Get Updates
Get notified of breaking news, exclusive insights, and must-see stories!

7th Pay Commission; 7ನೇ ವೇತನ ಆಯೋಗದ ಅವಧಿ 3 ತಿಂಗಳು ವಿಸ್ತರಣೆ

ಬೆಂಗಳೂರು, ಮಾರ್ಚ್. 07: 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸರ್ಕಾರಿ ನೌಕರರರು ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟು ತುಂಬಾ ದಿನಗಳೇ ಆಗಿವೆ. ವರದಿ ಜಾರಿ ಕುರಿತು ಸರ್ಕಾರದಿಂದ ಸ್ಪಷ್ಟವಾದ ಭರವಸೆಗೆ ಆಗ್ರಹಿಸಿ ದೊಡ್ಡ ಸಮಾವೇಶ ಮಾಡಿದ್ದು ಆಯಿತು, ಆದರೂ ಇನ್ನೂ ವರದಿ ಜಾರಿ ಬಗ್ಗೆ ಘೋಷಣೆಯಾಗಿಲ್ಲ.

7ನೇ ವೇತನ ಆಯೋಗದ ವರದಿ ಜಾರಿಗೆ ಕೇಳಿ ಬರುತ್ತಿವ ಒತ್ತಡದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗದ ಅವಧಿ ಮೂರು ತಿಂಗಳು ವಿಸ್ತರಿಸುವ ಸಾಧ್ಯತೆ. ಈಗಾಗಲೇ ಸರ್ಕಾರ 2023ರ ನವೆಂಬರ್‌ನಲ್ಲಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ 15 ತನಕ ವಿಸ್ತರಣೆ ಮಾಡಿದೆ. ಇದು ಇನ್ನೂ ಮೂರು ತಿಂಗಳು ವಿಸ್ತರಣೆಯಾಗುವ ಸಾಧ್ಯತೆಯಿದೆ.

7th Pay Commission Karnataka 7th Pay Commission likely to get 3 months extension

7ನೇ ವೇತನ ಆಯೋಗದ ಅವಧಿ 3 ತಿಂಗಳು ವಿಸ್ತರಣೆ

ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗದ ಅವಧಿ ಮೂರು ತಿಂಗಳು ವಿಸ್ತರಣೆ ಆಗುವ ಸಾಧ್ಯತೆ. ರಾಜ್ಯ ಸರ್ಕಾರ 2023 ರ ನವೆಂಬರ್‌ನಲ್ಲಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 15/3/2024ರ ತನಕ ವಿಸ್ತರಣೆ ಮಾಡಿದೆ. ಆದರೆ ಈಗ ಆಯೋಗದ ವರದಿಯನ್ನು ನೀಡುವಾಗ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ನಿರೀಕ್ಷೆ ಇದೆ. ಅಲ್ಲದೇ ಏಪ್ರಿಲ್‌ 1ರಿಂದ 2024 - 25ನೇ ಸಾಲಿನ ಬಜೆಟ್ ಜಾರಿಗೆ ಬರುವುದರಿಂದ ಆಯೋಗದ ಅವಧಿ 3 ತಿಂಗಳು ವಿಸ್ತರಣೆಯಾಗಲಿದೆ.

ಈಗಾಗಲೇ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ವೇತನ ಹಾಗೂ ಪಿಂಚಣಿಯಲ್ಲಿ ಶೇ 25ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಿದ್ದರು. 7ನೇ ವೇತನ ಆಯೋಗದ ಶಿಫಾರಸ್ಸಿನಿಂದ ವೇತನ ಶ್ರೇಣಿಯಲ್ಲಿ ಸಂಭವಿಸಬಹುದಾದ ಹೆಚ್ಚಳವನ್ನು ಅಂದಾಜಿಸಿ 2024 - 25ನೇ ಸಾಲಿನಲ್ಲಿ ವೇತನ ಹಾಗೂ ಪಿಂಚಣಿಗೆ 1,12,789 ಕೋಟಿ ಅಂದಾಜಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

7th Pay Commission Karnataka 7th Pay Commission likely to get 3 months extension

ಇನ್ನು, 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ 13,000 ಕೋಟಿ ರೂಪಾಯಿಯನ್ನು ಆಯವ್ಯಯದಲ್ಲಿ ಒದಗಿಸಲಾಗಿದ್ದು, ಆಯೋಗದ ವರದಿ ಅನುಸರಸಿ ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಉಂಟಾದರೆ ಪೂರಕ ಅಂದಾಜಿನಲ್ಲಿ ಒದಗಿಸುವ ಭರವಸೆ ನೀಡಿದ್ದಾರೆ. ಹೀಗಾಗಿಯೇ ಮುಂದಿನ ಬಜೆಟ್ ಅಂದಾಜಿನಲ್ಲಿ ಈ ಲೆಕ್ಕವು ಬರಲಿದ್ದು, ಚುನಾವಣೆ ಮತ್ತು ಬಜೆಟ್ ಕಾರಣಕ್ಕೆ ವೇತನ ಆಯೋಗ ವಿಸ್ತರಣೆಯಾಗಲಿದೆ.

ಮುಂದಿನ ವಾರ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು 7ನೇ ವೇತನ ಆಯೋಗದ ಜೊತೆ ಸಭೆ ನಡೆಸುವ ನಿರೀಕ್ಷೆ ಇದೆ ಎಂಬ ಸುದ್ದಿಯೂ ಇದೆ. ಈ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳು ಸಿಎಂಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಸರ್ಕಾರಿ ನೌಕರರ ಸಮಾವೇಶದಲ್ಲಿಯೂ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದರು.

7ನೇ ವೇತನ ಆಯೋಗದ ವರದಿ ಜಾರಿ ಮಾಡದ ಸರ್ಕಾರದ ಮೇಲೆ ನೌಕರರು ಕೆಂಡ ಕಾರುತ್ತಿರುವುದು ಸಮಾವೇಶದ ದಿನವೇ ತಿಳಿದು ಬಂದಿದೆ. ಅನಿರ್ಧಿಷ್ಟಾವಧಿ ಪ್ರತಿಭಟನೆ ಬಗ್ಗೆಯೂ ಗುಸು ಗುಸು ಕೇಳಿ ಬಂದಿತ್ತು. ನೌಕರರು ಮಾರ್ಚ್‌ 1ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ಸಿಎಂಗೆ ಮಾಹಿತಿ ನೀಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+