5 ದಶಕ ಆಡಳಿತ ನಡೆಸಿದ ಒಮನ್ ಸುಲ್ತಾನ ನಿಧನ
ಮಸ್ಕತ್, ಜನವರಿ 11: ಮಧ್ಯಪ್ರಾಚ್ಯದಲ್ಲಿ ಅತ್ಯಂತ ದೀರ್ಘಾವಧಿ ಆಡಳಿತ ನಡೆಸಿದ ರಾಜರಲ್ಲಿ ಒಬ್ಬರಾದ ಒಮನ್ ಅರಸ ಸುಲ್ತಾನ್ ಖಾಬೂಸ್ ಬಿನ್ ಸೈಯದ್ (79) ಶುಕ್ರವಾರ ನಿಧನರಾದರು.
ಮಧ್ಯಪ್ರಾಚ್ಯದ ನಿರಂತರ ಸಂಘರ್ಷಮಯ ವಾತಾವರಣ ನಡುವೆಯೂ ಯಾವುದೇ ದೇಶ ಅಥವಾ ಸಂಘರ್ಷಕ್ಕೆ ಬೆಂಬಲ ನೀಡದೆ ಒಮನ್ ತಟಸ್ಥತೆ ಕಾಪಾಡಿಕೊಂಡು ಬರುವಂತೆ ಸುಲ್ತಾನ್ ಖಾಬೂಸ್ ನೋಡಿಕೊಂಡಿದ್ದರು. ಅವರ ಸ್ಥಾನಕ್ಕೆ ಸೂಕ್ತ ಉತ್ತರಾಧಿಕಾರಿಯನ್ನು ಹುಡುಕಲು ದೇಶದ ಉನ್ನತ ಸೇನಾ ಸಮಿತಿ ಪ್ರಕ್ರಿಯೆ ಆರಂಭಿಸಿದೆ.
ದೇಶದಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದ್ದು, 40 ದಿನಗಳವರೆಗೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುತ್ತದೆ. ಒಮನ್ ಹಿಂದಿನ ವಸಾಹತು ಅಧೀನದಲ್ಲಿದ್ದ ಬ್ರಿಟನ್ನ ಸಹಾಯದಿಂದ 1970ರಲ್ಲಿ ರಕ್ತಪಾತರಹಿತ ದಂಗೆ ನಡೆಸಿದ್ದ ಖಾಬೂಸ್, ಅಧಿಕಾರಕ್ಕೇರಿದ್ದರು. ಅಂದಿನಿಂದ ಸುಮಾರು 50 ವರ್ಷ ಅವರು ನಿರಂತರ ಆಡಳಿತ ನಡೆಸಿದ್ದರು.

ಖಾಬೂಸ್ ಅವರ ಸಾವಿಗೆ ನಿಖರ ಕಾರಣ ಏನೆಂಬುದನ್ನು ಒಮನ್ ಸರ್ಕಾರ ಬಹಿರಂಗಪಡಿಸಿಲ್ಲ. ಆದರೆ ಅವರು ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ಡಿಸೆಂಬರ್ ಆರಂಭದಲ್ಲಿ ಒಂದು ವಾರ ಬೆಲ್ಜಿಯಂಗೆ ತೆರಳಿದ್ದರು.
ಖಾಬೂಸ್ ಅವರಿಗೆ ಮಕ್ಕಳಿಲ್ಲ. ಅವರು ತಮ್ಮ ಉತ್ತರಾಧಿಕಾರಿ ಯಾರೆಂದು ಸಾರ್ವಜನಿಕವಾಗಿ ಘೋಷಣೆ ಕೂಡ ಮಾಡಿರಲಿಲ್ಲ. 1996ರ ಒಮನ್ ಕಾನೂನಿನ ಪ್ರಕಾರ ಆಡಳಿತಾರೂಢ ಕುಟುಂಬವು ಸಿಂಹಾಸನವು ತೆರವಾದ ಮೂರು ದಿನಗಳ ಒಳಗೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತದೆ.
ಒಮನ್ನ ಆಡಳಿತ ಕುಟುಂಬ ಸಮಿತಿಯು ಹೊಸ ಆಡಳಿತಗಾರನನ್ನು ಆಯ್ಕೆ ಮಾಡಲು ಸಭೆ ನಡೆಸಲಿದೆ ಎಂದು ಉನ್ನತ ಸೇನಾ ಸಮಿತಿ ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.
ಒಂದು ವೇಳೆ ಸಮಿತಿಯು ಒಮ್ಮತಾಭಿಪ್ರಾಯದಿಂದ ಆಡಳಿತಾಧಿಕಾರಿಯ ಆಯ್ಕೆ ಮಾಡುವಲ್ಲಿ ವಿಫಲವಾದರೆ ಸೇನೆ ಮತ್ತು ಭದ್ರತಾ ಅಧಿಕಾರಿಗಳು, ಸುಪ್ರೀಂಕೋರ್ಟ್ ಮುಖ್ಯಸ್ಥರು ಹಾಗೂ ಎರಡು ಸಲಹಾ ಸಭೆಗಳ ಮುಖ್ಯಸ್ಥರನ್ನು ಒಳಗೊಂಡ ಸಮಿತಿಯು, ಸುಲ್ತಾನ್ ಮುಚ್ಚಿದ ಲಕೋಟೆಯಲ್ಲಿ ರಹಸ್ಯವಾಗಿ ಬರೆದಿಟ್ಟಿರುವ ಹೆಸರಿನ ವ್ಯಕ್ತಿಯನ್ನು ಅಧಿಕಾರದಲ್ಲಿ ಇರಿಸುತ್ತವೆ.
ಇರಾನ್ ಮತ್ತು ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರ ಸೌದಿ ಅರೇಬಿಯಾ ನಡುವಿನ ಉದ್ವಿಗ್ನ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ, ಇತರೆ ಗಲ್ಫ್ ದೇಶಗಳಿಗೆ ಹೋಲಿಸಿದರೆ ಅತಿ ಕಡಿಮೆ ತೈಲ ಉತ್ಪಾದಿಸುವ ಒಮನ್ನಲ್ಲಿ ನಿರುದ್ಯೋಗದ ಮತ್ತು ಆರ್ಥಿಕ ಸಮಸ್ಯೆಗಳು ತೀವ್ರವಾಗಿದೆ. ದೇಶದ ಆಂತರಿಕ ಸವಾಲುಗಳು ಹೆಚ್ಚಾಗಿವೆ. ಹೀಗಾಗಿ ಆಡಳಿತದ ಜವಾಬ್ದಾರಿ ತೆಗೆದುಕೊಳ್ಳುವವರು ಅಧಿಕ ಒತ್ತಡ ಎದುರಿಸಬೇಕಾಗುತ್ತದೆ.
ಸುಲ್ತಾನ್ನ ಮೂವರು ಸಂಬಂಧಿಗಳಾದ ಅಸ್ಸಾದ್, ಶಿಹಾಬ್ ಮತ್ತು ಹೈಥಮ್ ಬಿನ್ ತಾರೀಖ್ ಅಲ್ ಸೈಯದ್ ಅವರಲ್ಲಿ ಒಬ್ಬರು ಈ ಪಟ್ಟಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಹೊರಗಿನ ದೇಶಗಳ ಒತ್ತಡವೂ ಸುಲ್ತಾನ್ ಆಯ್ಕೆಯ ಮೇಲೆ ಪರಿಣಾಮ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications