ರಷ್ಯಾ ಮತ್ತು ಉಕ್ರೇನ್ ಸಂಘರ್ಷ: ಆರ್ಥಿಕ ಪ್ರಕ್ಷುಬ್ಧತೆ ತಡೆಗೆ ಭಾರತದ ಕಾರ್ಯತಂತ್ರ
ರಷ್ಯಾ ಮತ್ತು ಉಕ್ರೇನ್ ಸಂಘರ್ಷ ಉಂಟು ಮಾಡುವ ಪರಿಣಾಮದ ಬಗ್ಗೆ ವಿಶ್ವಮಟ್ಟದಲ್ಲಿ ಚರ್ಚೆಗಳು ನಡೆದಿವೆ. ವಿಶ್ವದ್ಯಾದ್ಯಂತ ಆರ್ಥಿಕತೆ ಒತ್ತಡವನ್ನು ಎದುರಿಸುತ್ತಿದೆ. ಪ್ರಮುಖವಾಗಿ ಅಗತ್ಯ ಸರಕುಗಳಾದ ತೈಲ ಮತ್ತು ಯೂರಿಯಾ ವಿಚಾರದಲ್ಲಿ ಮಾತುಕತೆಗಳು ಸಾಗಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಹಣಕಾಸಿನ ವಿಚಾರದಲ್ಲಿ ವಿವೇಕಯುತವಾದ ಹೆಜ್ಜೆ ಇಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರ್ವಹಣೆ ಮಾಡುತ್ತಿದೆ ಮತ್ತು ನಾಗರಿಕರಿಗೆ ಸವಾಲಿನ ಸಂದರ್ಭದಲ್ಲಿಯೂ ಸ್ಥಿರವಾಗಿ ಉತ್ಪನ್ನಗಳು ಸಿಗುವಂತೆ ಖಚಿತಪಡಿಸುತ್ತಿದೆ.

ಈ ಲೇಖನ ಭಾರತ ದೇಶದಲ್ಲಿ ಆರ್ಥಿಕ ಸಮತೋಲನವನ್ನು ಕಾಪಾಡಿಕೊಂಡು ವಿಶ್ವದ ಮಾರುಕಟ್ಟೆಯಲ್ಲಿ ನಿರ್ಣಾಯಕ ಸಂಪನ್ಮೂಲಗಳ ಹೊಂದಿಕೆಗೆ ಪ್ರಯತ್ನ ನಡೆಸಿದ ರೀತಿಯ ಕುರಿತು ವಿವರಿಸಲಾಗಿದೆ.
ಸಂಘರ್ಷದ ಪರಿಣಾಮ
ಭಾರತದ ತೈಲ ಮತ್ತು ಯೂರಿಯಾ ಮೇಲಿನ ಆಮದು ಅವಲಂಬನೆ ಪ್ರಮುಖವಾಗಿ ಜಾಗತಿಕ ಪೂರೈಕೆಯ ಆಡಚಣೆಯಿಂದ ತೊಂದರೆಗೆ ಒಳಗಾಗಬೇಕಿತ್ತು. ರಷ್ಯಾ ಮತ್ತು ಉಕ್ರೇನ್ ಎರಡೂ ಸಹ ಈ ಸರಕುಗಳನ್ನು ಪೂರೈಕೆ ಮಾಡುವ ಪೂರೈಕೆದಾರರು. ಸುಮಾರು ಎರಡು ವರ್ಷಗಳಿಂದ ಸಂಘರ್ಷ ನಡೆಯುತ್ತಲೇ ಇದ್ದು, ಜಾಗತಿಕವಾಗಿ ಪೂರೈಕೆ ಸಂಪರ್ಕದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ, ಇದು ಗಮನಾರ್ಹವಾದ ಬೆಲೆ ಏರಿಳಿತಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಸವಾಲುಗಳ ನಡುವೆಯೇ ಭಾರತದ ರಾಜತಾಂತ್ರಿಕ ಪ್ರಯತ್ನಗಳು ತೈಲ ಮತ್ತು ಯೂರಿಯಾ ಪೂರೈಕೆಯಲ್ಲಿ ಸ್ಥಿರತೆ ಕಾಪಾಡುವಲ್ಲಿ ನಿರ್ಣಾಯಕವಾಗಿದೆ.
ತೈಲ ಆಮದು ಹೆಚ್ಚಳ
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದ ತೈಲ ಆಮದಿನಲ್ಲಿ ಮಹತ್ತರ ಬದಲಾವಣೆಗಳು ಕಂಡುಬಂದಿವೆ. ರಷ್ಯಾ ಭಾರತಕ್ಕೆ ತೈಲ ಪೂರೈಕೆ ಮಾಡುವ ದೊಡ್ಡ ಪಾಲುದಾರ, ಭಾರತದ ಒಟ್ಟು ತೈಲ ಆಮದಿನ ಶೇ 20ರಷ್ಟು ರಷ್ಯಾ ಪೂರೈಸುತ್ತದೆ, ಸಂಘರ್ಷಕ್ಕೂ ಮೊದಲು ಇದು ಶೇ 2ರಷ್ಟಿತ್ತು. ಈ ಹೆಚ್ಚಳ ಜಾಗತಿಕವಾಗಿ ಪ್ರಕ್ಷುಬ್ಧತೆ ಇದ್ದರೂ ಸಹ ಭಾರತಕ್ಕೆ ತೈಲ ಪೂರೈಕೆಯಾಗುತ್ತಿರುವುದು ಯಶಸ್ವಿ ರಾಜತಾಂತ್ರಿಕ ಕುಶಲತೆಯ ಕಾರಣಕ್ಕೆ ಎಂಬುದನ್ನು ಒಪ್ಪಬೇಕು. ಪ್ರಮುಖವಾದ ಇತ್ತೀಚಿನ ತಿಂಗಳುಗಳ ಅಂಕಿಅಂಶಗಳು ರಷ್ಯಾದಿಂದ ರೈಲ ಆಮದು ಏರಿಕೆಯಾಗಿದೆ ಎಂಬುದನ್ನು ತಿಳಿಸುತ್ತಿವೆ.
ರಸಗೊಬ್ಬರ ಪೂರೈಕೆ ನಿರ್ವಹಣೆ
ಇದೇ ಮಾದರಿಯಲ್ಲಿ ರಸಗೊಬ್ಬರದ ಪೂರೈಕೆ ಭಾರತದ ಕೃಷಿ ಕ್ಷೇತ್ರಕ್ಕೆ ಅತ್ಯಗತ್ಯವಾಗಿದೆ, ಕಾರ್ಯತಂತ್ರದ ಫಲವಾಗಿ ಇದೂ ಸಹ ಸ್ಥಿರವಾಗಿದೆ. ರಷ್ಯಾ ಮತ್ತು ಉಕ್ರೇನ್ ಜೊತೆಗೆ ಸಂಬಂಧ ಬಲಪಡಿಸುವ ಮೋದಿ ಸರ್ಕಾರದ ಪ್ರಮುಖ ಗಮನ ಪೂರೈಕೆಯನ್ನು ಹಾಗೆಯೇ ಉಳಿಯುವಂತೆ ಮಾಡಿದೆ. ರಾಜತಾಂತ್ರಿಕ ಪ್ರಯತ್ನಗಳು ಜಾಗತಿಕವಾಗಿ ಪೂರೈಕೆ ಸಂಪರ್ಕ ಜಾಲದ ಮೇಲೆ ಪರಿಣಾಮ ಬೀರಿದ್ದರೂ ಸಹ ಭಾರತಕ್ಕೆ ಯೂರಿಯಾ ಆಮದು ಪೂರೈಕೆಯಲ್ಲಿ ಯಾವುದೇ ಅಡಚಣೆ ಆಗದಂತೆ ಖಚಿತಪಡಿಸಿವೆ.
ಆರ್ಥಿಕ ಕ್ರಮಗಳು ಮತ್ತು ಸಬ್ಸಿಡಿಗಳು
ಜಾಗತಿಕವಾಗಿ ಬೆಲೆಗಳು ಏರಿಕೆಯಾಗುತ್ತಿರುವಾಗ ಮೋದಿ ಸರ್ಕಾರ ಹಲವು ಕ್ರಮಗಳನ್ನು ಆರ್ಥಿಕ ಕುಸಿತಕ್ಕೆ ಜನರು ಮತ್ತು ರೈತರು ಸಿಲುಕದಂತೆ ತಡೆಯಲು ಜಾರಿಗೊಳಿಸಿದೆ. ಇವುಗಳಲ್ಲಿ ಪ್ರಮುಖವಾದ ಒಂದು ಕ್ರಮ ಸಬ್ಸಿಡಿಗಳ ವಿಸ್ತರಣೆಯಾಗಿದೆ. ತೈಲ ಸಬ್ಸಿಡಿಗಳು ಬಂಕ್ಗಳಲ್ಲಿ ತೈಲ ದರಗಳನ್ನು ಸ್ಥಿರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯೂರಿಯಾ ಮೇಲಿನ ಸಬ್ಸಿಡಿ ರಸಗೊಬ್ಬರದ ದರ ಏರಿಕೆಯಾಗದಂತೆ ತಡೆಯಲು ಸಹಾಯಕವಾಗಿದ್ದು, ರೈತರ ಖರ್ಚು ಕಡಿಮೆಗೊಳಿಸಿದೆ. ಮುಖ್ಯವಾಗಿ ಕಳೆದ ವರ್ಷ ಯೂರಿಯಾ ಮೇಲಿನ ಸಬ್ಸಿಡಿ ಎರಡುಪಟ್ಟು ಹೆಚ್ಚಾಗಿದೆ. ಇದು ಸವಾಲಿನ ಸಂದರ್ಭದಲ್ಲಿಯೂ ಕೃಷಿ ಕ್ಷೇತ್ರಕ್ಕೆ ಬೆಂಬಲ ನೀಡುವ ಸರ್ಕಾರದ ಬದ್ಧತೆಯನ್ನು ಪ್ರತಿಫಲಿಸುತ್ತದೆ.
ವ್ಯವಹಾರ ಮತ್ತು ಸವಾಲುಗಳು
ಆದಾಗ್ಯೂ ಈ ಸಬ್ಸಿಡಿಗಳು ಅವುಗಳದ್ದೇ ಆದ ಸವಾಲುಗಳನ್ನು ಒಳಗೊಂಡಿವೆ. ಸಬ್ಸಿಡಿಗಳಿಗೆ ಹೊಂದಿಸಬೇಕಾದ ಅನುದಾನವನ್ನು ನಿರ್ಣಾಯಕ ಕ್ಷೇತ್ರಗಳಾದ ಉದ್ಯೋಗ ಸೃಷ್ಟಿ, ಮೂಲ ಸೌಕರ್ಯಗಳು ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಂದ ಬೇರ್ಪಡಿಸಲಾಯಿತು. ಈ ವ್ಯವಹಾರಕ್ಕಾಗಿ ಸರ್ಕಾರವು ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಯಿತು. ದೀರ್ಘಕಾಲೀನ ಹೂಡಿಕೆಗಳಿಗಿಂತ ಕಡಿಮೆ ಅವಧಿಯ ಪರಿಹಾರಕ್ಕೆ ಇದು ಆದ್ಯತೆ ನೀಡಿತು. ಈ ಸಬ್ಸಿಡಿಗಳ ಆರ್ಥಿಕ ಒತ್ತಡವು ಇತರ ಅಗತ್ಯ ಅಭಿವೃದ್ಧಿ ಕ್ಷೇತ್ರಗಳ ಮೇಲೆಯೂ ಪರಿಣಾಮವನ್ನು ಬೀರುತ್ತದೆ.
ಮುನ್ನೋಟ
ಭಾರತದ ರಾಜತಾಂತ್ರಿಕತೆಯ ಹಾದಿಯು ಅಗತ್ಯವಾದ ತೈಲ ಮತ್ತು ಯೂರಿಯಾ ಪೂರೈಕೆಯ ಆಡಚಣೆಯಾಗಂತೆ ಸುಸ್ಥಿರಗೊಳಿಸಿತು. ರಷ್ಯಾ ಮತ್ತು ಉಕ್ರೇನ್ ಜೊತೆ ದೃಢವಾದ ಸಂಬಂಧಗಳನ್ನು ಹೊಂದಿರುವ ಭಾರತ ವಿಶ್ವದ ಅಸ್ಥಿರತೆ ಸಮಯದಲ್ಲಿ ಪೂರೈಕೆ ಸ್ಥಿರವಾಗಿರುವಂತೆ ನಿರ್ವಹಣೆ ಮಾಡಿತು.
ಈ ಕಡಿಮೆ ಅವಧಿಯ ಕ್ರಮಗಳು ಪರಿಣಾಮಕಾರಿ, ಮೋದಿ ಸರ್ಕಾರ ದೀರ್ಘಾವಧಿಯ ಪರಿಹಾರಗಳ ಕುರಿತು ಕೆಲಸ ಮಾಡುತ್ತಿದೆ. ತೈಲ ಮತ್ತು ಯೂರಿಯಾ ಮುಂತಾದ ಪ್ರಮುಖ ಕ್ಷೇತ್ರಗಳ ಸ್ವಾವಲಂಬನೆ ಹೆಚ್ಚಿಸುವತ್ತ ಗಮನಹರಿಸಿದೆ. ಈ ತಂತ್ರಾತ್ಮಕ ಬದಲಾವಣೆ ಜಾಗತಿಕ ಪೂರೈಕೆ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಜಾಗತಿಕ ಸಂಘರ್ಷಗಳ ಸಮಯದಲ್ಲಿ ಭವಿಷ್ಯದ ಅಪಾಯಗಳನ್ನು ತಗ್ಗಿಸಲು ಸಹಕಾರಿಯಾಗಿದೆ.












Click it and Unblock the Notifications