ದುಬೈನಲ್ಲಿ ಭಾರತೀಯರ ಉದ್ದೇಶಿಸಿ ಮೋದಿ ಪ್ರಖರ ಭಾಷಣ
ಅಬುಧಾಬಿ, ಆಗಸ್ಟ್ 17 : "ಭಾಯಿಯೋ ಔರ್ ಬೆಹೆನೋ, ಭಾರತ ಕಳೆದ 40 ವರ್ಷಗಳಿಂದ ಭಯೋತ್ಪಾದನೆಗೆ ಬಲಿಯಾಗುತ್ತಿದೆ. ಭಯೋತ್ಪಾದನೆಯನ್ನು ಬೆಂಬಲಿಸುವವರು ಒಂದೆಡೆಯಾದರೆ, ಮಾನವೀಯತೆಯನ್ನು ಬೆಂಬಲಿಸುವವರು ಒಂದಾಗಿದ್ದೇವೆ. ಭಯೋತ್ಪಾದನೆ ನಿರ್ನಾಮ ಮಾಡುವ ಘಳಿಗೆ ಬಂದುಬಿಟ್ಟಿದೆ" ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ದುಬೈನಲ್ಲಿ ಸಾರಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಭೇಟಿಯ ಸಂದರ್ಭದಲ್ಲಿ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ 50 ಸಾವಿರ ಭಾರತೀಯರನ್ನು ಉದ್ದೇಶಿಸಿ ಪ್ರಖರವಾದ ಭಾಷಣ ಮಾಡಿದ ನರೇಂದ್ರ ಮೋದಿ, ಕಿವಿಗಡಚಿಕ್ಕುವ ಚಪ್ಪಾಳೆಗಳ ನಡುವೆ ಭಯೋತ್ಪಾದನೆಯ ವಿರುದ್ಧ ತಮ್ಮ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಉಗ್ರರ ವಿರುದ್ಧ ಭಾರತದ ಹೋರಾಟ ಅಚಲ. ನಮ್ಮ ಹೋರಾಟಕ್ಕೆ ಯುಎಇ ಬೆಂಬಲಿಸಿದೆ. ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಪರ್ಮನಂಟ್ ಸ್ಥಾನ ಸಿಗಬೇಕೆಂಬ ಮಾತಿಗೂ ಯುಎಇ ಬೆಂಬಲಿಸಿದೆ. ಇದು ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ದೇಶಕ್ಕೆ ಕಟ್ಟೆಚ್ಚರಿಕೆ ಎಂದು ಅವರು ಸೋಮವಾರ ಮಾಡಿದ ಭಾಷಣದಲ್ಲಿ ಘೋಷಿಸಿದರು.

ಕ್ರಿಕೆಟ್ ಮೈದಾನದಲ್ಲಿ ಅವರು ಮಾಡಿದ ಭಾಷಣದ ಮುಖ್ಯಾಂಶ
* ಯಾವುದೇ ದೇಶದ ರಾಜಕಾರಣಿ ಅಥವಾ ಪ್ರಮುಖ ವ್ಯಕ್ತಿ ಮೋದಿಯೊಂದಿಗೆ ಕೈಜೋಡಿಸುವಾಗ ಅವರು ಅವರ ಕೈಕುಲುಕುವಾಗ ಅವರು ನರೇಂದ್ರ ಮೋದಿಯ ಮುಖ ನೋಡುವುದಿಲ್ಲ, ಬದಲಾಗಿ 125 ಕೋಟಿ ಭಾರತೀಯರ ಮುಖವನ್ನು ಕಾಣುತ್ತಾರೆ.
* ಇದು ನೂರು ಕಾಲು ಕೋಟಿ ಭಾರತೀಯರಿಗೆ ಇತರ ರಾಷ್ಟ್ರಗಳು ನೀಡುತ್ತಿರುವ ಸನ್ಮಾನ. ಭಾರತ ಇಂದು ಅತ್ಯಂತ ವೇಗವಾಗಿ ಆರ್ಥಿಕವಾಗಿ ಬೆಳೆಯುತ್ತಿರುವ ದೇಶವಾಗಿದೆ.
* ಯುಎಇಯ ಕ್ರೌನ್ ಪ್ರಿನ್ಸ್ ಭಾರತದಲ್ಲಿ 4.5 ಲಕ್ಷ ಕೋಟಿ ರು.ಯಷ್ಟು ಬಂಡವಾಳವನ್ನು ಹೂಡಿಕೆ ಮಾಡಲಿದ್ದಾರೆ. ಭಾರತದ ಮೇಲೆ ನಂಬಿಕೆ ಇಲ್ಲದೆ ಇದನ್ನು ಅವರು ಮಾಡುತ್ತಾರೆಯೆ?
* 34 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಅಬುಧಾಬಿಗೆ ಬಂದಿದ್ದಾರೆ. ನನ್ನ ಪೂರ್ವಜರು ಒಳ್ಳೆಯ ಕೆಲಸ ಮಾಡಲು ನನಗೆ ಬಿಟ್ಟು ಹೋಗಿದ್ದಾರೆ.
* ಯುಎಇಯ ಎಲ್ಲ ಭಾರತೀಯರಿಗೆ ನಾನು ತಲೆ ಬಾಗಿಸುತ್ತೇನೆ. ಇಷ್ಟು ವರ್ಷಗಳ ನಂತರ ಬಂದಿದ್ದಕ್ಕೆ ಯಾರೂ ಸಿಟ್ಟಿಗೆದ್ದಿಲ್ಲ, ಎಲ್ಲರೂ ನನಗೆ ಪ್ರೀತಿ ನೀಡಿದ್ದಾರೆ. ಇಡೀ ವಿಶ್ವವೇ ಇದನ್ನು ನೋಡುತ್ತಿದೆ.
* ಕ್ರೌನ್ ಪ್ರಿನ್ಸ್ ತನ್ನ ಎಲ್ಲ ಐದೂ ಸಹೋದರರೊಂದಿಗೆ ನನ್ನನ್ನು ಬರಮಾಡಿಕೊಂಡಿದ್ದಾರೆ. ಇದಕ್ಕಿಂತ ಹೆಚ್ಚಿನದೇನನ್ನು ನಾನು ನಿರೀಕ್ಷಿಸಲಿ?
* ಅಟಲ್ ಬಿಹಾರಿ ಸುರಕ್ಷಾ ಯೋಜನೆಯನ್ನು ನಿಮ್ಮ ಸಹೋದರಿಗೆ ಉಡುಗೊರೆಯಾಗಿ ಈ ರಕ್ಷಬಂಧನದ ಸಂದರ್ಭದಲ್ಲಿ ನೀಡಿರಿ. ವರ್ಷಕ್ಕೆ ನೀಡುವ 600 ರು.ನಿಂದ ಆಕೆಗೆ 2 ಲಕ್ಷ ರು. ರಕ್ಷಣೆ ಸಿಗಲಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications