ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ನೇಮಕ ಪ್ರಶ್ನಿಸಿ ಸುಪ್ರೀಂಗೆ ಕಾಂಗ್ರೆಸ್
ಬೆಂಗಳೂರು, ಮೇ 18: ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಕೆಜಿ ಬೋಪಯ್ಯರನ್ನು ರಾಜ್ಯಪಾಲ ವಜೂಭಾಯಿ ವಾಲಾ ನೇಮಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
ಅತ್ಯಂತ ಹಿರಿಯ, 8 ಬಾರಿಯ ಶಾಸಕ ಆರ್. ವಿ. ದೇಶಪಾಂಡೆಯವರನ್ನು ಬದಿಗೊತ್ತಿ 5 ಬಾರಿಯ ಶಾಸಕ ಕೆಜಿ ಬೋಪಯ್ಯರನ್ನು ನೇಮಿಸಿದ್ದಕ್ಕೆ ಕಾಂಗ್ರೆಸ್ ಆಕ್ರೋಶಗೊಂಡಿದ್ದು ಸುಪ್ರೀಂ ಕೋರ್ಟ್ ಈ ಸಂಬಂಧ ದೂರು ನೀಡಲು ನಿರ್ಧರಿಸಿದೆ.
ಶಾ ತಂತ್ರ ಕರ್ನಾಟಕದಲ್ಲಿ ನಡೆಯಲ್ಲ, ನಡೆಯಲೂ ಬಿಡುವುದಿಲ್ಲ: ಸಿದ್ದರಾಮಯ್ಯ
ಈ ಸಂಬಂಧ ದೆಹಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, "ಬಿಜೆಪಿ ನಡೆ ನಿಯಮಾವಳಿಗೆ ವಿರುದ್ಧವಾಗಿದೆ. ಸಾಮಾನ್ಯವಾಗಿ ಅತ್ಯಂತ ಹಿರಿಯ ನಾಯಕರು ಈ ಹುದ್ದೆಯನ್ನು ಅಲಂಕರಿಸಬೇಕು," ಎಂದು ಬೋಪಯ್ಯ ನೇಮಕಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಹಿರಿಯರು
ಬಿಜೆಪಿಯ
ಮುಖ್ಯಮಂತ್ರಿ
ಬಿ.ಎಸ್.
ಯಡಿಯೂರಪ್ಪ,
ಉಮೇಶ್
ಕತ್ತಿ
ಮತ್ತು
ಕಾಂಗ್ರೆಸಿನ
ಆರ್.ವಿ.
ದೇಶಪಾಂಡೆ
8ನೇ
ಬಾರಿ
ವಿಧಾನಸಭೆಗೆ
ಆಯ್ಕೆಯಾಗಿದ್ದಾರೆ.
ಆದರೆ
ಇವರನ್ನೆಲ್ಲಾ
ಬದಿಗೊತ್ತಿ
ರಾಜ್ಯಪಾಲರು
5
ಬಾರಿ
ಶಾಸಕ
ಕೆಜಿ
ಬೋಪಯ್ಯರನ್ನು
ಹಂಗಾಮಿ
ಸಭಾಧ್ಯಕ್ಷರನ್ನಾಗಿ
ನೇಮಕ
ಮಾಡಿದ್ದಾರೆ.