ಮುಳ್ಳುಹಂದಿ ಕೊಂದು ತಿಂದು ಜೈಲು ಸೇರಿದ 'ಟಿಕ್ ಟಾಕ್' ಭೂಪ.!
ಮಾರ್ಚ್ 02, : ಹಾಡುಗಳಿಗೆ ಹೆಜ್ಜೆ ಹಾಕುವುದು, ಅಬ್ಬರದ ಡೈಲಾಗ್ ಗಳಿಗೆ ಡಬ್ ಮಾಡುವುದು, ಜನಪ್ರಿಯ ಸನ್ನಿವೇಶಗಳಿಗೆ ಅಬ್ಬರಿಸಿ, ಬೊಬ್ಬಿರಿಯುವುದು ಟಿಕ್ ಟಾಕ್ ನಲ್ಲಿ ಕಾಮನ್. ಕೆಲವರಂತೂ ಟಿಕ್ ಟಾಕ್ ನಲ್ಲಿ ತಮ್ಮ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಳ್ಳಲು ಮಾಡುವ ಸಾಹಸ ಒಂದೆರಡಲ್ಲ ಬಿಡಿ.
ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಲು ಹೋಗಿ ಕೆಲವರು ಬೆನ್ನು ಮೂಳೆ ಮುರಿದುಕೊಂಡಿದ್ದು, ಪ್ರಾಣಕ್ಕೆ ಅಪಾಯ ತಂದುಕೊಂಡ ಎಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿವೆ. ಹೀಗಿರುವಾಗಲೇ, ಟಿಕ್ ಟಾಕ್ ನಲ್ಲಿ ಫಾಲೋವರ್ಸ್ ಸಂಖ್ಯೆ ಜಾಸ್ತಿ ಮಾಡಿಕೊಳ್ಳುವ ಸಲುವಾಗಿ ಓರ್ವ ವ್ಯಕ್ತಿ ಮುಳ್ಳುಹಂದಿಯನ್ನೇ ಕೊಂದು ತಿಂದಿದ್ದಾನೆ.
ಟಿಕ್ ಟಾಕ್ ವಿಡಿಯೋಗಾಗಿ ವನ್ಯಜೀವಿಯನ್ನ ಕೊಂದು ತಿಂದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದು, ಜೈಲಿನಲ್ಲಿ ಮುದ್ದೆ ಮುರಿಯುವ ಹಾಗಾಗಿದೆ. ಮುಂದೆ ಓದಿರಿ...

ಟಿಕ್ ಟಾಕ್ ಗಾಗಿ ಮುಳ್ಳುಹಂದಿ ತಿಂದ ವ್ಯಕ್ತಿ
ಕಲಬುರ್ಗಿ ಮೂಲದ 25 ವರ್ಷದ ಮಂಜುನಾಥ್ ಬಿರಿಯಾಲ್ಹಿಸ್ಸಾ ಎಂಬ ವ್ಯಕ್ತಿ ಸ್ನೇಹಿತರ ಜೊತೆಗೆ ಸೇರಿಕೊಂಡು ಮುಳ್ಳುಹಂದಿ (ಇಂಡಿಯನ್ ಪಾರ್ಕ್ಯುಪೈನ್) ಯನ್ನ ಕೊಂದು ತಿಂದಿದ್ದಾನೆ. ಬಳಿಕ 18 ಸೆಕೆಂಡ್ ಗಳನ್ನ ವಿಡಿಯೋ ಮಾಡಿ ಟಿಕ್ ಟಾಕ್ ನಲ್ಲಿ ಹಾಕಿದ್ದಾನೆ.

ಮುಳ್ಳುಹಂದಿಯನ್ನ ಕಲ್ಲಲ್ಲಿ ಹೊಡೆದು ಸಾಯಿಸಿದರು
ಕಳೆದ ಶುಕ್ರವಾರ ವಿಜಯಪುರದ ಸಿಂಧಗಿ ಪ್ರದೇಶದಲ್ಲಿ ಮುಳ್ಳುಹಂದಿಯನ್ನ ಹಿಡಿದು, ಮಂಜುನಾಥ್ ಮತ್ತು ಸ್ನೇಹಿತರು ಕಲ್ಲಲ್ಲಿ ಹೊಡೆದು ಸಾಯಿಸಿದ್ದಾರೆ. ಬಳಿಕ ಮುಳ್ಳುಹಂದಿಯ ಮಾಂಸವನ್ನು ಫ್ರೈ ಮಾಡಿಕೊಂಡು ತಿಂದಿದ್ದಾರೆ. ಈ ಬಗ್ಗೆ ಟಿಕ್ ಟಾಕ್ ವಿಡಿಯೋದಲ್ಲಿ ಮಂಜುನಾಥ್ ಮಾತನಾಡಿದ್ದಾನೆ. ವಿಡಿಯೋ ಮೂಲಕ ವಿಷಯ ತಿಳಿದ ಪೊಲೀಸರು ಮಂಜುನಾಥ್ ನ ಬಂಧಿಸಿದ್ದಾರೆ.

ಜೈಲು ಸೇರಿದ ಮಂಜುನಾಥ್
ಜೇವರ್ಗಿ ತಾಲೂಕಿನ ನಿವಾಸಿ ಮಂಜುನಾಥ್ ನ ಅರಣ್ಯ ಅಧಿಕಾರಿಗಳು ಮಾರ್ಚ್ 1 ರಂದು ಟ್ರ್ಯಾಕ್ ಮಾಡಿ ಬಂಧಿಸಿದ್ದಾರೆ. ಟಿಕ್ ಟಾಕ್ ನಲ್ಲಿ ಹೆಚ್ಚು ಲೈಕ್ಸ್ ಮತ್ತು ಹಿಂಬಾಲಕರನ್ನು ಪಡೆಯಲು ಹೋಗಿ, ಮಂಜುನಾಥ್ ಜೈಲು ಸೇರುವಂತಾಗಿದೆ.

ಟಿಕ್ ಟಾಕ್ ಗೀಳು
ವನ್ಯಜೀವಿ ಸಂರಕ್ಷಣಾ ಕಾಯ್ಡೆ 1972 ಅಡಿ ಬರುವ ಮುಳ್ಳುಹಂದಿಯನ್ನು ಬೇಟೆಯಾಡುವುದು, ಕೊಲ್ಲುವುದು ಅಪರಾಧ. ಇಲ್ಲಿಯವರೆಗೂ ಟಿಕ್ ಟಾಕ್ ಗಾಗಿ ಹಲವು ಬಾರಿ ಸಾಹಸ ಪ್ರದರ್ಶಿಸಿ ವಿಡಿಯೋ ಮಾಡಿ ತನ್ನ ಊರಲ್ಲಿ ಫೇಮಸ್ ಆಗಿದ್ದ ಮಂಜುನಾಥ್ ಇದೀಗ ಟಿಕ್ ಟಾಕ್ ಗೀಳಿನಿಂದಾಗಿ ವನ್ಯಜೀವಿಯೊಂದನ್ನ ಕೊಂದಿದ್ದಾನೆ. ಟಿಕ್ ಟಾಕ್ ಗೀಳು ಏನೆಲ್ಲ ಮಾಡಿಸುತ್ತೆ ಅನ್ನೋದಕ್ಕೆ ಇದೊಂದು ಉದಾಹರಣೆ ಅಷ್ಟೇ.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Moodbidri: ಮಹಿಳೆಯರನ್ನು ಮಂಚಕ್ಕೆ ಕರೆದಿದ್ದ ಆರೋಪ: ಮೂಡುಬಿದರೆ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications