ವರ್ಣಭೇದದ ವಿರುದ್ಧದ ಹೋರಾಟಗಾರ್ತಿ ವಿನ್ನಿ ಮಂಡೇಲಾ ನಿಧನ
ವರ್ಣಭೇದದ ವಿರುದ್ಧದ ಹೋರಾಟಗಾರ್ತಿ ಹಾಗೂ ನೆಲ್ಸನ್ ಮಂಡೇಲಾರ ಪತ್ನಿ ವಿನ್ನಿ ಮದಿಕಿಜೆಲಾ ಮಂಡೇಲಾ ಎಂಬತ್ತೊಂದನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಆಪ್ತ ಸಹಾಯಕರು ನಿಧನ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. "ದೀರ್ಘಾವಧಿಯ ಅನಾರೋಗ್ಯದ ನಂತರ ಆಕೆ ಮೃತಪಟ್ಟಿದ್ದಾರೆ" ಎಂದು ನೆಲ್ಸನ್ ಮಂಡೇಲಾ ಕುಟುಂಬದ ವಕ್ತಾರರಾದ ವಿಕ್ಟರ್ ಡ್ಲಾಮಿನಿ ತಿಳಿಸಿದ್ದಾರೆ.
ಮದಿಕಿಜೆಲಾ ಮಂಡೇಲಾ 1956ರಲ್ಲಿ ಅಂದರೆ ವರ್ಣಭೇದದ ವಿರುದ್ಧದ ಹೋರಾಟ ಮಾಡುತ್ತಾ 1962ರಲ್ಲಿ ಜೈಲು ಸೇರಿದ ಆರು ವರ್ಷದ ಮುಂಚೆ ನೆಲ್ಸನ್ ಮಂಡೇಲಾರನ್ನು ಮದುವೆ ಆಗಿದ್ದರು. ಇಪ್ಪತ್ತೇಳು ವರ್ಷ ನೆಲ್ಸನ್ ಮಂಡೇಲಾ ಜೈಲು ಶಿಕ್ಷೆ ಅನುಭವಿಸುವ ಅವಧಿಯಲ್ಲಿ ಅವರ ಬಿಡುಗಡೆಗಾಗಿ ಹಾಗೂ ದಕ್ಷಿಣ ಆಫ್ರಿಕಾದ ಕಪ್ಪು ವರ್ಣೀಯರ ಹಕ್ಕುಗಳಿಗಾಗಿ ಮದಿಕಿಜೆಲಾ ಹೋರಾಟ ನಡೆಸಿದ್ದರು.

1990ರಲ್ಲಿ ನೆಲ್ಸನ್ ಮಂಡೇಲಾ ಬಿಡುಗಡೆ ಆದಾಗ ಜೈಲಿನಿಂದ ಹೊರಬಂದಿದ್ದು ಇದೇ ಮದಿಕಿಜೆಲಾ ಅವರ ಕೈ ಹಿಡಿದುಕೊಂಡು. ಅದಾಗಿ ಎರಡು ವರ್ಷಕ್ಕೆ ಅವರಿಬ್ಬರು ಬೇರೆಯಾದರು. 1996ರಲ್ಲಿ ವಿಚ್ಛೇದನವೂ ಆಯಿತು. ವಿನ್ನಿ ಜನಿಸಿದ್ದು ಸೆಪ್ಟೆಂಬರ್ 26, 1936ರಲ್ಲಿ. ಈಗ ಈಸ್ಟರ್ನ್ ಕೇಪ್ ನಲ್ಲಿರುವ ಒಂದು ಹಳ್ಳಿಯಲ್ಲಿ.
ಆಗಿನ ಕಾಲಘಟ್ಟದಲ್ಲಿ ಅಪರೂಪಕ್ಕೆ ಎಂಬಂತೆ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಕಪ್ಪು ಮಹಿಳೆ ವಿನ್ನಿ. ಕಪ್ಪು ವರ್ಣೀಯರ ಪರ ಹೋರಾಟದಲ್ಲಿ ಆಕೆಯ ಸ್ಥಾನ ಮಹತ್ವದ್ದು. ಆದರೆ ಆಕೆಯನ್ನು ಕೆಲವು ವಿವಾದಗಳು ಸುತ್ತುವರಿದಿದ್ದವು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications