ಟಿಪ್ಪು ಜಯಂತಿ: ಕಲಬುರಗಿ ಪೋಲಿಸ್ ಇಲಾಖೆ ಹದ್ದಿನ ಕಣ್ಣು...
ಕಲಬುರಗಿ: ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತೆ ವಹಿಸಿರುವ ಪೊಲೀಸರು ನಿಷೇಧಾಜ್ಞೇ ಘೋಷಿಸಿದ್ದಾರೆ. ಶುಕ್ರವಾರ ನವೆಂಬರ್ 10 ಬೆಳಿಗ್ಗೆ 6 ರಿಂದ ಜಾರಿಬರುವಂತೆ 24 ಗಂಟಗಳ ಕಲ ಕಲಬುರಗಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಟಿಪ್ಪು ಜಯಂತಿ : ಬೆಳಗಾವಿಯಲ್ಲಿ ಮುಸ್ಲಿಂ ಮುಖಂಡರಿಂದ ಬಹಿಷ್ಕಾರ
ಕಾನೂನು ಸುವ್ಯವಸ್ಥೆ ಕಾಪಡುವ ದೃಷ್ಠಿಯಿಂದ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದು, ಪ್ರತಿಭಟನೆ, ಸಭೆ, ಮೆರವಣಿ, ಗುಂಪು ಸೇರುವುದಕ್ಕೆ ನಿರ್ಭಂದ ಹೇರಲಾಗಿದೆ. ಅಷ್ಟೇ ಅಲ್ಲ ಹೋಟೆಲ್, ಬಾರ್ ಮತ್ತು ಪಬ್ ಗಳಲ್ಲಿ ಮದ್ಯ ಮರಾಟ ನಿಷೇಧ ಮಾಡಲಾಗಿದೆ.
In Pics : ಟಿಪ್ಪು ಸುಲ್ತಾನ್ ಯಾರಂತ ಗೊತ್ತಾ ಪುಟ್ಟಾ?
ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಹೆದರಿರುವ ಜನ ಅಂಗಡಿಮುಂಗಡುಗಳನ್ನು ತೆರೆದಿಲ್ಲ. ಶಾಲಾ ಕಾಲೇಜುಗಳಿಗೆ ಸಹಜವಾಗಿಯೇ ರಜೆ ಇರುವುದರಿಂದ ಕಲಬುರ್ಗಿಯಲ್ಲಿ ರಸ್ತೆಗಳು ಭಣಗುಡುತ್ತಿವೆ.
ಮುನ್ನೆಚ್ಚರಿಕಾ ಕ್ರಮವಾಗಿ ನವೆಂಬರ್ 09ರಂದು ಪೊಲೀಸರು ಜಗತ್ ವೃತ್ತದಿಂದ ಸಮರ್ ಮಾರ್ಕೆಟ್ ವರೆಗೆ ಆಯುಧ ಸಮೇತ ಪಥಸಂಚಲನ ನಡೆಸಿದ್ದಾರೆ.