Ukraine War: ಫ್ರಾನ್ಸ್ ಜೊತೆ ಉಕ್ರೇನ್ ದೊಡ್ಡ ಡೀಲ್, ರಷ್ಯಾ ಜೊತೆಗೆ ಮತ್ತಷ್ಟು ಘೋರ ಯುದ್ಧ ಶುರು?
ರಷ್ಯಾ ಬಾರಿಸುವ ಏಟಿಗೆ ಉಕ್ರೇನ್ ನಲುಗಿ ಹೋಗಿದ್ದು, ಜೀವ ಉಳಿಸಿಕೊಂಡರೆ ಸಾಕಪ್ಪಾ ದೇವರೇ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನೊಂದು ಕಡೆ ರಷ್ಯಾ ಕೂಡ ರೊಚ್ಚಿಗೆದ್ದು ತನ್ನ ಶತ್ರು & ಆಜನ್ಮ ವೈರಿ ಉಕ್ರೇನ್ ವಿರುದ್ಧ ಪದೇ ಪದೇ ದಾಳಿ ಮಾಡುತ್ತಲೇ ಇದೆ. ಹೀಗೆ ಎಲ್ಲಾ ರೀತಿಯ ದಾಳಿ ಮತ್ತು ಪ್ರತಿದಾಳಿ ನಡುವೆ ನಲುಗಿ ಹೋಗಿರುವ ಉಕ್ರೇನ್ ದೇಶದ ಜನರು ದಿಕ್ಕಾಪಾಲಾಗಿ, ಹಲವು ಹೊಸ ಪ್ರದೇಶಗಳಿಗೆ ಓಡಿ ಹೋಗಿದ್ದಾರೆ. ಇಂತಹ ವಾತಾವರಣದಲ್ಲಿ ರಷ್ಯಾ ವಿರುದ್ಧದ ಈ ಯುದ್ಧ ಗೆಲ್ಲಲು ಹೊಸ ಪ್ಲಾನ್ ಹಾಕಿದೆ ಉಕ್ರೇನ್. ಅದರಲ್ಲೂ ಇದೀಗ ಫ್ರಾನ್ಸ್ ಜೊತೆಯಲ್ಲಿ ಮಹತ್ವದ ಒಪ್ಪಂದ ಸಿದ್ಧವಾಗಿದೆ!
ಉಕ್ರೇನ್ ಈಗ ಹೇಗೆ ಆಗಿದೆ ಅಂದ್ರೆ ಯಾರೇ ಬಂದು ಸಹಾಯ ಮಾಡಿದರೂ ಅವರ ಬಳಿ ಸಿಗುವ ಹಣಕ್ಕೆ ಕೈಚಾಚುತ್ತಿದೆ. ಅದರಲ್ಲೂ ಅಮೆರಿಕ ಈಗಾಗಲೇ ಲಕ್ಷಾಂತರ ಕೋಟಿ ರೂಪಾಯಿ ಹಣ ಸೇರಿದಂತೆ ಶಸ್ತ್ರಾಸ್ತ್ರ ಕೊಟ್ಟು ಸಹಾಯ ಮಾಡಿದೆ. ಹೀಗಿದ್ದರೂ ಉಕ್ರೇನ್ಗೆ ಮಾತ್ರ ದಾಹ ನೀಗಿಲ್ಲ. ರಷ್ಯಾ ಜೊತೆಗೆ ಕಳೆದ ಕೆಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬಂದಿರುವ ಉಕ್ರೇನ್ಗೆ ಈಗ ಮತ್ತೆ ಅದರ ಅಗತ್ಯತೆ ಇದ್ದು, ಫ್ರಾನ್ಸ್ ಜೊತೆಗೆ ದಿಢೀರ್ ಮಹತ್ವದ ಒಪ್ಪಂದಕ್ಕೆ ಮುಂದಾಗಿದೆ. ಈ ಮೂಲಕ ರಷ್ಯಾಗೆ ಚಾಲೆಂಜ್ ಹಾಕಲು ಮುಂದೆ ನುಗ್ಗಿದ್ದಾರೆ ಉಕ್ರೇನ್ ಸೇನೆಯ ಯೋಧರು.

ಕೆರಳಿದ ರಷ್ಯಾ, ಮುಂದೇನು ಕಥೆ?
ಫ್ರಾನ್ಸ್ & ಉಕ್ರೇನ್ ನಡುವೆ ನಡೆದಿರುವ ಒಪ್ಪಂದದ ಪ್ರಕಾರ ಇದೀಗ ಒಟ್ಟು 100 ರಫೇಲ್ ಯುದ್ಧ ವಿಮಾನಗಳನ್ನ ಪೂರೈಸಲು ಒಪ್ಪಿಗೆ ಸೂಚಿಸಲಾಗಿದೆ. ಫ್ರಾನ್ಸ್ ದೇಶದ ಸ್ವದೇಶಿ ಯುದ್ಧ ವಿಮಾನ ಎಂದು ಕರೆಸಿಕೊಳ್ಳುವ ರಫೇಲ್ ಫೈಟರ್ ಜೆಟ್ಗಳು ರಷ್ಯಾ ವಿರುದ್ಧ ಹೋರಾಟ ನಡೆಸಲು ಇದೇ ಉಕ್ರೇನ್ ಸೇನೆಗೆ ದೊಡ್ಡ ಸಹಾಯ ಮಾಡಲಿವೆ. ಇನ್ನು ಹೀಗೆ ಫ್ರಾನ್ಸ್ & ಉಕ್ರೇನ್ ನಡುವೆ ನಡೆದ ಒಪ್ಪಂದ ಇದೀಗ ರಷ್ಯಾ ಸೇನೆಯನ್ನ ಕೆರಳಿಸಿ ಕೆಂಡವಾಗಿಸಿದೆ. ಏಕೆಂದರೆ ಈಗಿರುವ ಪರಿಸ್ಥಿತಿಯ ಮಧ್ಯೆ ಫ್ರಾನ್ಸ್ ಈ ಯುದ್ಧದಲ್ಲಿ ಮಧ್ಯಪ್ರವೇಶ ಮಾಡಿದಂತೆ ಆಗಲಿದೆ ಎಂಬ ಆರೋಪವನ್ನ ಕೂಡ ರಷ್ಯಾ ಮಾಡಿದೆ.
ಭವಿಷ್ಯದಲ್ಲೂ ಇದೇ ರೀತಿಯ ಬಡಿದಾಟ?
ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಪದೇ ಪದೇ ಪಾಶ್ಚಿಮಾತ್ಯ ದೇಶಗಳು ಎಂಟ್ರಿ ಕೊಡ್ತಿವೆ. ಈ ವಿಚಾರವಾಗಿ ತಿಕ್ಕಾಟ ಕೂಡ ನಿಂತಿಲ್ಲ, ಇಷ್ಟಾದರೂ ಇದೀಗ ದಿಢೀರ್ ಅಂತಾ ಫ್ರಾನ್ಸ್ ಕೂಡ ಮಧ್ಯಪ್ರವೇಶ ಮಾಡಿ ರಷ್ಯಾಗೆ ಮತ್ತಷ್ಟು ಕೋಪ ಬರುವಂತೆ ಮಾಡಿದೆ. ಇದು ಮುಂದೆ ಏನೆಲ್ಲಾ ಸಮಸ್ಯೆಗೆ ಕಾರಣ ಆಗಬಹುದು? ಅನ್ನೋದನ್ನ ಕಾದು ನೋಡಬೇಕಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications