ಮಧುಚಂದ್ರ ನಂತರ ಪತಿ ಕೊಂದ ಪತ್ನಿ
ವಾಷಿಂಗ್ಟನ್, ಸೆ.13: 'ತುಂಬಾ ಸುಂದರವಾದ ಜೋಡಿ ನಿಮ್ಮ ಪ್ರಯಾಣ ಶುಭವಾಗಲಿ' ಎಂದು ಹೋಟೆಲ್ ರೂಮ್ ನವರು ಬೆಳಗ್ಗೆ ಇನ್ನೂ ಬೀಳ್ಕೊಟ್ಟಿದ್ದರು. ಮಧ್ಯಾಹ್ನದ ವೇಳೆಗೆ ಪತ್ನಿಯೊಬ್ಬಳೇ ಓಡಿ ಬಂದು ಪತಿ ನಾಪತ್ತೆ ಅಂದಳು. ಶವವಾಗಿ ಪತ್ತೆಯಾದ ಪತಿ ಹತನಾಗಿದ್ದು ಈಕೆ ಕೈಯಲ್ಲೇ ಎಂದು ತಿಳಿದಾಗ ಬೆಚ್ಚಿ ಬೀಳುವ ಸರದಿ ಎಲ್ಲರದ್ದಾಗಿತ್ತು.
22 ವರ್ಷದ ಜೋರ್ಡನ್ ಲಿನ್ ಗ್ರಾಹಮ್ ತನ್ನ 25 ವರ್ಷದ ಪತಿ ಕೊಡಿ ಲೀ ಜಾನ್ಸನ್ ಅವರನ್ನು ಭೀಕರವಾಗಿ ಕೊಂದಿದ್ದಾಳೆ ಎಂದು ಆರೋಪ ಹೊರೆಸಲಾಗಿದೆ. ಇಬ್ಬರು ಮದುವೆಯಾಗಿ ಇನ್ನೂ ಒಂದು ವಾರ ಕಳೆಯುವುದರೊಳಗೆ ಈ ದುರಂತ ನಡೆದಿದೆ. ಮಧುಚಂದ್ರಕ್ಕೆಂದು ಪತ್ನಿ ಜತೆ ಹೋದ ಪತಿ ಶವವಾಗಿ ಹಿಂತಿರುಗಿದ್ದಾನೆ.
ಪತಿ ನಾಪತ್ತೆಯಾಗಿದ್ದಾನೆ ಎಂದು ರೋದಿಸುತ್ತಿದ್ದ ಜೋರ್ಡನ್ ಮಾತನ್ನು ನಂಬಿ ಎಲ್ಲರೂ ಆಕೆಗೆ ಅನುಕಂಪ ತೋರಿಸಿದ್ದಾರೆ. ಆದರೆ, ವರದಿ ಪ್ರಕಾರ ಮೊಂಟಾನಾದ ಫ್ಲಾಥೆಡ್ ಕೌಂಟಿಗೆ ತೆರಳಿದ್ದ ಈ ಜೋಡಿ ಗ್ಲಾಸಿಯರ್ ನ್ಯಾಷನಲ್ ಪಾರ್ಕ್ ನಲ್ಲಿ ಬೆಟ್ಟ ಹತ್ತಲು ತೆರಳಿದ್ದಾರೆ. ಬೆಟ್ಟ ಹತ್ತಿದ ಮೇಲೆ ಕೊಡಿ ಅವರನ್ನು ಲಿನ್ ಮೇಲಿಂದ ತಳ್ಳಿ ಬಿಟ್ಟಿದ್ದಾರೆ.

ಅನುಕಂಪದ ಅಲೆ ಲಾಭ ಪಡೆದ ಲಿನ್ ತನ್ನ ಸುಳ್ಳು ಕಥೆಯನ್ನು ಮುಂದುವರೆಸುತ್ತಾ ಬಂದಿದ್ದಾರೆ. ಆದರೆ. ಪೊಲೀಸರಿಗೆ ತನಿಖೆ ಮೂಲಕ ಸತ್ಯದ ಅರಿವಾಗಿದೆ. ಲಿನ್ ಕೂಡಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದರೆ ಲಿನ್ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಬೆಟ್ಟದ ತುದಿಯಲ್ಲಿ ಲಿನ್ ಜತೆ ರಸಮಯ ಕ್ಷಣ ಕಳೆಯಲು ಕೊಡಿ ಇಚ್ಛಿಸುತ್ತಾರೆ ಆದರೆ, ಲಿನ್ ಆತನ ಜತೆ ಜಗಳವಾಡುತ್ತಾರೆ. ಮಾತಿಗೆ ಮಾತಿಗೆ ಬೆಳೆದು ಲಿನ್ ಹಿಡಿದು ಕೊಡಿ ಎಳೆಯುತ್ತಾರೆ. ಕೋಪಗೊಂಡ ಲಿನ್ ಆತನನ್ನು ತಳ್ಳುತ್ತಾರೆ. ಬೆಟ್ಟದಿಂದ ಬಿದ್ದ ಕೊಡಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೊಡಿ ಶವವನ್ನು ಪತ್ತೆ ಹಚ್ಚಿದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಕೊಡಿ ಜತೆ ಮದುವೆಯಾಗಲು ಲಿನ್ ಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಜಗಳವಾಡಿಕೊಂಡು ಆಕೆಯೇ ಕೊಲೆಗೈದಿರಬಹುದು ಎಂದು ಸಂಬಂಧಿಕರು ನೀಡಿದ ಹೇಳಿಕೆ ಪೊಲೀಸರಿಗೆ ನೆರವಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications