Get Updates
Get notified of breaking news, exclusive insights, and must-see stories!

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಅಂಚೆ ಇಲಾಖೆಯಿಂದ ಹೊಸ ಯೋಜನೆ

ಬೆಂಗಳೂರು, ಏಪ್ರಿಲ್‌ 4: ಕರ್ನಾಟಕದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸಲು ಕರ್ನಾಟಕ ಪೋಸ್ಟಲ್ ಸರ್ಕಲ್ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) 2023 ಎಂಬ ಹೊಸ ಯೋಜನೆಯನ್ನು ಹೊರತಂದಿದೆ.

ಇದರ ಪ್ರಮುಖ ವೈಶಿಷ್ಟ್ಯಗಳೆಂದರೆ ಎರಡು ವರ್ಷಗಳ ಅವಧಿಯಲ್ಲಿ 7.5% ರಷ್ಟು ಸ್ಥಿರ ಬಡ್ಡಿ, ಎರಡು ವರ್ಷಗಳ ಅವಧಿಯಲ್ಲಿ ಗರಿಷ್ಠ ಸೀಲಿಂಗ್ ಮಿತಿ ರೂ 2 ಲಕ್ಷ ಮತ್ತು ಒಂದು ವರ್ಷದ ನಂತರ ಭಾಗಶಃ ಹಿಂಪಡೆಯಬಹುದಾಗಿದೆ.

A new scheme by the Department of Posts for economic empowerment of women

ಸರ್ಕಲ್‌ನ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್, ಎಸ್. ರಾಜೇಂದ್ರ ಕುಮಾರ್ ಮಾಹಿತಿ ನೀಡಿ, ಈ ಯೋಜನೆಯು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣವನ್ನು ತರುವ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿದೆ. ನಾವು ನೀಡುವ 7.5% ಬಡ್ಡಿಯು ಬ್ಯಾಂಕ್‌ಗಳಿಗಿಂತ ಹೆಚ್ಚಾಗಿದೆ ಮತ್ತು ಯೋಜನೆಯು ಜಾರಿಯಲ್ಲಿರುವ ಎರಡು ವರ್ಷಗಳ ಅವಧಿಯಲ್ಲಿ ಸ್ಥಿರವಾಗಿರುತ್ತದೆ. ನಿಮ್ಮ ಹಣ ಯಾವಾಗಲೂ ಅಂಚೆ ಇಲಾಖೆಯಲ್ಲಿ ಸುರಕ್ಷಿತವಾಗಿರುವುದು ದೊಡ್ಡ ಪ್ಲಸ್ ಪಾಯಿಂಟ್ ಎಂದು ತಿಳಿಸಿದ್ದಾರೆ.

ಈ ಯೋಜನೆಯು ಎರಡು ವರ್ಷಗಳ ಅವಧಿಗೆ ಮಾರ್ಚ್ 31, 2025 ರಂದು ಕೊನೆಗೊಳ್ಳುತ್ತದೆ. ಪ್ರತಿ ತ್ರೈಮಾಸಿಕದಲ್ಲಿ ಪಾವತಿಗಳನ್ನು ಮಾಡಲಾಗುತ್ತದೆ. ಕೊನೆಯ ದಿನಾಂಕದಂದು ಯಾರಾದರೂ ಖಾತೆಯನ್ನು ತೆರೆದರೆ, ಖಾತೆದಾರರಿಗೆ ಎರಡು ವರ್ಷಗಳ ಅವಧಿಯು ಪೂರ್ಣಗೊಳ್ಳುವವರೆಗೆ ಅದರ ಪ್ರಯೋಜನಗಳು ಮುಂದುವರಿಯುತ್ತವೆ. ತ್ರೈಮಾಸಿಕ ಆಧಾರದ ಮೇಲೆ ಬಡ್ಡಿಯನ್ನು ಸೇರಿಸಿ ಖಾತೆಗೆ ಜಮಾ ಮಾಡಲಾಗುವುದು ಎಂದರು.

ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ ಸುಧಾಕರ ಜಿ ದೇವಾಡಿಗ ಮಾತನಾಡಿ, ನಾವು ರಾಜ್ಯದಾದ್ಯಂತ 9,613 ಅಂಚೆ ಕಚೇರಿಗಳನ್ನು ಹೊಂದಿದ್ದೇವೆ. ರಾಜ್ಯಾದ್ಯಂತ ಕನಿಷ್ಠ ಒಂದು ಲಕ್ಷ ಮಹಿಳೆಯರು ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ ಎಂದು ನಾವು ಅಂದಾಜಿಸಿದ್ದೇವೆ. ಈ ಯೋಜನೆಯನ್ನು ರಾಜ್ಯದ ಯಾವುದೇ ಅಂಚೆ ಕಚೇರಿಗಳಲ್ಲಿ ತೆರೆಯಬಹುದು ಎಂದು ತಿಳಿಸಿದ್ದಾರೆ.

A new scheme by the Department of Posts for economic empowerment of women

ಮಹಿಳೆ ಅಥವಾ ಹುಡುಗಿ (ಮಗು ಅಪ್ರಾಪ್ತರಾಗಿದ್ದರೆ ಪೋಷಕರಿಂದ) ಯೋಜನೆಯಡಿಯಲ್ಲಿ ಖಾತೆಗಳನ್ನು ತೆರೆಯಬಹುದು. ಆದರೆ ಸತತ ಖಾತೆಗಳ ನಡುವೆ ಮೂರು ತಿಂಗಳ ಅಂತರವಿರಬೇಕು. ಪ್ರತಿ ಖಾತೆಗೆ ಒಂದು ಬಾರಿ ಠೇವಣಿ ಮಾಡಲು ಮಾತ್ರ ಅನುಮತಿಸಲಾಗಿದೆ. ಕನಿಷ್ಠ 1,000 ರೂ ಮತ್ತು 100ರ ಗುಣಕಗಳಲ್ಲಿ ಮೊತ್ತವನ್ನು ಇಡಬಹುದು. ಅದರ ನಂತರ ಆ ಖಾತೆಯಲ್ಲಿ ಯಾವುದೇ ಠೇವಣಿಗಳನ್ನು ಅನುಮತಿಸಲಾಗುವುದಿಲ್ಲ. ಈ ಯೋಜನೆಯಡಿಯಲ್ಲಿ ಖಾತೆದಾರರು ಹೊಂದಿರುವ ಎಲ್ಲಾ ಖಾತೆಗಳಲ್ಲಿ ಅನುಮತಿಸಲಾದ ಗರಿಷ್ಠ ಮೊತ್ತವು 2 ಲಕ್ಷ ರೂ ಆಗಿರುತ್ತದೆ. ಠೇವಣಿ ಮಾಡಿದ ಒಂದು ವರ್ಷದ ನಂತರ, ವ್ಯಕ್ತಿಗೆ 40% ಮೊತ್ತವನ್ನು ಹಿಂಪಡೆಯಲು ಅನುಮತಿ ನೀಡಲಾಗುತ್ತದೆ ಎಂದು ದೇವಾಡಿಗ ಹೇಳಿದರು.

ಮೆಚ್ಯೂರಿಟಿ ಅವಧಿಯ ಮೊದಲು ಖಾತೆಯ ಹಣ ಮುರಿದು ಕೊಳ್ಳಲು ಬರುವುದಿಲ್ಲ. ಖಾತೆದಾರರ ಸಾವು ಮತ್ತು ವ್ಯಕ್ತಿಗಳ ಮಾರಣಾಂತಿಕ ವೈದ್ಯಕೀಯ ಸಮಸ್ಯೆಗಳಂತಹ ಸಂದರ್ಭದಲ್ಲಿ ಆಲೋಚಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಮಂಗಳವಾರ ಮಹಾವೀರ ಜಯಂತಿ ನಿಮಿತ್ತ 24ನೇ ತೀರ್ಥಂಕರ ಭಗವಾನ್ ಮಹಾವೀರರ ಚಿತ್ರ ಪೋಸ್ಟ್ ಕಾರ್ಡ್ ಅನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಎಸ್ ಕುಮಾರ್ ಅವರು ಸೋಮವಾರ ಸಾಮಾನ್ಯ ಅಂಚೆ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಪೋಸ್ಟ್‌ಕಾರ್ಡ್‌ನಲ್ಲಿ ಆಧ್ಯಾತ್ಮಿಕ ನಾಯಕನ ಫೋಟೋಗಳು 'ಬದುಕು ಮತ್ತು ಬದುಕಲು ಬಿಡಿ.' ಎಂಬ ಸಾಲುಗಳು ಇವೆ.

ಜೈನಿಸಂ ಫಿಲಾಟೆಲಿಕ್ ಸೊಸೈಟಿ ಆಫ್ ಇಂಡಿಯಾ ಮತ್ತು ಇಂಡಿಯಾ ಪೋಸ್ಟ್ ಆಯೋಜಿಸಿದ್ದ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸಲು ದಕ್ಷಿಣ ಭಾರತದಾದ್ಯಂತ ಜೈನರು ಆಗಮಿಸಿದ್ದರು. ಶುಭ ದಿನವನ್ನು ಗುರುತಿಸಲು ಇಂದು (ಏಪ್ರಿಲ್ 4) ರಜೆಯನ್ನು ನೀಡಲಾಗುತ್ತದೆ.

ಭಾರತೀಯ ಜೈನ್ ಮಿಲನ್‌ನ ರಾಷ್ಟ್ರೀಯ ಅಧ್ಯಕ್ಷ ಡಿ ಸುರೇಂದ್ರ ಕುಮಾರ್, ಭಾರತೀಯ ಜೈನ ಧರ್ಮದ ಅಂಚೆಚೀಟಿಗಳ ಸಂಗ್ರಹದ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಮಹಾವೀರ್ ಕುಂದೂರು, ಭಾರತವಾರ್ಷಿಯ ದಿಗಂಬರ ಜೈನ ತೀರ್ಥ ಸಂರಕ್ಷಿಣಿ ಮಹಾಸಭಾದ ಕರ್ನಾಟಕ ಕಾರ್ಯಾಧ್ಯಕ್ಷ ವಿಕಾಸ್ ಜೈನ್ ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+