ಮೂವರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್ ಘೋಷಣೆ
ಸ್ಟಾಕ್ಹೋಮ್, ಅಕ್ಟೋಬರ್ 5: ಅಮೆರಿಕದ ಹಾರ್ವಿ ಜೆ ಅಲ್ಟರ್ ಮತ್ತು ಚಾರ್ಲ್ಸ್ ಎಂ ರೈಸ್ ಹಾಗೂ ಬ್ರಿಟಿಷ್ ವಿಜ್ಞಾನಿ ಮಿಖಾಯಲ್ ಹೌಟನ್ ಅವರಿಗೆ ಪ್ರಸಕ್ತ ಸಾಲಿನ ವೈದ್ಯಕೀಯ ನೊಬೆಲ್ (ಫಿಸಿಯಾಲಜಿ) ಪುರಸ್ಕಾರ ಒಲಿದಿದೆ. ಹೆಪಟೈಟಿಸ್ ಸಿ ವೈರಸ್ನ ಪತ್ತೆಯಲ್ಲಿ ನಡೆಸಿದ ಮಹತ್ವದ ಸಂಶೋಧನೆಗಾಗಿ ಈ ಮೂವರಿಗೆ ನೊಬೆಲ್ ಗೌರವ ಸಿಕ್ಕಿದೆ.
ಸ್ಟಾಕ್ ಹೋಮ್ನಲ್ಲಿ ಸೋಮವಾರ ನೊಬೆಲ್ ಪುರಸ್ಕಾರ ಪ್ರಕಟಿಸಿದ ನೊಬೆಲ್ ಸಮಿತಿ, ಈ ಮೂವರು ವಿಜ್ಞಾನಗಳ ಕಾರ್ಯವು ಹೆಪಟೈಟಿಸ್ ಎ ಮತ್ತು ಹೆಪಟೈಟಿಸ್ ಬಿ ಯಿಂದ ವಿವರಿಸಲು ಸಾಧ್ಯವಾಗದ ರಕ್ತದಲ್ಲಿ ಜನಿಸುವ ಹೆಪಟೈಟಿಸ್ನ ಪ್ರಮುಖ ಮೂಲವನ್ನು ವಿವರಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದೆ.
ರಕ್ತ ಪರೀಕ್ಷೆ ಹಾಗೂ ಹೊಸ ಔಷಧಗಳು ಲಕ್ಷಾಂತರ ಜೀವಗಳನ್ನು ಉಳಿಸಲು ಅವರ ಸಂಶೋಧನೆ ನೆರವಾಗಿದೆ ಎಂದು ಸಮಿತಿ ತಿಳಿಸಿದೆ.

'ಅವರ ಆವಿಷ್ಕಾರಕ್ಕೆ ಧನ್ಯವಾದಗಳು. ಈಗ ವೈರಸ್ಗಳಿಗೆ ಅಧಿಕ ಸಂವೇದನಾಶೀಲ ರಕ್ತ ಪರೀಕ್ಷೆಗಳು ಲಭ್ಯವಾಗಿವೆ ಮತ್ತು ಇವುಗಳು ಜಗತ್ತಿನ ಅನೇಕ ಭಾಗಗಳಲ್ಲಿ ಹೆಪಟೈಟಿಸ್ ಪೂರ್ವದ ವರ್ಗಾವಣೆಗಳನ್ನು ನಿರ್ಮೂಲನೆ ಮಾಡಲು ಬಹಳ ಅಗತ್ಯವಾಗಿವೆ. ಇದರಿಂದ ಜಾಗತಿಕ ಆರೋಗ್ಯ ದೊಡ್ಡ ಮಟ್ಟದಲ್ಲಿ ಸುಧಾರಿಸಲಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಅವರ ಆವಿಷ್ಕಾರದಿಂದ ಹೆಪಟೈಟಿಸ್ ಸಿ-ಗೆ ಅಗತ್ಯವಾದ ಆಂಟಿ ವೈರಲ್ ಔಷಧದ ತ್ವರಿತ ಅಭಿವೃದ್ಧಿಗೆ ಅವಕಾಶ ನೀಡಿತ್ತು. ಇತಿಹಾಸದಲ್ಲಿಯೇ ಮೊದಲ ಬಾರಿಗೆ ರೋಗವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಾಗಿದೆ. ಇದರಿಂದ ಜಾಗತಿಕ ಜನಸಂಖ್ಯೆಯಲ್ಲಿನ ಹೆಪಟೈಟಿಸ್ ಸಿ ವೈರಸ್ ಅನ್ನು ನಿರ್ಮೂಲನೆ ಮಾಡುವ ಭರವಸೆಯನ್ನು ಹೆಚ್ಚಿಸಿದೆ.
ಪ್ರತಿಷ್ಟಿತ ನೊಬೆಲ್ ಪುರಸ್ಕಾರವು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಶ್ ಕ್ರೋನೊರ್ (1,118,000 ಡಾಲರ್) ಬಹುಮಾನದ ಹಣವನ್ನು ಹೊಂದಿರಲಿದೆ.
ಜಗತ್ತಿನಾದ್ಯಂತ 70 ಮಿಲಿಯನ್ಗೂ ಅಧಿಕ ಹೆಪಟೈಟಿಸ್ ಪ್ರಕರಣಗಳಿದ್ದು, ಪ್ರತಿ ವರ್ಷ ಈ ಸಮಸ್ಯೆಯಿಂದಾಗಿ 4,00,000 ಮಂದಿ ಸಾಯುತ್ತಿದ್ದಾರೆ. ದೀರ್ಘಾವಧಿಯ ಕಾಯುಲೆಯು ಯಕೃತ್ತಿನ ಉರಿಯೂತ ಹಾಗೂ ಕ್ಯಾನ್ಸರ್ಗೆ ಕಾರಣವಾಗುತ್ತಿದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications