45 ಕೋಟಿಗೆ ಹರಾಜಾದ 54 ವರ್ಷ ಹಳೆಯ ಕಾರು: ಏನಿದರ ವಿಶೇಷತೆ?
ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 11: ಐವತ್ತನಾಲ್ಕು ವರ್ಷದ ಹಳೆಯ ಕಾರೊಂದು ಇತ್ತೀಚೆಗೆ 45 ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಹರಾಜಾಗಿದೆ. ಕಾರಿಗೆ ಯಾವುದೇ ಚಿನ್ನದ ಲೇಪನವಾಗಲಿ, ವಜ್ರದ ಚಕ್ರಗಳಾಗಲಿ -ಇರಲಿಲ್ಲ, ಆದರೂ ಅಷ್ಟು ದೊಡ್ಡ ಬೆಲೆಗೆ ಅದು ಹರಾಜಾಗಿದೆ.
1965 ರಲ್ಲಿ ನಿರ್ಮಾಣವಾದ ಆಸ್ಟಿನ್ ಮಾರ್ಟಿನ್ ಕಾರು ಕೆಲವೇ ದಿನಗಳ ಹಿಂದೆ ಕ್ಯಾಲಿಫೋರ್ನಿಯಾದ ಮಾಂಟೆರೆರಿ ಎಂಬಲ್ಲಿ ಬರೋಬ್ಬರಿ 6.4 ಮಿಲಿಯನ್ ಡಾಲರ್ಗೆ ಹರಾಜಾಗಿದೆ. ಈ ಮೊತ್ತವನ್ನು ರೂಪಾಯಿಗೆ ಬದಲಾಯಿಸಿದರೆ ಬರೋಬ್ಬರಿ 45,85,05,600 ರೂಪಾಯಿ ಆಗುತ್ತದೆ.
ಏನಿದರ ವಿಶೇಷತೆ ಎಂದರೆ, ಈ ಕಾರನ್ನು ಚಲಾಯಿಸಿದ್ದು ಜೇಮ್ಸ್ ಬಾಂಡ್ 007! ಹೌದು 1965 ರಲ್ಲಿ ತಯಾರಾದ ಜೇಮ್ಸ್ ಬಾಂಡ್ ಚಿತ್ರದಲ್ಲಿ ನಟಿಸಿದ್ದ ನಾಯಕ ಈ ಕಾರನ್ನು ಚಲಾಯಿಸಿದ್ದ ಹಾಗಾಗಿ ಈ ಕಾರಿಗೆ ಇಷ್ಟೊಂದು ಬೇಡಿಕೆ.

ಭಾರಿ ವಿಶೇಷತೆ ಹೊಂದಿದ ಕಾರು ಇದು
ಈ ಕಾರಿನ ವಿಶೇಷತೆಗಳ ಪಟ್ಟಿ ದೊಡ್ಡದೇ ಇದೆ. ಸಿನಿಮಾದಲ್ಲಿ ತೋರಿಸಿರುವಂತೆ ಕಾರಿನಲ್ಲಿನ ಬಟನ್ ಒತ್ತಿದ ಕೂಡಲೆ ಹಿಂಬದಿ ಗುಂಡು ನಿರೋಧಕ ಶೀಲ್ಡ್ ಮೇಲೆ ಬರುತ್ತದೆ. ಹಿಂಬದಿ ಬರುವ ಕಾರನ್ನು ಪಂಕ್ಚರ್ ಮಾಡಲು ಮೊಳೆಗಳನ್ನು ಬೀಳಿಸುತ್ತದೆ. ಆಯಿಲ್ ಅನ್ನು ರಸ್ತೆಯ ಮೇಲೆ ಸುರಿಯುತ್ತದೆ. ಬಟನ್ ಒತ್ತಿದ ಕೂಡಲೇ ನಂಬರ್ ಪ್ಲೇಟ್ ಗಳು ಚಕ-ಚಕನೇ ಬದಲಾಗುತ್ತವೆ. ಜೊತೆಗೆ ಶೂಟ್ ಸಹ ಮಾಡುತ್ತದೆ.

ಈಗಲೂ ಎಲ್ಲವೂ ಕಾರ್ಯ ಮಾಡುತ್ತಿವೆ
ವಿಶೇಷವೆಂದರೆ ಈ ಎಲ್ಲ ಕಾರ್ಯಗಳನ್ನು ಈ ಕಾರು ನಿಜವಾಗಿಯೂ ಮಾಡಬಲ್ಲದು. ಮೇಲಿನ ಎಲ್ಲ ಯಾಂತ್ರಿಕ ಕ್ರಿಯೆಗಳನ್ನು ಈ ಕಾರು ಈಗಲೂ ಮಾಡುತ್ತದೆ. ಹಾಂ.. ಕಾರಿನ ಮುಂದಿನ ಹೆಡ್ ಲೈಟ್ಗಳ ಕೆಳಗೆ ಗನ್ನುಗಳು ಹೊರ ಬರುತ್ತವೆ ಆದರೆ ನಿಜವಾದ ಬುಲೆಟ್ ಉಗುಳುವ ಬದಲಿಗೆ ಶಬ್ದವನ್ನಷ್ಟೆ ಮಾಡುತ್ತವೆ. ಉಳಿದಂತೆ ಇನ್ನೆಲ್ಲ ಕಾರ್ಯಗಳು ಈಗಲೂ ಚಾಲ್ತಿಯಲ್ಲಿವೆ.

ಗೋಲ್ಡ್ಫಿಂಗರ್ ಮತ್ತು ಥಂಡರ್ಬಾಲ್ ಸಿನಿಮಾಕ್ಕಾಗಿ ನಿರ್ಮಾಣ
ಗೋಲ್ಡ್ಫಿಂಗರ್ ಮತ್ತು ಥಂಡರ್ ಬಾಲ್ ಎಂಬ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಥೇಟ್ ಇದೇ ಮಾದರಿಯ ಕಾರುಗಳನ್ನು ಬಳಸಲಾಗಿತ್ತು. ಈಗ ಹರಾಜಾಗಿರುವ ಕಾರನ್ನು ಪ್ರಮೋಷನ್ ಉದ್ದೇಶದಿಂದ ತಯಾರು ಮಾಡಲಾಗಿತ್ತು. ಹಾಗಾಗಿಯೇ ಪೂರ್ಣವಾಗಿ ಎಲ್ಲ ಕಾರ್ಯಗಳು ಮಾಡುವಂತೆಯೇ ಈ ಕಾರನ್ನು ತಯಾರಿಸಲಾಗಿತ್ತು. ಇದನ್ನು ಬ್ರಿಟನ್ನಿಂದ ಅಮೆರಿಕಕ್ಕೆ ಸಹ ಕೊಂಡೊಯ್ಯಲಾಗಿತ್ತು.

ಕಾರು ಕೊಂಡವನ ಹೆಸರು ಬಹಿರಂಗ ಇಲ್ಲ
ಆಸ್ಟಿನ್ ಮಾರ್ಟಿನ್ ಡಿಬಿ5 ಮಾದರಿಯ ಈ ಕಾರು ಈವರೆಗೆ ಹರಾಜಾದ ಬಾಂಡ್ ಕಾರುಗಳಲ್ಲಿ ಅತ್ಯಂತ ಹೆಚ್ಚು ಬೆಲೆಗೆ ಹರಾಜಾದ ಕಾರು. ಕಾರನ್ನು ಕೊಂಡವರ ಹೆಸರನ್ನು ಗೌಪ್ಯವಾಗಿಡಲಾಗಿದೆ. ಇದೇ ಕಾರಿನ ಜೊತೆಗೆ ಇನ್ನೊಂದು ಕಾರನ್ನೂ ಸಹ ತಯಾರಿಸಲಾಗಿತ್ತು. ಅದನ್ನು ಈಗ ನೆದರ್ಲ್ಯಾಂಡ್ನ ಮ್ಯೂಸಿಯಂ ಒಂದರಲ್ಲಿ ಇಡಲಾಗಿದೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications