ಕಾಂಗ್ರೆಸ್‌ ಆಡಳಿತಕ್ಕೆ ಬಂದ ನಂತರ ಶೇ.57ರಷ್ಟು ಉದ್ಯೋಗಗಳು ಕಡಿತವಾಗಿದೆ

ಬೆಂಗಳೂರು,ಡಿಸೆಂಬರ್‌ 22: ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಅತಿಹೆಚ್ಚು ಪ್ರಮಾಣದಲ್ಲಿ ರೈತರು ಗುಳೆ ಹೋಗಿದ್ದಾರೆ. ನಿರುದ್ಯೋಗಿಗಳು ಮತ್ತು ಕೌಶಲ್ಯ ವಂಚಿತರಿಗೆ ಅತಿಹೆಚ್ಚು ಪ್ರಮಾಣದಲ್ಲಿ ಉದ್ಯೋಗ ದಯಪಾಲಿಸುವ ರಾಜ್ಯದ ಕೃಷಿ ವಲಯದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬಂದ ನಂತರ ಶೇ.57ರಷ್ಟು ಉದ್ಯೋಗಗಳು ಕಡಿತವಾಗಿದೆ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಬಿಜೆಪಿ ಆಡಳಿತದಲ್ಲಿ ಹೂಡಿಕೆ ಆಕರ್ಷಣೆಯಿಂದ ಹಿಡಿದು ಕುಶಲ ಉದ್ಯೋಗಿಗಳ ಲಭ್ಯತೆಯವರಗೆ ಎಲ್ಲಾ ವಲಯಗಳಲ್ಲೂ ಮುಂಚೂಣಿಯಲ್ಲಿದ್ದ ನಮ್ಮ ರಾಜ್ಯ, ಕಾಂಗ್ರೆಸ್‌ ಬಂದ ಮೇಲೆ ನಿರುದ್ಯೋಗಿಗಳನ್ನು ತಯಾರಿಸುವ ಕಾರ್ಖಾನೆಯಾಗಿದೆ.

57% Jobs Have Been Reduced Since Congress Came To Power Says Karnataka BJP

ಕೇರಳದ ಗಡಿಗಳಲ್ಲಿ ಇರುವ ಕರ್ನಾಟಕದ ಅಷ್ಟೂ ಗ್ರಾಮಗಳ ಕಾರ್ಮಿಕರು ಉದ್ಯೋಗವನ್ನರಸಿ ಪ್ರತಿನಿತ್ಯ ಕೇರಳಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ. ನಿತ್ಯವೂ ನಡೆಯುತ್ತಿರುವ ಈ ವಿದ್ಯಮಾನವನ್ನು ಫ್ರೀಡಂ ಪಾರ್ಕಿನಲ್ಲಿ ಕೂತವರು ಫ್ರೀಯಾದ ಮೇಲೆ ಒಂದು ಬಾರಿಯಾದರೂ ನೋಡಿ ಬರಲೇಬೇಕು. ಉದ್ಯೋಗ ಸೃಷ್ಟಿಗೆ ಬದಲಾಗಿ ನಿರುದ್ಯೋಗ ಸೃಷ್ಟಿ ಮಾಡುತ್ತಿರುವ ಕಾಂಗ್ರೆಸ್‌ ಆಡಳಿತದಲ್ಲಿ ಕಾಂಗ್ರೆಸ್‌ ಪಕ್ಷವೇ ಪ್ರತಿಭಟಿಸುವ ಸ್ವ ವಿಡಂಬನೆ ಏಕೆ ಎಂಬುದಕ್ಕೆ #ATMSarkara ವೇ ಉತ್ತರ ನೀಡಬೇಕು.

ದೇಶದ ಯುವ ಸಮುದಾಯ ಅತಿಹೆಚ್ಚು ಪ್ರಮಾಣದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುತ್ತಿರುವುದು ಕಾಂಗ್ರೆಸ್‌ ಕ್ಕೆ ಆತಂಕ ಮೂಡಿಸುತ್ತಿದೆ. ಇನ್ನೊಂದೆಡೆ ತನ್ನ ಕಾಲದಲ್ಲಿ ಅತಿದೊಡ್ಡ ಸಮಸ್ಯೆಯಾಗಿದ್ದ ನಿರುದ್ಯೋಗ ಈ ಕಾಲದಲ್ಲೂ ಜೀವಂತವಿದೆ ಎಂದು ನಂಬಿದೆ. ಹಾಗಾಗಿ ನಿರುದ್ಯೋಗದ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದೆ.

53 ವರ್ಷಗಳಾದರೂ ಸರಿಯಾದ ಉದ್ಯೋಗ ಸಿಗದೆ, ಈಗ ಅಳೆದುಳಿದಿರುವ ಮೈತ್ರಿಕೂಟದ ಮುಖ್ಯಸ್ಥಿಕೆಯನ್ನೂ ವಹಿಸುವುದಕ್ಕೆ ಸಿಗದೆ ನಿರುದ್ಯೋಗಿಯಾಗಿರುವ ಅವರ ರಾಜಕುವರನ ಹಾಗೆಯೇ ದೇಶದಲ್ಲಿ ಎಲ್ಲರೂ ಕೆಲಸವಿಲ್ಲದೆ ಕೂತಿದ್ದಾರೆ ಎಂಬುದು ಕಾಂಗ್ರೆಸ್ಸಿಗರ ಭಾವನೆ.

ಕಾಂಗ್ರೆಸ್‌ ಹೇಳುವಂತೆ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಅತಿಹೆಚ್ಚು ಪ್ರಮಾಣದಲ್ಲಿ ಇದ್ದಿದ್ದರೆ ಕಾಂಗ್ರೆಸ್‌ ಪಕ್ಷದಲ್ಲಿ ಈಗ ಕಾರ್ಯಕರ್ತರು ತುಂಬಿ ತುಳುಕಬೇಕಿತ್ತು, ಕಾಂಗ್ರೆಸ್ಸೇ ಅತಿದೊಡ್ಡ ಪಕ್ಷವಾಗಬೇಕಿತ್ತು. ಆದರೆ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿರುವ ಜನ ಸ್ವತಃ ನಿರುದ್ಯೋಗಿಗಳನ್ನು ಬೆಂಬಲಿಸುವುದಿಲ್ಲವಾದ ಕಾರಣ ಕಾಂಗ್ರೆಸ್‌ಗೆ ಮೌಲ್ಯಯುತ ಕಾರ್ಯಕರ್ತರದ್ದೂ ಕೊರತೆಯಿದೆ.

57% Jobs Have Been Reduced Since Congress Came To Power Says Karnataka BJP

ಸ್ವತಂತ್ರ ಭಾರತದಲ್ಲೇ ಇದುವರೆಗೆ ಅತಿಹೆಚ್ಚು ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿ, ದಾಖಲೆಯ ಪ್ರಮಾಣದಲ್ಲಿ ರೈಲ್ವೆ ವಿದ್ಯುದೀಕರಣ, ಹೊಸ ಬಂದರು-ವಿಮಾನ ನಿಲ್ದಾಣಗಳ ನಿರ್ಮಾಣಗಳೆಲ್ಲ ನರೇಂದ್ರ ಸರ್ಕಾರದ ಆಡಳಿತದಲ್ಲಿ ನಡೆದಿದೆ ಮತ್ತು ಇದು ಮುಂದಿನ ಎರಡು ದಶಕಗಳ ಕಾಲ ನಿರಂತರ ಪ್ರಕ್ರಿಯೆಗಿರಲಿದೆ. ಇವುಗಳಿಗೆಲ್ಲಾ ಎಷ್ಟು ಮಂದಿ ಉದ್ಯೋಗಿಗಳು ಬೇಕು ಎಂಬ ಪರಿಕಲ್ಪನೆಯೂ ಕಾಂಗ್ರೆಸ್‌ಗೆ ಇಲ್ಲ.

ಕಾಂಗ್ರೆಸ್‌ನ ಯುಪಿಎ ಸರ್ಕಾರದ ಕಾಲದಲ್ಲಿ ಇದ್ದುದಕ್ಕಿಂತ ದುಪ್ಪಟ್ಟಿಗಿಂತಲೂ ಅಧಿಕ, ಅಂದರೆ ವಾರ್ಷಿಕ ₹8400 ಕೋಟಿ ಡಾಲರ್‌ ಮೌಲ್ಯದ ಬಂಡವಾಳ ಹೂಡಿಕೆಯಾಗಿದೆ. ಮುದ್ರಾ ಯೋಜನೆಯೊಂದರಲ್ಲೇ ₹23 ಲಕ್ಷ ಕೋಟಿಯಷ್ಟು ಸಾಲ ನೇರವಾಗಿ ಹೂಡಿಕೆಯಾಗಿರುವುದು ಉದ್ಯೋಗ ಸೃಷ್ಟಿಯ ಮೇಲೆ. ಗ್ರಾಮೀಣ ಮೂಲಸೌಕರ್ಯಕ್ಕಾಗಿ ಮೋದಿ ಸರ್ಕಾರ ವಿನಿಯೋಗಿಸುತ್ತಿರುವ ₹50,000 ಕೋಟಿ ಗ್ರಾಮೀಣ ಭಾರತದಲ್ಲಿ ಹೊಸ ಉದ್ಯೋಗ ಸೃಷ್ಟಿಸಿದೆ.

ಆದರೆ ಕಾಂಗ್ರೆಸ್ ಮಾಡಿರುವುದೆಲ್ಲಾ ಇದಕ್ಕೆ ವಿರುದ್ಧವಾದ ಕಾರ್ಯಗಳು ಎಂಬುದಕ್ಕೆ ಕಳೆದ ಏಳು ತಿಂಗಳಲ್ಲೇ ಸಾಕಷ್ಟು ಸಾಕ್ಷಿ ಸಿಗುತ್ತದೆ. ಅತಿಹೆಚ್ಚು ಪ್ರಮಾಣದಲ್ಲಿ ಉದ್ಯೋಗಾವಕಾಶ ಹೆಚ್ಚಳಕ್ಕೆ ಅನುವು ಮಾಡುವ ಕೈಗಾರಿಕಾ ವಲಯಕ್ಕೆ ಕಾಂಗ್ರೆಸ್‌ ಸರ್ಕಾರ ಕೊಡಲಿ ಪೆಟ್ಟು ನೀಡಿದೆ.

ಲೋಡ್‌ ಶೆಡ್ಡಿಂಗ್‌ ಜತೆಗೆ ವಿದ್ಯುತ್‌ ದರ ಏರಿಕೆಯ ಕಾರಣ ಕರ್ನಾಟಕದ ಕೈಗಾರಿಕೆಗಳೆಲ್ಲಾ ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಂದಷ್ಟು ಉದ್ಯಮಗಳು ವಲಸೆ ಹೋಗಿವೆ, ಹೊಸ ಹೂಡಿಕೆ ಬಂದು ಹೊಸ ಉದ್ಯೋಗ ಸೃಷ್ಟಿಯಂತೂ ಕರ್ನಾಟಕದ ಪಾಲಿಗೆ ಈಗ ಮರೀಚಿಕೆ ಎಂದು ಬಿಜೆಪಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+