ಶತ್ರು ದೇಶಕ್ಕೆ ಹೊಸ ಹೆಸರನ್ನು ನೀಡಿದ ಕಿಮ್ಮಣ್ಣ: ಕೆಮ್ಮಿ ಕೆಮ್ಮಿ ನಗುತ್ತಿರುವ ಪಾಶ್ಚಿಮಾತ್ಯರು!
ಕಿಮ್ ಜಾಂಗ್ ಉನ್ ಹೆಸರು ಕೇಳಿದ್ರೆ ಒಂದು ಕ್ಷಣ ಜಗತ್ತಿನ ಯಾವುದೇ ದೇಶವಾದರೂ ಭಯ & ಆತಂಕ ವ್ಯಕ್ತಪಡಿಸುವುದು ಗ್ಯಾರಂಟಿ. ಯಾಕಂದ್ರೆ ಕಿಮ್ ಜಾಂಗ್ ಉನ್ ಇಟ್ಟಿರುವ ಹವಾ ಅಂತಹದ್ದು. ಕಿಮ್ ಜಾಂಗ್ ಉನ್ ಒಂದು ಸಾರಿ ಗುಡುಗಿದರೆ ಸಾಕು ದೂರ ದೂರದಲ್ಲಿರುವ ದೇಶಗಳು ಕೂಡ ಒಂದು ಕ್ಷಣ ಭಯಪಡುತ್ತವೆ. ಹೀಗಿದ್ದಾಗ ಅಕ್ಕಪಕ್ಕದ ದೇಶಗಳ ಪರಿಸ್ಥಿತಿ ಏನು? ಅನ್ನೋ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ನಿಮ್ಮ ಪ್ರಶ್ನೆಗೆ ಉತ್ತರ ಹುಡುಕುವ ಜೊತೆಗೆ, ಮತ್ತೊಂದು ಭರ್ಜರಿ ಸುದ್ದಿಯು ಇದೆ ಮುಂದೆ ಓದಿ.
ಅಂದಹಾಗೆ, ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಸರ್ವಾಧಿಕಾರಿ ಅನ್ನೋದು ಜಗತ್ತಿಗೇ ಗೊತ್ತಿರುವ ಸಂಗತಿ. ಆದರೆ ತನ್ನ ಪಕ್ಕದ ದೇಶ ಅಂದ್ರೆ ದಕ್ಷಿಣ ಕೊರಿಯಾ ಕಂಡರೆ ಕಿಮ್ನ ತಾತನಿಂದ ಹಿಡಿದು ಈಗಿನ ತಲೆಮಾರಿನ ತನಕ ಯಾರಿಗೂ ಆಗುವುದಿಲ್ಲ. ಒಂದು ಕಾಲದಲ್ಲಿ ಉತ್ತರ ಕೊರಿಯಾ & ದಕ್ಷಿಣ ಕೊರಿಯಾ ಎರಡೂ ದೇಶಗಳು ಒಟ್ಟಿಗೆ ಬದುಕುತ್ತಿದ್ದವು.

ಇದೇ ಒಗ್ಗಟ್ಟು ಸುಮಾರು ಅರ್ಧ ಶತಮಾನದ ಹಿಂದೆ ಮುರಿದು ಹೋಗಿತ್ತು. ಆಗ ಎರಡೂ ದೇಶ ಪೀಸ್ ಪೀಸ್ ಆಗಿ, ಒಂದು ದೇಶವನ್ನ ಉತ್ತರ ಕೊರಿಯಾ ಎಂದು ಕರೆಯಲಾಯಿತು. ಹೀಗೆ ದಕ್ಷಿಣ ಭಾಗದಲ್ಲಿ ಹರಡಿದ್ದ ದೇಶವನ್ನು ದಕ್ಷಿಣ ಕೊರಿಯಾ ಎಂದು ಕರೆಯಲಾಯಿತು. ಈ ಇಬ್ಬರ ದ್ವೇಷ ಈಗ ಮತ್ತಷ್ಟು ಹೆಚ್ಚಾಗಿದ್ದು, ಉತ್ತರ ಕೊರಿಯಾ ಅಧ್ಯಕ್ಷ ಅಥವಾ ಸರ್ವಾಧಿಕಾರಿ ಮಾಡಿರುವುದು ಏನು ಗೊತ್ತಾ? ಮುಂದೆ ಓದಿ.
ಶತ್ರುಗಳಿಗೆ ಹೊಸ ಹೆಸರು ಕೊಟ್ಟ ಕಿಮ್!
ಹೌದು, ಕಿಮ್ ಜಾಂಗ್ ಉನ್ ಬಳಿ ಸಾಕಷ್ಟು ಪರಮಾಣು ಅಸ್ತ್ರಗಳು ಇವೆ. ಹೀಗಾಗಿ ಶತ್ರು ದೇಶಗಳಿಗೆ ಕಿಮ್ ಜಾಂಗ್ ಉನ್ ಕಂಡರೆ ಭಯ... ಭಯ... ಯಾವ ಕ್ಷಣದಲ್ಲಿ ತನ್ನಲ್ಲಿರುವ ಪರಮಾಣು ಬಾಂಬ್ಗಳನ್ನ ಶತ್ರುಗಳ ಮೇಲೆ ಹಾಕಿಬಿಡುತ್ತಾನೋ, ಆ ಮೂಲಕ ಎಲ್ಲವನ್ನು ನಾಶ ಮಾಡಿಬಿಡುತ್ತಾನೋ ಅಂತಾ ಜಪಾನ್, ದಕ್ಷಿಣ ಕೊರಿಯಾ, ಅಮೆರಿಕ ದೇಶಗಳು ಸದಾ ಅಂಜಿಕೆಯಲ್ಲೇ ದಿನ ದೂಡುತ್ತಿವೆ. ಇಂತಹ ಸಮಯದಲ್ಲೇ ತನ್ನ ಪರಮ ಶತ್ರು ದ. ಕೊರಿಯಾ ದೇಶಕ್ಕೆ ಇದೀಗ ಪ್ರತಿಕೂಲ ದೇಶ ಎಂಬ ಅಡ್ಡ ಹೆಸರು ಇಟ್ಟಿದ್ದಾನೆ ಕಿಮ್ ಜಾಂಗ್ ಉನ್!
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications