬುದು ಹೆಮ್ಮೆಯ ಸಂಗತಿ.

ಈ ಹೊಸ ಘಟಕವು ಭಾರತದ ಮೊದಲ ಖಾಸಗಿ ನೇತೃತ್ವದೊಂದಿಗೆ ನಿರ್ಮಿಸಲಾಗುತ್ತಿರುವ ಹೆಲಿಕಾಪ್ಟರ್ ಅಸೆಂಬ್ಲಿ ಸೌಲಭ್ಯ ಎನ್ನಲಾಗಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವೇ ಆಗಿದೆ. ಈ ಮೂಲಕ ಭಾರತ ಏರೋಸ್ಪೇಸ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದಂತಾಗುತ್ತದೆ.
ವರ್ಷಕ್ಕೆ 10 ಹೆಲಿಕಾಪ್ಟರ್ ತಯಾರಿಕೆ
ಟಾಟಾ ಒಡೆತನದ ಕಂಪನಿಯು ನಾಗರಿಕ ಸ್ನೇಹಿ ಏರ್ಬಸ್ನ ಅತ್ಯುತ್ತಮ ಮಾರಾಟವಾದ H125 ಹೆಲಿಕಾಪ್ಟರ್ ತಯಾರಿಸುತ್ತದೆ. ಅವುಗಳನ್ನು ಭಾರತ ಮತ್ತು ನೆರೆಯ ದೇಶಗಳಿಗೆ ಒದಗಿಸುತ್ತದೆ. ವರ್ಷಕ್ಕೆ 10 ಹೆಲಿಕಾಪ್ಟರ್ಗಳನ್ನು ಇಲ್ಲಿ ಉತ್ಪಾದಿಸಲಬಹುದಾಗಿದೆ. ಮುಂದಿನ ಎರಡ ದಶಕಗಳಲ್ಲಿ ಏರೋಸ್ಪೇಸ್ ಉತ್ಪಾದನಾ ವಲಯದಲ್ಲಿ ದಕ್ಷಿಣ ಏಷ್ಯಾದಲ್ಲಿ H125 ವರ್ಗದ 500 ಲಘು ಹೆಲಿಕಾಪ್ಟರ್ ಉತ್ಪಾದಿಸಲಿದೆ.
ಕೋಲಾರ ಜಿಲ್ಲೆಯ ವೆಮೆಗಲ್ ಕೈಗಾರಿಕಾ ಪ್ರದೇಶದಲ್ಲಿ ಈ ಘಟಕೆ ಸ್ಥಾಪನೆ ಆಗಲಿದೆ. ಉಪಗ್ರಹ ಉತ್ಪಾದನಾ ಘಟಕ ಸೇರಿದಂತೆ TASL ನ ಇತರ ಸೌಲಭ್ಯಗಳು ಇವೆ. ಬೆಂಗಳೂರಿನಿಂದ ಎರಡು ಗಂಟೆ ಕ್ರಮಿಸಿದರೆ ತಲುಪುವಷ್ಟು ಸಮೀಪದಲ್ಲಿದೆ. ಈ ಕುರಿತು ಬಂಡವಾಳ ಹೂಡಿಕೆ, ಜಾಗ ಇನ್ನಷ್ಟು ವಿಚಾರಗಳು ಗೌಪ್ಯವಾಗಿರುವ ಕಾರಣ TASL ವಕ್ತಾರರು ಹೆಚ್ಚು ಮಾಹಿತಿ ನೀಡಿಲ್ಲ. ಇತ್ತ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿ ಆಯುಕ್ತ ಮತ್ತು ಕೈಗಾರಿಕಾ ಇಲಾಖೆಯ ನಿರ್ದೇಶಕ ಗುಂಜನ್ ಕೃಷ್ಣ ಅವರು ಪ್ರಶ್ನೆಗಳಿಗೆ ಉತ್ತರಿಸಿಲ್ಲ.
ಕೆಲ ರಾಜ್ಯ ಬಿಟ್ಟು ಕರ್ನಾಟಕದಲ್ಲಿ ಸ್ಥಳ ಆಯ್ಕೆ
ಕರ್ನಾಟಕದಲ್ಲಿನ ಪರಿಸರ ಏರೋಸ್ಪೇಸ್ ಉತ್ಪಾದನೆಗೆ ಪೂರಕವಾಗಿದೆ. ಹೀಗಾಗಿಯೇ ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್ನ ಇತರ ಅನೇಕ ಸ್ಥಳಗಳ ಆಯ್ಕೆ ಮಧ್ಯೆಯು ಕರ್ನಾಟಕದ ಕೋಲಾರವು ಘಟಕ ಸ್ಥಾಪನೆಗೆ ಆಯ್ಕೆ ಮಾಡಲಾಗಿದೆ.
ಕಿಯಾ ಮೋಟಾರ್ಸ್ನ ಉತ್ಪಾದನಾ ಘಟಕ ಸ್ಥಾಪಿಸಿದ ಬಳಿಕ ಆಂಧ್ರದ ಅನಂತಪುರವು ರಾಜ್ಯಕ್ಕೆ ಪ್ರಬಲ ಸ್ಪರ್ಧೆಯೊಡ್ಡಿತ್ತು. ಇದರ ನಡುವೆ ಎಲ್ಲ ವಿಧದ ಸಂಪನ್ಮೂಲ ಇರುವ ರಾಜ್ಯದಲ್ಲಿ ಇಲ್ಲಿ ನಿರ್ಮಿಸಿದರೆ ಒಳಿತು ಎಂಬ ಕಾರಣಕ್ಕೆ ಕೋಲಾರ ಸ್ಥಳ ಅಂತಿಮಗೊಳಿಸಲಾಗಿದೆ.
ಟಾಟಾ ಒಡೆತನದ ಕಂಪನಿಯು ಇದೇ ವೆಮಗಲ್ ಕೈಗಾರಿಕಾ ಪ್ರದೇಶದಲ್ಲಿ ವಿಮಾನ ತಯಾರಿಕೆ ಮತ್ತು ಅಂತಿಮ ಜೋಡಣೆ ಇತರ ಕಾರ್ಯಕ್ಕಾಗಿ ಒಟ್ಟು 7.4 ಲಕ್ಷ ಚದರ ಅಡಿ ಜಾಗ ಸ್ವಾಧೀನ ಮಾಡಿಕೊಂಡಿದೆ. ಇದರಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ, ಪರೀಕ್ಷೆಗಳು, ಹೆಲಿಪ್ಯಾಡ್ ಸ್ಥಾಪನೆ ಎಲ್ಲವು ಸೇರಿವೆ ಎಂದು ತಿಳಿದು ಬಂದಿದೆ.
ಕರ್ನಾಟಕಕ್ಕೆ ಏನೆಲ್ಲ ಲಾಭ
ಹೊಸ ಘಟಕ ಸ್ಥಾಪನೆಯಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕರ್ನಾಟಕ, ಕೋಲಾರ ಜಾಗತಿಕವಾಗಿ ಗುರುತಿಸಿಕೊಳ್ಳುತ್ತದೆ. ಭವಿಷ್ಯದಲ್ಲಿ ಬಂವಡವಾಳ ಹೂಡಿಕೆ ಹೆಚ್ಚಾಗುತ್ತದೆ. ಇನ್ನೂ ಸ್ಥಳೀಯವಾಗಿ ಉತ್ಪಾದನಾ ಸಾಮರ್ಥ್ಯಗಳು ಬಲಗೊಳ್ಳುತ್ತವೆ. ಕೈಗಾರಿಕಾ ಕ್ಲಸ್ಟರ್ಗಳನ್ನು ಅಭಿವೃದ್ಧಿಯಾಗುತ್ತವೆ. ಕೈಗಾರಿಕೆಗಳ ಉತ್ತಮ ಕಾರ್ಯನಿರ್ವಹಣೆ ಸಾಧ್ಯವಾಗುತ್ತದೆ.
ಕೌಶಲ್ಯ ಅಭಿವೃದ್ಧಿ ಹೆಚ್ಚುತ್ತದೆ. ಉತ್ಪಾದನೆಗಳ ಪೂರೈಕೆ ಸರಪಳಿ ಹೂಡಿಕೆ ಸೆಳೆಯುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ. ಜಾಗತಿಕ ಏರೋಸ್ಪೇಸ್ ಉತ್ಪಾದನೆ ವಲಯದಲ್ಲಿ ಭಾರತ ಪ್ರಬಲ ಸ್ಪರ್ಧೆ ಒಡ್ಡುತ್ತದೆ. ಜಿಲ್ಲೆ ವ್ಯಾಪ್ತಿಯಲ್ಲೂ ಒಂದಷ್ಟು ಬದಲಾವಣೆ, ಬೆಳವಣಿಗೆ, ಅಭಿವೃದ್ಧಿ ಆಗಲಿವೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications