ಕರ್ನಾಟಕದಲ್ಲಿ ಮಾರಾಟಕ್ಕಿರುವ BSNL ಆಸ್ತಿಗಳು: ಅಂಕಿಸಂಖ್ಯೆ, ಮಾಹಿತಿ, ಯಾವ ನಗರಗಳಲ್ಲಿ ತಿಳಿಯಿರಿ
ಕೇಂದ್ರ ಸರ್ಕಾರದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL), ಸಾರ್ವಜನಿಕ ವಲಯದ ಘಟಕವು ಕರ್ನಾಟಕದಲ್ಲಿ 14 ಬಳಕೆಯಾಗದ ಸ್ಥಿರಾಸ್ತಿಗಳನ್ನು ಗುರುತಿಸಿದೆ. ಇವುಗಳನ್ನು ಮಾರಾಟಕ್ಕಿಟ್ಟಿದೆ. ಯಾವ ನಗರಗಳಲ್ಲಿ ತಿಳಿಯಿರಿ
ನವದೆಹಲಿ, ಫೆಬ್ರವರಿ 08: ಕೇಂದ್ರ ಸರ್ಕಾರದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL), ಸಾರ್ವಜನಿಕ ವಲಯದ ಘಟಕವು ಕರ್ನಾಟಕದಲ್ಲಿ 14 ಬಳಕೆಯಾಗದ ಸ್ಥಿರಾಸ್ತಿಗಳನ್ನು ಗುರುತಿಸಿದೆ. ಇವುಗಳಿಂದ ಹಣಗಳಿಸಬಹುದು ಎಂದು ದೂರಸಂಪರ್ಕ ಮತ್ತು ಸಂವಹನ ಖಾತೆ ರಾಜ್ಯ ಸಚಿವ ದೇವುಸಿನ್ ಚೌಹಾಣ್ ಬುಧವಾರ ಹೇಳಿದ್ದಾರೆ. ಈ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು. ಬಿಜೆಪಿಯ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಈ ಪ್ರಶ್ನೆಯನ್ನು ಎತ್ತಿದರು.
'ಬಿಎಸ್ಎನ್ಎಲ್ನ ಹಿತದೃಷ್ಟಿಯಿಂದ ಸೂಕ್ತವೆಂದು ಪರಿಗಣಿಸಲಾದ ಕಟ್ಟಡಗಳಲ್ಲಿನ ಖಾಲಿ ಜಾಗವನ್ನು ಅಥವಾ ಭೂಮಿಯನ್ನು ಸಂಪೂರ್ಣವಾಗಿ ಮಾರಾಟ ಮಾಡುವ ಮೂಲಕ ಅಂತಹ ಆಸ್ತಿಗಳಿಂದ ಹಣಗಳಿಸಲು ಸರ್ಕಾರ ಉದ್ದೇಶಿಸಿದೆ. ಸರ್ಕಾರದ ನೀತಿಯ ಪ್ರಕಾರ, BSNL ಭೂಮಿ ಅಥವಾ ಕಟ್ಟಡಗಳನ್ನು ಕೇಂದ್ರ ಸರ್ಕಾರದ ಸಚಿವಾಲಯಗಳು/ಇಲಾಖೆಗಳು, CPSUಗಳು, ಅಧಿಕಾರಿಗಳು, ಭಾರತ ಸರ್ಕಾರ ನಿಯಂತ್ರಿತ ಟ್ರಸ್ಟ್ಗಳು ಮತ್ತು ಸೊಸೈಟಿಗಳು ಇತ್ಯಾದಿಗಳಿಗೆ 30 ವರ್ಷಗಳವರೆಗೆ ಮತ್ತು ಇತರ ಘಟಕಗಳಿಗೆ ಗುತ್ತಿಗೆ ನೀಡಲು ಅಧಿಕಾರವನ್ನು ಹೊಂದಿದೆ' ಎಂದು ತಿಳಿಸಿದ್ದಾರೆ.
BSNL ಸ್ಟೋರ್ ಡಿಪೋ-II, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು ಮತ್ತು BSNL ಟೆಲಿಕಾಂ ಸ್ಟೋರ್ ಯಾರ್ಡ್, ಕದ್ರಿ ಹಿಲ್ಸ್, ಮಂಗಳೂರು - ಕೇವಲ ಎರಡು ಆಸ್ತಿಗಳನ್ನು ಮಾತ್ರ ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್ ಲಿಮಿಟೆಡ್ (MSTC) ಮೂಲಕ ಮಾರಾಟಕ್ಕೆ ಇಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸಚಿವಾಲಯವು ಹಣಗಳಿಸಲು ಉದ್ದೇಶಿಸಿರುವ ಗುರುತಿಸಲಾದ ಆಸ್ತಿಗಳು ಬೆಂಗಳೂರು, ಧಾರವಾಡ, ಬೆಳಗಾವಿ, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮತ್ತು ದಕ್ಷಿಣ ಕನ್ನಡದಲ್ಲಿವೆ.
10 ಕೋಟಿ ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡಲು BSNL ಗೆ ಅಧಿಕಾರ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ. 10 ಕೋಟಿಗಿಂತ ಹೆಚ್ಚು ಮತ್ತು 100 ಕೋಟಿ ರೂ.ವರೆಗಿನ BSNL ನ ಆಸ್ತಿಗಳನ್ನು BSNL ಪುನರುಜ್ಜೀವನಕ್ಕಾಗಿ ರಚಿಸಲಾದ ಮಂತ್ರಿಗಳ ಗುಂಪಿನ (GoM) ಅನುಮೋದನೆಯೊಂದಿಗೆ ಹಣಗಳಿಸಲಾಗುವುದು. 100 ಕೋಟಿಗಿಂತ ಹೆಚ್ಚಿನ ಮೌಲ್ಯದ BSNL ನ ಆಸ್ತಿಗಳನ್ನು ಸಾರ್ವಜನಿಕ ಉದ್ಯಮಗಳ ಇಲಾಖೆ (DPE) ಅಡಿಯಲ್ಲಿ ರಾಷ್ಟ್ರೀಯ ಭೂ ಮಾನಿಟೈಸೇಶನ್ ಕಾರ್ಪೊರೇಷನ್ (NLMC) ಮೂಲಕ ಹಣಗಳಿಸಲಾಗುತ್ತದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸಚಿವ, ದೂರಸಂಪರ್ಕ ಸಚಿವ ಚೌಹಾಣ್, BSNL ಪ್ರಾರಂಭವಾದಾಗಿನಿಂದ 57,671 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ವರದಿ ಮಾಡಿದೆ ಎಂದು ಸದನಕ್ಕೆ ತಿಳಿಸಿದರು.
-
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು











Click it and Unblock the Notifications