'ಟೈಟಾನಿಕ್' ಅವಶೇಷ ವೀಕ್ಷಿಸಲು ಅಟ್ಲಾಂಟಿಕ್ ಸಾಗರಕ್ಕೆ ಜಿಗಿದ ಶ್ರೀಮಂತ ಪ್ರವಾಸಿಗರು ನಾಪತ್ತೆ
ಬೆಂಗಳೂರು, ಜೂನ್ 20: ಶತಮಾನಗಳ ಹಿಂದೆ ಮುಳುಗಡೆಯಾಗಿದ್ದ ಪ್ರಖ್ಯಾತ 'ಟೈಟಾನಿಕ್' (Titanic) ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಶ್ರೀಮಂತ ಪ್ರವಾಸಿಗರಿದ್ದ ಸಬ್ಮರೀನ್ (ಜಲಂತರ್ಗಾಮಿ)ನಾಪತ್ತೆಯಾದ ಘಟನೆ ಇತ್ತೀಚೆಗೆ ನಡೆದಿದೆ.
ಕೆನಡಾದ ಕರಾವಳಿಯಿಂದ ಶ್ರೀಮಂತ ಪ್ರವಾಸಿಗರು ಟೈಟಾನಿಕ್ ಹಡಗಿನ ಅವಶೇಷಗಳಿರುವ ಆಳಕ್ಕೆ ಕರೆದೊಯ್ಯತ್ತಿದ್ದ ಜಲಂತರ್ಗಾಮಿ ನಾಪತ್ತೆಯಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೆನಡಾ ಮತ್ತು ಅಮೆರಿಕಾ ಹಡಗುಗಳು, ವಿಮಾನಗಳು ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.

ಆಳಸಾಗರದೊಳಗೆ ಕಾಣೆಯಾಗಿರುವ ಈ ಜಲಂತರ್ಗಾಮಿಯಲ್ಲಿ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು. ಅವರ ಬಳಿ ಒಟ್ಟು 96 ಗಂಟೆಗಳ ಕಾಲ ಉಸಿರಾಡಲು ಸಾಕಾಗುವಷ್ಟು ಆಮ್ಲಜನಕ ಮಾತ್ರವೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಪರ್ಕ ಕಡಿತ ಬಳಿಕ ಹುಡುಕಾಟ
ಪ್ರವಾಸಿಗರನ್ನು ಕರೆದೊಯ್ದ ಜಲಂತರ್ಗಾಮಿ ನೌಕೆ ನೊಂದಿಗಿನ ಸಂಪರ್ಕ ಕಡಿತಗೊಂಡಿದೆ. ಅದು ಸಾಗರದ ಆಳದಲ್ಲಿಯೇ ಇದೆಯೋ ಅಥವಾ ಹೊರ ಬಂದು ತೇಲುತ್ತಿದೆಯೋ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಅಗತ್ಯ ಸಿಬ್ಬಂದಿಯೊಂದಿಗೆ ಪ್ರವಾಸಿಗರ ಹುಡುಕಾಟಕ್ಕೆ ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮಂಗಳವಾರದಿಂದ ರಾತ್ರಿ ಇಡಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ವಿಮಾನ ಮತ್ತು ಹಡಗುಗಳು ಅಮೆರಿಕಾ ಕರಾವಳಿಯ ಕೇಪ್ ಗಾರ್ಡ್ ಪೂರ್ವ ಭಾಗದಲ್ಲಿ ಸರಿಸುಮಾರು 1,450 ಕಿಲೋ ಮೀಟರ್ ಪ್ರದೇಶದಲ್ಲಿ ಹುಡಕಾಟ ಮುಂದುವರಿಸಿದ್ದಾರೆ.

ತಂತ್ರಜ್ಞಾನಗಳ ಸಹಾಯದಿಂದ 1300 ಅಡಿಗಳಷ್ಟು ಸಮುದ್ರದ ಆಳವರೆಗೆ ಪತ್ತೆ ಕಾರ್ಯ ನಡೆಸಲಾಗಿದೆ. ಇಷ್ಟು ಆಳಕ್ಕೆ ಇಳಿದು ಹುಡುಕಿದರೂ ಸಿಗದ ಜಲಂತರ್ಗಾಮಿ ಪತ್ತೆ ಸವಾಲಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ರಿಯರ್ ಅಡ್ಮಿರಲ್ ಜಾನ್ ಅವರು ಹೇಳಿದರು.
ಶಬ್ದ ಹೊರಸೂಸುವ ಯಂತ್ರ ಹೊಂದಿತ್ತೇ ಜಲಂತರ್ಗಾಮಿ?
ನೀರಿನ ಒಳಗೆ ಹೋಗಬಹುದಾದ ಸಬ್ಮರಿನ್ ವಾಹನಗಳಿಗೆ ಅಕೌಸ್ಟಿಕ್ ಸಾಧನ ಅಳವಡಿಸಲಾಗಿರುತ್ತದೆ. ಇದಕ್ಕೆ ಪಿಂಗರ್ ಎಂದು ಕರೆಯಲಾಗುತ್ತದೆ. ಇದು ನೀರಿನ ಅಡಿಯಲ್ಲಿ ಸಿಲುಕಿಕೊಂಡಾಗ ಪತ್ತೆಹಚ್ಚಲು ಅನುಕೂಲವಾಗುವಂತೆ ಅದು ಶಬ್ದಗಳನ್ನು ಹೊರಸೂಸುತ್ತದೆ. ಆದರೆ ಈ ಬಗ್ಗೆ ಜಲಂತರ್ಗಾಮಿ ಅಂತಹ ಸಾಧನ ಹೊಂದಿದೆಯೇ ಎಂಬುದು ತಿಳಿಯಬೇಕಿದೆ.
ಪ್ರಯಾಣ ಆರಂಭಿಸಿದ ಜಲಂತರ್ಗಾಮಿ ಸುಮಾರು ಒಂದು ಗಂಟೆ ಮತ್ತು 45 ನಿಮಿಷಗಳ ಅಂತರದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳು ಇರುವ ಸಮುದ್ರದ ಆಳಕ್ಕೆ ತೆರಳಿದೆ. ಬಳಿಕ ಎರಡು ಕಾಲು ಗಂಟೆ ಅವಧಿ ಆಗುವ ಹೊತ್ತಿಗೆ ಅದು ಸಂಪರ್ಕ ಕಳೆದುಕೊಂಡಿದೆ. ಹೊರಗಿನಿಂದ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರು ಸಬ್ಮರಿನ್ ಇದ್ದ ಪ್ರವಾಸಿಗರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications