ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
68ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪದಕಗಳನ್ನು ಪ್ರಕಟಿಸಲಾಗಿದೆ. ಮೂವರು ಅಧಿಕಾರಿಗಳಿಗೆ ವಿಶಿಷ್ಟ ಸೇವಾ ಪದಕ ಸೇರಿದಂತೆ 19 ಮಂದಿ ರಾಜ್ಯ ಪೊಲೀಸರು ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ನವದೆಹಲಿ, ಜನವರಿ 24: 68ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪದಕಗಳನ್ನು ಪ್ರಕಟಿಸಲಾಗಿದೆ. ಮೂವರು ಅಧಿಕಾರಿಗಳಿಗೆ ವಿಶಿಷ್ಟ ಸೇವಾ ಪದಕ ಸೇರಿದಂತೆ 19 ಮಂದಿ ರಾಜ್ಯ ಪೊಲೀಸರು ರಾಷ್ಟ್ರಪತಿಗಳ ಉತ್ತಮ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ, ಎಸಿಬಿ ಐಜಿಪಿ ಡಾ.ಸಲೀಂಗೆ ಹಾಗೂ ತುಮಕೂರು ASP ಮಂಜುನಾಥ್ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ಉತ್ತಮ ಸೇವಾ ಪದಕ
* ಪಿ.ಪಾಪಣ್ಣ - ಡಿಸಿಪಿ, ಬೆಂಗಳೂರು ದಕ್ಷಿಣ
* ಜಯಕುಮಾರ್ - ಎಸಿಪಿ, ಖಡೇಬಜಾರ್, ಬೆಳಗಾವಿ
* ಉದಯ್ ನಾಯ್ಕ್ - ಎಸಿಪಿ, ಮಂಗಳೂರು ಕೇಂದ್ರ ವಲಯ
* ಸಿ.ಆರ್.ರವಿಶಂಕರ್ - ಡಿಎಸ್ ಪಿ, CID ಬೆಂಗಳೂರು
* ಅ್ಯಂಥೋನಿ ಜಾನ್, ಡಿವೈಎಸ್ ಪಿ ಎಸಿಬಿ
* ಎಂ.ಕೆ.ಗಣೇಶ್ - ಕೆಎಸ್ಆರ್ಪಿ, ಬೆಂಗಳೂರು
* ಎಸ್.ಬಿ.ಮಹೇಶ್ವರಪ್ಪ - ಡಿಎಸ್ ಪಿ, ಕೇಂದ್ರ ವಲಯ ಬೆಂಗಳೂರು
* ವ್ಯಾಲೆಂಟೈನ್ ಡಿಸೋಜಾ, ಎಸಿಪಿ, ಮಂಗಳೂರು
* ಪರಶುರಾಮ್ ಎಸ್ ವಡ್ಡರ್ - ಎಸ್ ಐ, ಗುಪ್ತಚರ, ಬೆಂಗಳೂರು
* ಕೆ.ಆರ್.ಸುನಿತಾ - ಎಸ್ ಐ, ಎನ್.ಆರ್.ಪುರ, ಚಿಕ್ಕಮಗಳೂರು
* ಕೆ,ರೀನಾ, ASI, ಬೆಂಗಳೂರು
* ಲಕ್ಷ್ಮಿರಾಜಣ್ಣ, ASI ಮೈಸೂರು
* ಪಿ.ಎಂ.ಸುಬ್ಬಯ್ಯ - ಗುಪ್ತಚರ ಇಲಾಖೆ, ಬೆಂಗಳೂರು
* ಮುರಳೀಧರ ಮಾನೆ, ASI, ಕೆಎಸ್ ಆರ್ ಪಿ ಮೈಸೂರು
* ಕೆ. ಪುಡ್ಡಾ, ASI, ಎನ್.ಆರ್.ಪುರ, ಚಿಕ್ಕಮಗಳೂರು
* ಕೆ.ಹೊನ್ನೆಗೌಡ, ಹೆಡ್ ಕಾನ್ಸ್ ಟೇಬಲ್, ಬೆಂಗಳೂರು
* ಮುಕುಂದ, ಹೆಡ್ ಕಾನ್ಸ್ ಟೇಬಲ್, ಬೆಂಗಳೂರು
* ಸಂಜೀವಯ್ಯನ್ ಸಂಪತ್ ಕುಮಾರ್, ಹೆಡ್ ಕಾನ್ಸ್ ಟೇಬಲ್
(ಒನ್ಇಂಡಿಯಾ ಸುದ್ದಿ)












Click it and Unblock the Notifications