ಥಾಯ್ಲೆಂಡ್: ಬುದ್ಧನಿಂದಾಗಿ ಸಾವು ಗೆದ್ದರೇ ಈ ಬಾಲಕರು?
ಬೆಂಗಳೂರು, ಜುಲೈ, 10: ಥಾಯ್ಲೆಂಡ್ನ ಅತಿ ದುರ್ಗಮವಾದ ಗುಹೆಯಲ್ಲಿ ಜೂನ್ 23ರಿಂದ ಸಿಲುಕಿದ್ದ 10-14 ವರ್ಷದ ಈ ಬಾಲಕರು ಜೀವ ಉಳಿಸಿಕೊಂಡಿದ್ದಾದರೂ ಹೇಗೆ? ಇದಕ್ಕೆ ಭಾರತದ ಕೊಡುಗೆಯೂ ಇದೆ ಎನ್ನುವುದನ್ನು ಮರೆಯುವಂತಿಲ್ಲ.
ಈ ಬಾಲಕರ ಬಳಿ ಇದ್ದದ್ದು ಅಲ್ಪಸ್ವಲ್ಪ ಆಹಾರ ಮಾತ್ರ. ರಕ್ಷಣಾ ಕಾರ್ಯಪಡೆಗಳ ಕಣ್ಣಿಗೆ ಬೀಳುವವರೆಗೂ ಸುಮಾರು ಹತ್ತು ದಿನ ಅದನ್ನೇ ಅಲ್ಪ ಸ್ವಲ್ಪ ತಿಂದು ಜೀವ ಉಳಿಸಿಕೊಂಡಿದ್ದರು.
ಒಂದೇ ಜಾಗದಲ್ಲಿ ಕುಳಿತು ಸಾವಿನ ಅಂಜಿಕೆಯಲ್ಲಿಯೇ ವಾರಗಟ್ಟಲೆ ದಿನಗಳನ್ನು ನೂಕುವುದು ಮಕ್ಕಳನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕುಗ್ಗಿಸುತ್ತದೆ.

ಕೊಂಚವೂ ಬೆಳಕಿನ ಕಿರಣ ಸ್ಪರ್ಶಿಸದ, ಆಮ್ಲಜನಕ ಕೂಡ ಸರಿಯಾಗಿ ಲಭ್ಯವಾಗದ ಆ ಕಗ್ಗತ್ತಲ ಗುಹೆಯಲ್ಲಿ ಅಷ್ಟು ದಿನ ಬಾಲಕರು ಜೀವ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ.
ಇದಕ್ಕೆ ಕಾರಣವಾಗಿದ್ದು, ಆ ಬಾಲಕರಿಗೆ ತನ್ನ ಪಾಲಿನ ಆಹಾರ ಹಂಚಿದ್ದಲ್ಲದೆ, ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿದ 25 ವರ್ಷದ ಕೋಚ್ ಎಕ್ಕೊಪಲ್ ಚಂಟಾವೊಂಗ್.
ಫುಟ್ಬಾಲ್ ತಂಡವನ್ನು ಸೇರುವ ಮುನ್ನ ಚಂಟಾವೊಂಗ್ ಬೌದ್ಧ ಸನ್ಯಾಸಿಯಾಗಿದ್ದರು. ಹನ್ನೆರಡನೆಯ ವಯಸ್ಸಿನಿಂದಲೇ ಧ್ಯಾನವನ್ನು ಕಲಿತಿದ್ದರು.
ವಿಷಮ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ಹೇಗೆ ಸ್ಥಿಮಿತತೆಯನ್ನು ಕಾಪಾಡಿಕೊಳ್ಳಬಹುದು ಮತ್ತು ಅದರಿಂದ ದೈಹಿಕ ಶಕ್ತಿಯನ್ನೂ ಹೇಗೆ ಉಳಿಸಿಕೊಳ್ಳಬಹುದು ಎಂಬ ಕಲೆ ಅವರಿಗೆ ಸಿದ್ಧಿಸಿತ್ತು.
ಗುಹೆಯಲ್ಲಿ ಸಿಲುಕಿದ್ದ ಮಕ್ಕಳಿಗೆ ಅಲ್ಲಿಯೇ ಧೈರ್ಯ ತುಂಬಿ ಧ್ಯಾನದ ಕಲೆ ಹೇಳಿಕೊಟ್ಟರು. ಇದರಿಂದಲೇ ಇಷ್ಟು ದಿನ ಬಾಲಕರು ಆರೋಗ್ಯವಂತರಾಗಿ ಇರಲು ಸಾಧ್ಯವಾಯಿತು ಎನ್ನಲಾಗಿದೆ.
Coach was a Buddhist monk before joining the team, he used his knowledge of meditation to keep the boys calm.Thailand has learned Buddhist wisdom from India through Lord Buddha: Minister & Deputy Chief of Mission, Royal Thai Embassy on ongoing rescue operation at Thai cave pic.twitter.com/JbpzX7SWXp
— ANI (@ANI) 10 July 2018
ರಾಯಲ್ ಥಾಯ್ ಎಂಬಸಿಯ ಸಚಿವ ನಿಟಿವದಿ ಮನಿಟ್ಕುಲ್ ಇದು ಭಾರತದ ಕೊಡುಗೆ ಎಂದು ಪ್ರಶಂಸಿಸಿದ್ದಾರೆ.
ಫುಟ್ಬಾಲ್ ತಂಡವನ್ನು ಸೇರುವ ಮೊದಲು ಕೋಚ್ ಸನ್ಯಾಸಿಯಾಗಿದ್ದರು. ಬಾಲಕರು ಸಮಾಧಾನಚಿತ್ತರಾಗಿ ಇರುವಂತೆ ಮಾಡಲು ಅವರು ಧ್ಯಾನವನ್ನು ಬಳಸಿದರು.
ಬುದ್ಧನ ಮೂಲಕ ಭಾರತದಿಂದ ಥಾಯ್ಲೆಂಡ್ ಬೌದ್ಧ ಜ್ಞಾನವನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications