ಶ್ರೀಲಂಕಾದ ಸಚಿವ ತೆಂಗಿನ ಮರವೇರಿ ಕುಳಿತಿದ್ದು ಏಕೆ?
ಕೊಲಂಬೋ, ಸೆಪ್ಟೆಂಬರ್ 19: ತೆಂಗಿನ ಕಾಯಿ ಕೊರತೆಯ ಬಗ್ಗೆ ಜನರಿಗೆ ಮನದಟ್ಟು ಮಾಡಲು ಶ್ರೀಲಂಕಾದ ಸಚಿವರೊಬ್ಬರು ತೆಂಗಿನ ಮರ ಹತ್ತಿರುವ ಘಟನೆ ನಡೆದಿದೆ.
ಸಚಿವ ಅರುಂದಿಕ ಫರ್ನಾಂಡೋ ತೆಂಗಿನ ಮರವೇರಿದ್ದಾರೆ.
ಸ್ಥಳೀಯ ಕೈಗಾರಿಕೆಗಳಿಗೆ ಹೆಚ್ಚಿನ ಬೇಡಿಕೆ ಮತ್ತು ದೇಶೀಯ ಬಳಕೆಯಿಂದಾಗಿ ದೇಶವು 700 ದಶಲಕ್ಷ ತೆಂಗಿನಕಾಯಿ ಕೊರತೆಯನ್ನು ಎದುರಿಸುತ್ತಿದೆ.
ಲಭ್ಯವಿರುವ ಪ್ರತಿಯೊಂದು ಭೂಮಿಯನ್ನು ತೆಂಗಿನ ಕೃಷಿಗೆ ಬಳಸಿಕೊಳ್ಳುತ್ತೇವೆ ಮತ್ತು ವಿದೇಶಿ ವಿನಿಮಯವನ್ನು ಉಂಟು ಮಾಡುವ ಉದ್ಯಮವನ್ನು ಹೆಚ್ಚಿಸಲು ನಾವು ಆಶಿಸುತ್ತೇವೆ ಎಂದು ಹೇಳಿದ್ದಾರೆ.

ತೆಂಗಿನಕಾಯಿ ಬೆಲೆಗಳ ಸಮಸ್ಯೆಗೆ ಪರಿಹಾರವನ್ನು ನೀಡಿದ ಅವರು, ದೇಶದಲ್ಲಿ ತೆಂಗಿನಕಾಯಿ ಕೊರತೆಯ ಮಧ್ಯೆ ಬೆಲೆಯನ್ನು ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
Recommended Video
IPLನಲ್ಲಿ RCB ಹೊರತು ಪಡಿಸಿ ಬೇರೆ ಯಾವ ತಂಡದಲ್ಲಿ ಕನ್ನಡಿಗರಿದ್ದಾರೆ | Oneindia Kannada
ರಾಜ್ಯ ಸರ್ಕಾರದ ಬೆಂಬಲಿಗರು ಅವರನ್ನು ಮರದಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು.












Click it and Unblock the Notifications