ಸತ್ಯ ಗೊತ್ತಾ? ಮುಸ್ಲಿಂರಿಗೆ ಭಯೋತ್ಪಾದನೆ ಬೇಕಿಲ್ಲವಂತೆ!
ಪಿಜಿಎಪಿ (PEW Global Attitudes Project) ಇತ್ತೀಚೆಗೆ ಇಸ್ಲಾಂ ರಾಷ್ಟ್ರಗಳಲ್ಲಿ ಅಧ್ಯಯನವೊಂದನ್ನು ನಡೆಸಿದೆ. ಇಸ್ಲಾಂ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಮುಸ್ಲಿಮರು ಭಯೋತ್ಪಾದನೆ ಮತ್ತು ಜಿಹಾದ್ ಬಗ್ಗೆ ಯಾವ ನಿಲುವನ್ನು ತಾಳಿದ್ದಾರೆಂದು ಸವಿವರವಾಗಿ ಈ ಅಧ್ಯಯನದಲ್ಲಿ ತಿಳಿಸಲಾಗಿದೆ.
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಎಂಡ್ ಸಿರಿಯಾ (ಐಎಸ್ಐಎಸ್) ಮಧ್ಯಪ್ರಾಚ್ಯ ಭಾಗದಲ್ಲಿ ತನ್ನ ಕರಾಳ ಹಿಡಿತವನ್ನು ಬಿಗಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಈ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ಬಂದಿದೆ.
ವಿಶ್ವದ ಹದಿನಾಲ್ಕು ಮುಸ್ಲಿಂ ಪ್ರಾಬಲ್ಯವಿರುವ ದೇಶಗಳಲ್ಲಿನ 14,244 ಮಂದಿ ಭಾಗಿಯಾಗಿರುವ ಈ ಅಧ್ಯಯನವನ್ನು ಈ ವರ್ಷದ ಎಪ್ರಿಲ್ 10 ರಿಂದ ಮೇ 25ರ ಅವಧಿಯಲ್ಲಿ ನಡೆಸಲಾಗಿತ್ತು. (ಇಸ್ಲಾಂ ಸಾಮ್ರಾಜ್ಯ ವಿಸ್ತರಣೆ: ಉಗ್ರರ ಕಣ್ಣು ಭಾರತದತ್ತ)
ಏಪ್ರಿಲ್ ತಿಂಗಳ ಆದಿಯಲ್ಲಿ ಇರಾಕ್ ಮತ್ತು ಸಿರಿಯಾ ಭಾಗದಲ್ಲಿ ಉಗ್ರರ ಹಿಡಿತ ಈ ಪ್ರಮಾಣದಲ್ಲಿ ಇಲ್ಲದಿದ್ದರೂ ಐಎಸ್ಐಎಸ್ ಮತ್ತು ತಾಲಿಬಾನ್ ಉಗ್ರರ ದಾಳಿಯ ಭೀತಿಯ ಬಗ್ಗೆ ಮುಸ್ಲಿಂ ರಾಷ್ಟ್ರಗಳಲ್ಲಿನ ಜನತೆ ತೀವ್ರ ಕಾಳಜಿಯನ್ನು ಹೊಂದಿದ್ದರು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಅದರಲ್ಲೂ ಮುಸ್ಲಿಂ ರಾಷ್ಟ್ರದ ವಿಸ್ತರಣೆಗಾಗಿ ಹೆಚ್ಚಿನ ದಾಳಿಗೆ ಸನ್ನದ್ದವಾಗುವಂತೆ ತನ್ನ ಉಗ್ರ ಪಡೆಗಳಿಗೆ ಐಎಸ್ಐಎಸ್ ಸಂಘಟನೆ ಕರೆ ನೀಡಿರುವುದಕ್ಕೂ ಅಧ್ಯಯನದಲ್ಲಿ ಭಾಗಿಯಾಗಿದ್ದವರು ತೀವ್ರ ವಿಷಾದವನ್ನು ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿ..
(ಫೋಟೋ: ಪಿಟಿಐ: ಮಾಹಿತಿ: ವಾಷಿಂಗ್ಟನ್ ಪೋಸ್ಟ್, PEW ಗ್ಲೋಬಲ್)

ಮಧ್ಯಪ್ರಾಚ್ಯ ಭಾಗದಲ್ಲಿ
ವಿಶ್ವದಲ್ಲಿನ ಮತ್ತು ಪ್ರಮುಖವಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಜನರು ತೀವ್ರ ನೋವನ್ನು ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ ಲೆಬನಾನ್ ನಲ್ಲಿ ಶೇ. 92, ಟುನೇಶಿಯಾದಲ್ಲಿ ಶೇ.80, ಈಜಿಪ್ಟ್ ಶೇ. 75, ಜೋರ್ಡಾನ್ ಶೇ. 62, ಟರ್ಕಿಯಲ್ಲಿನ ಶೇ. 50ರಷ್ಟು ಮಂದಿ ಜಿಹಾದ್ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.

ಉಗ್ರರ ವಿರುದ್ದ ಲೆಬನಾನ್ ಜನತೆ ಕೆಂಡ
ಉಗ್ರರ ದಾಳಿಯಿಂದ ಹೈರಾಣವಾಗಿರುವ ಲೆಬನಾನ್ ಜನತೆ ಭಯೋತ್ಪಾದನೆಯ ವಿರುದ್ದ ಕೆಂಡಕಾರುತ್ತಿದ್ದಾರೆ. ಅಲ್ ಖೈದಾ ಉಗ್ರ ಸಂಘಟನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಲೆಬನಾನ್ (ಶೇ. 96), ಟರ್ಕಿ (ಶೇ.85), ಜೋರ್ಡಾನ್ (ಶೇ.83), ಈಜಿಪ್ಟ್ (ಶೇ. 81), ಟುನೇಶಿಯಾ (ಶೇ.74), ಬಾಂಗ್ಲಾದೇಶ (ಶೇ. 66), ಇಂಡೋನೇಶಿಯಾ (ಶೇ. 56), ಪಾಕಿಸ್ತಾನ (ಶೇ. 42) ಮತ್ತು ಮಲೇಷಿಯಾದ ಶೇ. 32ರಷ್ಟು ಮಂದಿ ಈ ಸಂಘಟನೆಯ ಕಾರ್ಯವೈಖರಿಗೆ ತಮ್ಮ ವಿರೋಧ ವ್ಯಕ್ತ ಪಡಿಸಿದ್ದಾರೆ.

ಅಲ್ ಖೈದಾಗೆ ಸ್ವಲ್ಪ ಮಟ್ಟಿನ ಬೆಂಬಲ್
ಆದಗ್ಯೂ, ಮುಸ್ಲಿಂ ಪ್ರಾಬಲ್ಯವಿರುವ ಈ ರಾಷ್ಟ್ರಗಳಲ್ಲಿ ಅಲ್ ಖೈದಾ ಸಂಘಟನೆಗೆ ಸ್ವಲ್ಪ ಮಟ್ಟಿನ ಬೆಂಬಲವಿರುವುದೂ ಕಂಡು ಬಂದಿದೆ, ಅದಕ್ಕಿರುವ ಕಾರಣವೆಂದರೆ ಸುನ್ನಿ ತೀವ್ರವಾದಕ್ಕಾಗಿ. ಪ್ರಮುಖವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಜನತೆ ತಾಲಿಬಾಲ್ ವಿರುದ್ದ ಬೇಸತ್ತಿ ಹೋಗಿರುವುದು ರಕ್ತಪಾತ ಶಾಸ್ವತ ಅಲ್ಲ ಎನ್ನುವ ನಿರ್ಧಾರಕ್ಕೆ ಬಂದಂತಿದೆ.

ಆತ್ಮಹತ್ಯಾ ದಾಳಿಯ ಬಗ್ಗೆ
ಆತ್ಮಹತ್ಯಾ ದಾಳಿಯ ಬಗ್ಗೆ ಕೇಳಿದ ಪ್ರಶ್ನೆಗೆ, ಕೆಲವೊಂದು ಮುಸ್ಲಿಂ ರಾಷ್ಟ್ರಗಳಲ್ಲಿ ಇಂತಹ ದಾಳಿಗೆ ಬೆಂಬಲ ವ್ಯಕ್ತವಾಗಿರುವುದು ಆಶ್ಚರ್ಯ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಜನತೆ ಪ್ಯಾಲೇಸ್ತೇನ್ ಭಾಗದಲ್ಲಿ ನಡೆಯುವ ಆತ್ಮಹತ್ಯಾ ದಾಳಿಗೆ ಬೆಂಬಲ ಸೂಚಿಸಿರುವುದು ಅಧ್ಯಯನದಲ್ಲಿನ ಗಮನಿಸಬೇಕಾದ ಅಂಶ. ಆದರೆ ಪಾಕಿಸ್ತಾನದ ಜನತೆ ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ಹಿಂಸಾಚಾರದ ವಿರುದ್ದವಾಗಿದ್ದಾರೆಂದು ಸಂಸ್ಥೆ ನಡೆಸಿದ ಅಧ್ಯಯನದಲ್ಲಿನ ಪ್ರಮುಖ ಅಂಶಗಳಲ್ಲೊಂದು.

ಮೌಲ್ವಿ, ಮುಲ್ಲಾಗಳ ಜಿಹಾದ್ ಕರೆ
ಬಹಳಷ್ಟು ಬಾರಿ ನಾವು ಗಮನಿಸುತ್ತಿದ್ದ ಹಾಗೇ ಮೌಲ್ವಿಗಳು, ಮುಲ್ಲಾಗಳು ಮತ್ತು ಧಾರ್ಮಿಕ ಗುರುಗಳು ಜಿಹಾದ್ ಬೆಂಬಲಿಸಿ ಸಾರ್ವಜನಿಕವಾಗಿ ಕರೆ ನೀಡುತ್ತಾರೆ. ಮುಸ್ಲಿಮರಿಗೇ ಇಲ್ಲದ ಜಿಹಾದ್ ರಕ್ತ ಸಂಪ್ರದಾಯದ ಮೇಲಿನ ಕುರುಡು ಪದ್ದತಿ ಇವರಿಗ್ಯಾಕೆ ಎನ್ನುವುದು ಇಲ್ಲಿ ಹುಟ್ಟುವ ಪ್ರಶ್ನೆ?
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications