Aparna: 2 ವರ್ಷ ಕ್ಯಾನ್ಸರ್ ಜೊತೆ ಹೋರಾಡಿದ ಗಟ್ಟಿಗಿತ್ತಿ
ತನ್ನಲ್ಲಿಯೇ ನೂರಾರು ಸಮಸ್ಯೆಗಳು.. ಆಗಷ್ಟೇ ಕಾಣಿಸಿಕೊಂಡಿದ್ದ ಮಹಾಮಾರಿ ಕಾಯಿಲೆ.. ಇವುಗಳೆನ್ನೆಲ್ಲಾ ಮೆಟ್ಟಿನಿಂತ ಗಟ್ಟಿಗಿತ್ತಿ.. ತಾನು ಕಷ್ಟದಲ್ಲಿದ್ರೂ ಸಹ ಜನರನ್ನು ನಗಿಸಿ ತಾನು ಖುಷಿ ಪಟ್ಟ ಅಪ್ರತಿಮ ಸಾಧಕಿ, ಖ್ಯಾತ ನಿರೂಪಕಿ ಅಪರ್ಣಾ ಗುರುವಾರ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಅತಿಥಿಗಳು, ಅಧ್ಯಕ್ಷರು, ಚೇಂಜ್ ಆಗ್ತಾ ಇದ್ದರು. ಆದರೆ ನಿರೂಪಕಿ ಮಾತ್ರ ಅಪರ್ಣಾ ಅವರೇ ನೆರವೇರಿಸುತ್ತಿದ್ದರು. ಮೈಕ್ ಮುಂದೆ ಬಂದು ಮುಗಳ್ ನಗುತ್ತಾ, ವಚನ ಅಥವಾ ಖ್ಯಾತ ಸಾಹಿತಿಗಳ ಕವನ ವಾಚನ ಮಾಡಿ ಕಾರ್ಯಕ್ರಮ ಆರಂಭಿಸಿದರೆ ಮುಗಿತು, ಕಾರ್ಯಕ್ರಮ ಮುಗಿಯುವ ತನಕವೂ ಇವರ ಇರುವಿಕೆ ವೇದಿಕೆಯ ಮೇಲೆ ಇರುತ್ತಿತ್ತು.

ಸಾವು ಬದುಕಿನ ಹೋರಾಟ
ವೇದಿಕೆಯ ಮೇಲೆ ಫಿಟ್ ಆಗಿ ಕಾಣಿಸಿಕೊಂಡಿದ್ದ ಅಪರ್ಣಾ ಅವರಿಗೆ ಆಗಿದ್ದೇನು ಎಂಬ ಪ್ರಶ್ನೆ ಹಲವರಲ್ಲಿ ಕಾಡದೇ ಇರದು. ಅವರಿಗೆ ಎರಡು ವರ್ಷದ ಹಿಂದೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಕ್ಯಾನ್ಸರ್ ನಾಲ್ಕನೇ ಸ್ಟೇಜ್ನಲ್ಲಿದ್ದಾಗ ನಮಗೆಲ್ಲಾ ತಿಳಿಯಿತು ಎಂದು ಪತಿ ನಾಗರಾಜ್ ಕಣ್ಣೀರು ಇಡುತ್ತಾ ಹೇಳಿದರು.
ವೈದ್ಯರು ಹೇಳಿದ್ದೇನು?
ನಾವು ಅಪರ್ಣಾಳನ್ನು ವೈದ್ಯರಲ್ಲಿ ತೋರಿಸಲು ಹೋದಾಗ ಅವರು, ಇವರು ಬದುಕುವುದು ಕಷ್ಟ. ಹೆಚ್ಚೆಂದರೆ ಇನ್ನು ಆರು ತಿಂಗಳು ಬದುಕ ಬಹುದು ಎಂದು ತಿಳಿಸಿದ್ದರು. ಆದರೆ ಅಪರ್ಣಾ ತನ್ನ ಸಾವು ನೋವಿನ ನರಾಳಟದಲ್ಲಿ ಎರಡು ವರ್ಷ ಕಳೆದು ಬಿಟ್ಟಳು ಎಂದು ಪತಿ ಭಾವುಕರಾದರು.
ಕಳೆದ 2 ಎರಡು ವರ್ಷದಿಂದ ಅಪರ್ಣಾ ಹಾಗೂ ನಾನು ಶಾಸ್ವಕೋಶದ ಕ್ಯಾನ್ಸರ್ ವಿರುದ್ಧ ಹೋರಾಟವನ್ನೇ ನಡೆಸಿದ್ದೇವೆ. ಅವಳು ಕಾಯಿಲೆಯಿಂದ ನರಳಿ ನರಳಿ ಸಂಕಟ ಪಟ್ಟರೆ, ನಾನು ಅವಳ ಅವಸ್ಥೆಯನ್ನು ಕಂಡು ಸಂಕಟ ಪಟ್ಟಿದ್ದೇನೆ. ನಾವಿಬ್ಬರೂ ನಡೆಸಿದ ಹೋರಾಟದಲ್ಲಿ ನಮಗೆ ಸೋಲು ಎದುರಾಗಿದೆ ಎಂದು ಪತಿ ನಾಗರಾಜ್ ತಿಳಿಸಿದರು.
ಅಪರ್ಣಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಎಲ್ಲವೂ ಅಂತಿಮವಾದ ಬಳಿಕ ತಿಳಿಸುತ್ತೇವೆ ಎಂದು ಪತಿ ನಾಗರಾಜ್ ಹೇಳಿದರು.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications