ಭುವನ ಸುಂದರಿ ಸ್ಪರ್ಧೆಯಲ್ಲಿ 'ಹಾರ್ವೆ' ಮಾಡಿದ ಎಡವಟ್ಟು!
ಲಾಸ್ ವೇಗಾಸ್, ಡಿಸೆಂಬರ್, 21: ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಎಡವಟ್ಟಾಗಿದೆ. ಸುರಸುಂದರಿಯಾಗಿ ಹೊರಹೊಮ್ಮಿದ್ದ ಸ್ಪರ್ಧಾಳುವಿಗೆ ಹಾಕಬೇಕಿದ್ದ ಕಿರೀಟವನ್ನು ಮತ್ತೊಬ್ಬರಿಗೆ ಹಾಕಿದ್ದು ವಿವಾದ ಎಬ್ಬಿಸಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಸಹ #MissUniverse2015ಟ್ರೆಂಡಿಂಗ್. ಭುವನ ಸುಂದರಿ ಕಿರೀಟಕ್ಕಾಗಿ ಅಮೆರಿಕಾ, ಕೊಲಂಬಿಯಾ, ರಷ್ಯಾ, ಭಾರತ, ಆಫ್ರಿಕಾ ಸೇರಿದಂತೆ ಸುಮಾರು 80 ದೇಶಗಳ ಸುಂದರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಇದಕ್ಕೆಲ್ಲ ಕಾರಣ ಮಾಡಿಕೊಟ್ಟವರು ಅಮೆರಿಕದ ಖ್ಯಾತ ಕಾಮಿಡಿಯನ್ ಸ್ಟೀವ್ ಹಾರ್ವೆ. ವಿಜೇತರ ಹೆಸರನ್ನು ತಪ್ಪಾಗಿ ಹೇಳಿದ್ದೇ ಗೊಂದಲಕ್ಕೆ ದಾರಿಮಾಡಿಕೊಟ್ಟಿದೆ. ನಂತರ ಹಾರ್ವೆ ಕ್ಷಮಾಪಣೆ ಕೇಳಿದರೂ ಅಷ್ಟು ಹೊತ್ತಿಗೆ ಎಲ್ಲ ಮುಗಿದು ಹೋಗಿತ್ತು.
ಮೊದಲು ಮಿಸ್ ಕೊಲಂಬಿಯಾದ ಗ್ಯುಟಿರ್ರೆಝಾ ಅವರನ್ನು 2015ರ ಮಿಸ್ ಯುನಿವರ್ಸ್ ಎಂದು ಘೋಷಣೆ ಮಾಡಲಾಯಿತು. ಆಕೆಗೆ ಕಿರೀಟವನ್ನು ತೊಡಿಸಲಾಯಿತು. ಆಕೆ ಸಂಭ್ರಮದಿಂದ ಕುಣಿದಾಡಿದ್ದು ಆಯಿತು. ಆದರೆ ಇದಾದ ಮೇಲೆ ಮಿಸ್ ಫಿಲಿಪೈನ್ಸ್ ಸುಂದರಿ ಪಿಯಾ ಅಲೋಂಜೋ ಅವರನ್ನು ವಿನ್ನರ್ ಎಂದು ಘೋಷಣೆ ಮಾಡಲಾಯಿತು.[ಭದ್ರಾವತಿಯ ಆಶಾ ಭಟ್ ಜಗಮೆಚ್ಚಿದ ಸುಂದರಿ]
ಸಾಮಾಜಿಕ ತಾಣದಲ್ಲಿ ಇದು ಜೋಕ್ ಗಳನ್ನು ಹುಟ್ಟುಹಾಕಿದೆ. ಕಿರೀಟವನ್ನು ಮೊದಲ ರನ್ನರ್ ಅಪ್ ಗೆ ನೀಡಿಯೂ ಆಗಿತ್ತು. ನಂತರ ಇಬ್ಬರು ಸುಂದರಿಯರು ಕ್ಷಮಾಪಣೆಯನ್ನು ಕೇಳಿದರು. ಫಿಲಿಪೈನ್ಸ್ ಅಭಿಮಾನಿಗಳು ಇದರಿಂದ ಕೊಂಚ ಉದ್ವೇಗಕ್ಕೆ ಒಳಗಾಗಿದ್ದು ಕಂಡು ಬಂತು. ಒಟ್ಟಿನಲ್ಲಿ ಒಮ್ಮೆ ನಗೆಪಾಟಲಿಗೆ ಈಡಾದ ಭುವನ ಸುಂದರಿ ಸ್ಪರ್ಧೆ ಸುತ್ತ ನೀವು ಒಂದು ರೌಂಡ್ ಹಾಕಿಕೊಂಡು ಬನ್ನಿ....ಪುಣ್ಯಾತ್ಮ ಸ್ಟೀವ್ ಹಾರ್ವೆ ಅದ್ಯಾಕೆ ತಪ್ಪು ಹೆಸರು ಹೇಳಿದನೋ ಅವನನ್ನೇ ಕೇಳಬೇಕು!

ರನ್ನರ್ ಅಪ್ ಗೆ ಕಿರೀಟ
ಮೊದಲು ಮಿಸ್ ಕೊಲಂಬಿಯಾ ಗ್ಯುಟಿರ್ರೆಝಾ ಅವರನ್ನು ಮಿಸ್ ಯೂನಿವರ್ಸ್ ಎಂದು ಘೋಷಣೆ ಮಾಡಲಾಯಿತು. ಆದರೆ ನಂತರ ಆಕೆ ಕಿರೀಟವನ್ನು ವಾಪಸ್ ನೀಡಬೇಕಾಯಿತು

ನಿಜವಾದ ಮಿಸ್ ಯುನಿವರ್ಸ್
ಇದಾದ ಮೇಲೆ ಮಿಸ್ ಫಿಲಿಪೈನ್ಸ್ ಸುಂದರಿ ಪಿಯಾ ಅಲೋಂಜೋ ಅವರನ್ನು ವಿನ್ನರ್ ಎಂದು ಘೋಷಣೆ ಮಾಡಲಾಯಿತು. ಈಕೆ 2015ರ ಭುವನ ಸುಂದರಿಯಾಗಿ ಹೊರಹೊಮ್ಮಿದಳು.

ಸಮಾಧಾನ ಹೇಳಿದ ಇತರ ಸ್ಪರ್ಧಿಗಳು
ಪ್ರಶಸ್ತಿ ಅಥವಾ ಕಿರೀಟ ಬರದಿದ್ದರೂ ಬೇಸರವಾಗಲ್ಲ. ಆದರೆ ಒಮ್ಮೆ ನೀಡಿ ನಂತರ ನೀನು ಜಯಶಾಲಿಯಲ್ಲ ಅಂದರೆ ಎಂಥವರಿಗೂ ಬೇಸರವಾಗುತ್ತದೆ. ಕೊಲಂಬಿಯಾದ ಸುಂದರಿಯನ್ನು ಸಮಾಧಾನಪಡಿಸಿದ ಇತರ ಸ್ಪರ್ಧಿಗಳು.
|
ವಿಡಿಯೋ ನೋಡಿಕೊಂಡು ಬನ್ನಿ
ಮಿಸ್ ಯುನಿವರ್ಸ್ ಸ್ಪರ್ಧೆಯ ಫೈನಲ್ ನಲ್ಲಿ ನಡೆದ ಪ್ರಮಾದದ ವಿಡಿಯೋ ನೋಡಿಕೊಂಡು ಬನ್ನಿ..
|
ಕ್ಷಮೆ ಕೇಳಲು ಸಮಯ ಮೀರಿದೆ
ಕ್ಷಮಾಪಣೆ ಕೇಳಲು ಸಮಯ ಮೀರಿದ. ಆದರೆ ಏನೂ ಮಾಡುವಂತಿಲ್ಲ. ಸ್ವತಃ ಹಾರ್ವೆ ಹೇಳಿದ ಮಾತುಗಳು ಟ್ವಿಟ್ಟರ್ ನಲ್ಲಿ ಮೂಡಿದ್ದು ಹೀಗೆ.
|
ಪ್ರತಿಕ್ರಿಯೆ ಹೀಗಿತ್ತಾ!
ಮೊದಲಿ ಕಿರೀಟ ಕೈ ತಪ್ಪಿ ಹೋಯಿತೆಂದು ನೊಂದುಕೊಂಡಿದ್ದ ಫಿಲಿಪೈನ್ಸ್ ಸುಂದರಿಗೆ ಪ್ರಶಸ್ತಿ ಒಲಿದ ಮೇಲೆ ಈ ರೀತಿಯ ಪ್ರತಿಕ್ರಿಯೆ ನೀಡಿದಳೆ!
|
ಈತನೇ ಸ್ಟೀವ್ ಹಾರ್ವೆ
ವಿಜೇತರ ಹೆಸರನ್ನು ತಪ್ಪಾಗಿ ಹೇಳಿ ಕೊನೆಗೆ ಕ್ಷಮೆ ಕೇಳಿದ ಸ್ಟೀವ್ ಹಾರ್ವೆ ಇವರೆ. ಪ್ರಮಾದಕ್ಕೆ ಎಡೆಮಾಡಿಕೊಟ್ಟು ನಂತರ ಕ್ಷಮೆ ಕೇಳಿದ ಹಾರ್ವೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications