ಚಿತ್ರಸುದ್ದಿ : ಜನಪ್ರಿಯ ಬೆತ್ತಲೆ ತಾರೆ ಜಿಪ್ಸಿ ಮದುವೆ
ಬೆಂಗಳೂರು, ಡಿ.20: ಸ್ಯಾನ್ ಫ್ರಾನಿಸ್ಕೋದ ಜನಪ್ರಿಯ ಬೆತ್ತಲೆ ಕಾರ್ಯಕರ್ತೆ ಜಿಪ್ಸಿ ಟಾಬ್ ಅವರು ವಿಶಿಷ್ಟವಾಗಿ ಮದುವೆಯಾಗಿದ್ದಾರೆ. ಜೇಮ್ಸ್ ಸ್ಮಿತ್ ಅವರಿಗೆ ನಡು ರಸ್ತೆಯಲ್ಲಿ ಬೆತ್ತಲೆಯಾಗಿ ನಿಂತು ಉಂಗುರ ತೊಡಿಸಿದ್ದಾರೆ.
ಗುರುವಾರ ಸ್ಯಾನ್ ಫ್ರಾನ್ಸಿಸ್ಕೋದ ಸಿಟಿ ಹಾಲ್ ಬಳಿ ಹೀಗೊಂದು ಬೆತ್ತಲೆ ಮದುವೆಗೆ ನೂರಾರು ಮಂದಿ ಸಾಕ್ಷಿಯಾದರು. ಬೆತ್ತಲಾಗಿ ಬೆದರಬೇಡಿ ಎಂದು ಘೋಷಣೆ ಕೂಗಿದ ಜಿಪ್ಸಿ ನನಗೆ ಇಡೀ ಸ್ಯಾನ್ ಫ್ರಾನ್ಸಿಸ್ಕೋ ಜನತೆ ಬೆಂಬಲ ನೀಡುತ್ತದೆ ಎಂಬ ನಂಬಿಕೆ ಇದೆ ಎಂದರು. ಬೆತ್ತಲೆ ದಂಪತಿಗಳ ಮದುವೆಗೆ ಸಾಕ್ಷಿಯಾಗಿ, ಭದ್ರತೆ ಒದಗಿಸಿದ್ದ ಪೊಲೀಸರು ಮದುವೆ ನಂತರ ಇಬ್ಬರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಮೂರು ಮಕ್ಕಳ ತಾಯಿಯಾಗಿರುವ ಜಿಪ್ಸಿ ಅವರು ಹಲವಾರು ಟಿವಿ ಸಂದರ್ಶನಗಳಲ್ಲೂ ಬೆತ್ತಲೆಯಾಗಿ ಕಾಣಿಸಿಕೊಂಡು ಸುದ್ದಿ ಮಾಡಿದ್ದಾರೆ.
ಉಳಿದಂತೆ ಇಂದಿನ ಚಿತ್ರಗಳಲ್ಲಿ ಕ್ರೀಡಾಲೋಕದ ಸುದ್ದಿಗಳು ತುಂಬಿವೆ. ಸಚಿನ್ ದಾಖಲೆ ಮುರಿದ ಶಿವನಾರಾಯಣ್ ಚಂದ್ರಪಾಲ್, ರಾಂಚಿಯಲ್ಲಿ ವಾಹನಗಳನ್ನು ನಜ್ಜುಗುಜ್ಜು ಮಾಡಿದ ಜನತೆ, ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ ಟೆಸ್ಟ್ ಪಂದ್ಯದ ಚಿತ್ರಗಳು, ಮನಮೋಹಕ ನಗೆಯ ಚೆಲುವೆಯರ ಚಿತ್ರಗಳಿವೆ...

ಬೆತ್ತಲೆ ತಾರೆ ಜಿಪ್ಸಿ ಮದುವೆ
ಮೂರು ಮಕ್ಕಳ ತಾಯಿಯಾಗಿರುವ ಜಿಪ್ಸಿ ಅವರು ಹಲವಾರು ಟಿವಿ ಸಂದರ್ಶನಗಳಲ್ಲೂ ಬೆತ್ತಲೆಯಾಗಿ ಕಾಣಿಸಿಕೊಂಡು ಸುದ್ದಿ ಮಾಡಿದ್ದರು

ಚಂದ್ರಪಾಲ್ ದಾಖಲೆ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 29ನೇ ಟೆಸ್ಟ್ ಶತಕ ದಾಖಲಿಸಿದ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಶಿವನಾರಾಯಣ್ ಚಂದ್ರಪಾಲ್ ಅವರು ಪಿಚ್ ಗೆ ಮುತ್ತಿಕ್ಕಿ ಸಂಭ್ರಮಿಸಿದರು. ಸಚಿನ್ ದಾಖಲೆ ಮುರಿದ ಚಂದ್ರಪಾಲ್ ಬ್ರಾಡ್ಮನ್ ದಾಖಲೆ ಸಮಗಟ್ಟಿದ್ದರು.

ರಾಂಚಿಯಲ್ಲಿ
ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣವೊಂದರ ಆರೋಪಿ ಬಂಧನಕ್ಕೆ ಆಗ್ರಹಿಸಿ ವಾಹನಗಳ ಗಾಜನ್ನು ಕುಟ್ಟಿ ಪುಡಿ ಮಾಡಿ ಪ್ರತಿಭಟನೆ ನಡೆಸಿದ ಆಕ್ರೋಶಿತ ಸಾರ್ವಜನಿಕರು

ಎಂದೂ ಮಾಸದ ನಗೆ
ಮುಂಬೈ : ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಲಾರೆಯಲ್ ಪ್ಯಾರೀಸ್ ಕಾಜಲ್ Magique ಬಿಡುಗಡೆ ಸಮಾರಂಭದಲ್ಲಿ ಚೆಲ್ಲಿದ ನಗೆ. PTI Photo by Mitesh Bhuvad

ಮಾಧುರಿ ನಗೆ
ಮುಂಬೈನಲ್ಲಿ ದೇಡ್ ಇಷ್ಕಿಯಾ ಚಿತ್ರದ ಪ್ರಚಾರದಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹಾಗೂ ಹ್ಯೂಮಾ ಖುರೇಷಿ

ಜೋಹಾನ್ಸ್ ಬರ್ಗ್ ನಲ್ಲಿ
ಭಾರತೀಯ ಬೌಲರ್ ಜಹೀರ್ ಖಾನ್ ಹಾಗೂ ವಿರಾಟ್ ಕೊಹ್ಲಿ ಅಪೀಲ್ ಮಾಡುತ್ತಿದ್ದಾರೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 36 ರನ್ ಗಳ ಮುನ್ನಡೆ ಪಡೆದಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications