ಸಿಖ್ಖರೇ ಗಮನಿಸಿ, ಫ್ರಾನ್ಸಿನಲ್ಲಿ ಬುರ್ಖಾಗೆ ಮಾತ್ರ ನಿಷೇಧ!
ಪ್ಯಾರೀಸ್, ಫೆ. 03: ಫ್ರಾನ್ಸ್ ನಲ್ಲಿ ಸಿಖ್ ಸಮುದಾಯಕ್ಕೆ ಆತಂಕ ಉಂಟು ಮಾಡಿದ್ದ ಆದೇಶವೊಂದರ ಬಗ್ಗೆ ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ. ಬುರ್ಖಾಗೆ ಮಾತ್ರ ನಿಷೇಧ ಹೇರಲಾಗಿದೆ. ಸಿಖ್ಖರು ತಮ್ಮ ಪಗಡಿಯನ್ನು ಧರಿಸಿ ಓಡಾಡಬಹುದು ಎಂದು ಸ್ಪಷ್ಟಪಡಿಸಲಾಗಿದೆ.[ಹೊಲ್ಲಾಂಡೆ ಜೊತೆ ಬನಾರಸಿ ಸೀರೆಯುಟ್ಟ ಐಶ್ವರ್ಯಾ ರೈ ಪೋಸ್]
ಸಾರ್ವಜನಿಕ ಸ್ಥಳಗಳಲ್ಲಿ ಸಿಖ್ಖರು ತಮ್ಮ ತಲೆ ರುಮಾಲು (ಪಗಡಿ) ಧರಿಸಿ ಓಡಾಡುವಂತಿಲ್ಲ ಎಂಬ ಆದೇಶ ಹೊರಬಿದ್ದಿದೆ ಎಂಬ ಸುದ್ದಿ ಹಬ್ಬಿತ್ತು. ಅಮೆರಿಕ, ಯುರೋಪ್ ನಲ್ಲಿ ಸತತವಾಗಿ ಪಗಡಿ ಧರಿಸಲು ಸಿಖ್ಖರು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಸಿಖ್ಖರು ಪ್ರತಿಭಟನೆಗೆ ಮುಂದಾಗುವುದಕ್ಕೂ ಮುನ್ನ ಎಚ್ಚೆತ್ತುಕೊಂಡ ಹೊಲ್ಲಾಂಡೆ ಸರ್ಕಾರ, ತಮ್ಮ ಆದೇಶದ ಬಗ್ಗೆ ಸ್ಪಷ್ಟನೆ ನೀಡಿದೆ.['ಜೋ ಬೋಲೆ ಸೋ ನಿಹಾಲ್' ಎಂದ 40 ಕ್ರೈಸ್ತ ಕುಟುಂಬಗಳು]

ಇತ್ತೀಚಿಗೆ ನಡೆದ ಉಗ್ರರ ದಾಳಿ ಕಹಿ ಘಟನೆ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವುದನ್ನು ನಿಷೇಧಿಸಲಾಗಿದೆ. ಧಾರ್ಮಿಕ ಸಹಿಷ್ಣುತೆಗೆ ಫ್ರಾನ್ಸ್ ಬೆಲೆ ಕೊಡುತ್ತದೆ. ಆದರೆ, ಧಾರ್ಮಿಕ ಚಿನ್ಹೆ, ದಿರಿಸು ಇತರೆ ಧರ್ಮ ಹಾಗೂ ರಾಷ್ಟ್ರಕ್ಕೆ ಮಾರಕವಾಗದಂತೆ ಇರಬೇಕು ಎಂಬ ಸರಳ ಕಾನೂನು ಹಿಂದಿನಿಂದ ನಡೆದುಕೊಂಡು ಬಂದಿದೆ.[ಬುರ್ಖಾ ಬ್ರಿಗೇಡ್ ಬರುತ್ತಿದೆ ಎಚ್ಚರ, ಎಚ್ಚರಾ!]
ಜನವರಿ 26, 2016ರಂದು ಭಾರತದ ಗಣರಾಜ್ಯೋತ್ಸವ ಆಚರಣೆ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡೆ ಭಾರತಕ್ಕೆ ಆಗಮಿಸಿದ್ದರು.
ಆದರೆ, ಪೆರೇಡ್ ಸಂದರ್ಭದಲ್ಲಿ ಪ್ರತ್ಯೇಕ ಸಿಖ್ ರಿಜಿಮೆಂಟ್ ಭಾಗವಹಿಸಿರಲಿಲ್ಲ ಎಂಬುದನ್ನು ಗುರುತಿಸಿದ ಶಿರೋಮಣಿ ಅಕಾಲಿ ದಳ ಮುಖಂಡರು ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಗೆ ಪತ್ರ ಬರೆದಿದ್ದಾರೆ. ಬಾದಲ್ ಅವರು ಫ್ರಾನ್ಸಿನಲ್ಲಿರುವ ಸಿಖ್ಖರ ಬಗ್ಗೆ ಕಾಳಜಿಯುಳ್ಳ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನಿಸಿದ್ದಾರೆ.
ಸಿಖ್ಖರು ರುಮಾಲು ಸುತ್ತಿಕೊಳ್ಳುವುದು ಧಾರ್ಮಿಕ ಸಂಕೇತ. ಗಣತಂತ್ರದಿನದಂದು ದೇಶದ ವೈವಿಧ್ಯತೆ ಪ್ರದರ್ಶಿಸುವಾಗ ಸಿಖ್ ತುಕಡಿ ಇಲ್ಲದೆ ಇರುವುದು ಬೇಸರ ತರಿಸಿದೆ. ದೇಶಭಕ್ತ ಸಮುದಾಯಕ್ಕೆ ನೋವಾಗಿದೆ ಎಂದು ಪ್ರಕಾಶ್ ಸಿಂಗ್ ಬಾದಲ್ ವಿಷಾದ ವ್ಯಕ್ತಪಡಿಸಿದ್ದಾರೆ. (ಪಿಟಿಐ)
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications