ಹಾವೇರಿಯಲ್ಲಿ ಬರ, ಉದ್ಯೋಗ ಸೃಷ್ಟಿಗೆ ದೇಶಪಾಂಡೆ ಭರವಸೆ
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಶೇ.85 ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ಮಾನವ ದಿನಗಳನ್ನು ಹೆಚ್ಚುವರಿ ಸೃಷ್ಟಿ ಮಾಡಲಾಗುವದು, ಸಚಿವ ದೇಶಪಾಂಡೆ ಭರವಸೆ.
ಹಾವೇರಿ, ಡಿಸೆಂಬರ್ 16: ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಶೇ.85 ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ಮಾನವ ದಿನಗಳನ್ನು ಹೆಚ್ಚುವರಿ ಸೃಷ್ಟಿ ಮಾಡಲಾಗುವದು ಎಂದು ಸಚಿವ ಆರ್ ವಿ ದೇಶಪಾಂಡೆ ತಿಳಿಸಿದರು.
ಸಚಿವ ಸಂಪುಟ ಉಪಸಮಿತಿ ಕುರ್ಸಾಪುರ ಗ್ರಾಮದಲ್ಲಿ ಕೆರೆ ಸಂಜೀವಿನಿ ಕಾಮಗಾರಿ ವೀಕ್ಷಿಸಿ ಮಾತನಾಡಿ, ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಪೂರೈಕೆಗೆ ಹಣದ ಕೊರತೆಯಿಲ್ಲ. ಕೆರೆ ಸಂಜೀವಿನಿ ಯೋಜನೆಯಡಿಯಲ್ಲಿ ಜೆಸಿಬಿ ಬಳಕೆಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.[ತುಮಕೂರಿಗೆ ಭೇಟಿ ನೀಡಿದ ಬರ ಅಧ್ಯಯನ ತಂಡ: ಪರಿಶೀಲನೆ]
ಹಾವೇರಿಯಲ್ಲಿ
ಬರ
ಪರಿಶೀಲನೆ
ಬೃಹತ್,
ಮಧ್ಯಮ
ಕೈಗಾರಿಕೆ
ಹಾಗೂ
ಮೂಲಭೂತ
ಸೌಕರ್ಯಗಳ
ಅಭಿವೃದ್ಧಿ
ಸಚಿವ
ಆರ್.ವಿ.ದೇಶಪಾಂಡೆ
ಅಧ್ಯಕ್ಷತೆಯ
ಸಚಿವ
ಸಂಪುಟ
ಉಪಸಮಿತಿಯಿಂದ
ಹಾವೇರಿ
ಜಿಲ್ಲೆಯಲ್ಲಿ
ಬರ
ಪರಿಶೀಲನೆ
ಕಾರ್ಯ
ನಡೆಯಿತು.
ಮುತ್ತಳ್ಳಿ ಗ್ರಾಮದಲ್ಲಿ ಹಿಂಗಾರು ಜೋಳ, ಗೋಧಿ ಬೆಳೆಹಾನಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಮ್ಮ ಹೊಲ ನಮ್ಮ ದಾರಿ ಕಾಮಗಾರಿಗಳು, ತಿಮ್ಮಾಪುರ ಗ್ರಾಮದ ಕೊಳವೆಬಾವಿ ಆಳಗೊಳಿಸುವ ಕಾಮಗಾರಿ, ಎನ್ ಎಂ ತಡಸ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ವೀಕ್ಷಿಸಿದರು.
ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್, ಶಾಸಕರಾದ ಬಸವರಾಜ ಬೊಮ್ಮಾಯಿ, ಸೋಮಣ್ಣ ಬೇವಿನಮರದ, ಜಿಲ್ಲಾಧಿಕಾರಿ ಡಾ.ವೆಂಕಟೇಶ ಉಪಸ್ಥಿತರಿದ್ದರು.