Syrian Conflict: ನೆಮ್ಮದಿ ಇಲ್ಲದ ನಾಡು ಸಿರಿಯಾದಲ್ಲಿ ಮತ್ತಷ್ಟು ಹಿಂಸಾಚಾರ...
ಸಿರಿಯಾ ಸಂಘರ್ಷದ ಕುಲುಮೆಯಲ್ಲಿ ಬೆಂದು ಹೋಗಿದೆ, ಸಿರಿಯಾ ಜನ ಜೀವ ಉಳಿಸಿಕೊಂಡು ಒಂದಷ್ಟು ದಿನ ಬದಕಲು ಮತ್ತೆ ಬೇರೆ ದೇಶಗಳಿಗೆ ಓಡಿ ಹೋಗುವಂತೆ ಆಗಿದೆ. ಯಾಕಂದ್ರೆ, ಸಿರಿಯಾ ದೇಶದಲ್ಲಿ ನೆಮ್ಮದಿಯೇ ಇಲ್ಲವಾಗಿದೆ. ಆಂತರಿಕ ಗಲಭೆ ಕಾರಣಕ್ಕೆ ವಿಲವಿಲ ಒದ್ದಾಡಿ ಹೋಗಿರುವ ಸಿರಿಯಾ ದೇಶದಲ್ಲಿ ಮತ್ತಷ್ಟು ಸ್ಫೋಟಕ ಘಟನೆಗಳು ವರದಿಯಾಗುತ್ತಿವೆ. ಹೀಗೆ ಇದ್ದಾಗಲೇ ಇಸ್ರೇಲ್ & ಟರ್ಕಿ ಕೂಡ ಸಿರಿಯಾ ಮೇಲೆ ದಾಳಿ ಆರಂಭ ಮಾಡಿರುವ ಆರೋಪ ಕೇಳಿ ಬಂದಿದೆ.
ಸಿರಿಯಾ ನಾಗರಿಕ ಯುದ್ಧದ ಬೆಂಕಿಯಿಂದ ಎದ್ದು ಬಂದು ಹೊಸ ಬದುಕು ಕಟ್ಟಿಕೊಂಡು, ಇನ್ನೇನು ಎಲ್ಲಾ ದೇಶಗಳಂತೆ ಬದುಕಲು ಸಿದ್ಧವಾಗಿತ್ತು. ಆದರೆ ಇದೀಗ ಸಿರಿಯಾ ದೇಶದಲ್ಲಿ ಹೊಸ ಭಯ ಶುರುವಾಗಿದೆ. ಇಷ್ಟು ದಿನಗಳ ಕಾಲ ಸಿರಿಯಾ ದೇಶದಲ್ಲಿ ಜನರು ತಮ್ಮ ನೆಲದ ಸರ್ಕಾರದ ವಿರುದ್ಧವೇ ಹೋರಾಟ ನಡೆಸುತ್ತಿದ್ದರು. ಯಾಕಂದ್ರೆ ಅಸ್ಸಾದ್ ನೇತೃತ್ವದ ಸರ್ಕಾರ ಸರ್ವಾಧಿಕಾರಿ ಆಗಿ ವರ್ತನೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ಆಂತರಿಕ ಯುದ್ಧ ನಿಂತ ನಂತರ ಇದೀಗ ಶತ್ರು ದೇಶಗಳ ದಾಳಿಗೆ ಸಿರಿಯಾ ನಲುಗಿ ಹೋಗಿದೆ.

ಶತ್ರುಗಳ ದಾಳಿಗೆ ಸಿರಿಯಾ ವಿಲವಿಲ!
ಹೌದು, ಇದೀಗ ಸಿರಿಯಾ ನೆಲದ ಮೇಲೆ ಭೀಕರ ದಾಳಿ ನಡೆಸುತ್ತಿರುವ ಇಸ್ರೇಲ್ ಸೇನೆ ತನ್ನ ಹಿಡಿತವನ್ನು ಮತ್ತಷ್ಟು ಪ್ರದೇಶಗಳಲ್ಲಿ ಹೆಚ್ಚಿಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಸಿರಿಯಾ ಭೂಮಿ ಮೇಲೆ ಕಣ್ಣು ಇಟ್ಟಿರುವ ಅಕ್ಕಪಕ್ಕದ ಶತ್ರು ದೇಶಗಳು ಕೂಡ ಸಿರಿಯಾ ಒಳಗೆ ನುಗ್ಗಲು ಸಿದ್ಧವಾಗಿವೆ ಎಂಬ ಆರೋಪ ಬಿರುಗಾಳಿ ಎಬ್ಬಿಸಿದೆ. ಇಷ್ಟೆಲ್ಲದರ ನಡುವೆ ಸಿರಿಯಾದ ಜನರು ಮತ್ತಷ್ಟು ಬೆಚ್ಚಿ ಬಿದ್ದಿದ್ದಾರೆ.
ಸಿರಿಯಾ ಬಂಡಾಯ ನಾಯಕರ ಜೊತೆಗೆ ದೋಸ್ತಿ!
ಇರಾನ್ ಈಗ, ಸಿರಿಯಾ ನಾಯಕತ್ವದಲ್ಲಿ ಆಗಿರುವ ಬದಲಾವಣೆ ಬಗ್ಗೆ ವಾಸ್ತವವಾಗಿ ಚಿಂತೆ ಮಾಡಲು ಶುರು ಮಾಡಿದೆ. ಇದೇ ಕಾರಣಕ್ಕೆ ಅಸ್ಸಾದ್ ಸರ್ಕಾರ ಬಿದ್ದು ಹೋಗಿ, ಸಿರಿಯಾ ನೆಲದಿಂದ ಅಸ್ಸಾದ್ ಓಡಿ ಹೋದ ನಂತರ ಅಧಿಕಾರಕ್ಕೆ ಬಂದಿರುವ ಸಿರಿಯಾದ ಬಂಡಾಯ ಸೇನೆಯ ಆಡಳಿತದ ಜೊತೆಗೆ ಮಾತುಕತೆಗೆ ಇದೀಗ ಇರಾನ್ ಮುಂದಾಗಿದೆ. ಈ ಮೂಲಕವೇ ಮಧ್ಯಪ್ರಾಚ್ಯ ಭಾಗದಲ್ಲಿ ತನ್ನ ಸ್ನೇಹವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲು ಇರಾನ್ನ ಆಡಳಿತ ಮುಂದಾಗಿದೆ ಎಂಬ ಮಾತು ಕೇಳಿ ಬಂದಿದೆ.
ಒಟ್ನಲ್ಲಿ ಸಿರಿಯಾ ಆದಷ್ಟು ಬೇಗ ಶಾಂತವಾಗಬೇಕಿದೆ, ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ರೀತಿಯ ತಿಕ್ಕಾಟಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಇಸ್ರೇಲ್ & ಗಾಜಾದ ಯುದ್ಧ ಮತ್ತು ಇಸ್ರೇಲ್ & ಲೆಬನಾನ್ ಯುದ್ಧಗಳು ಭಾರಿ ಘೋರತೆ ತೋರಿಸಿವೆ. ಹೀಗಾಗಿ, ಆದಷ್ಟು ಬೇಗ ಸಿರಿಯಾ ನೆಲ ತಣ್ಣಗೆ ಆಗಬೇಕು ಎಂಬ ಒತ್ತಾಯ ಕೇಳಿ ಬರುತ್ತಲೇ ಇದೆ. ಆದ್ರೆ ಈ ಒತ್ತಾಯಕ್ಕೆ ಮಣಿಯುತ್ತಾರಾ? ಎಂಬುದನ್ನ ಕಾದು ನೋಡಬೇಕಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications