ಚರ್ಚಿನಲ್ಲಿ 34 ಮಕ್ಕಳ ದುರಂತ ಸಾವು, ಬಗೆದಷ್ಟೂ ಸಿಗುತ್ತಿವೆ ಶವಗಳು!
Recommended Video

Array
ಪಲು(ಇಂಡೋನೇಷ್ಯಾ), ಅಕ್ಟೋಬರ್ 03: ಬೈಬಲ್ ಕ್ಯಾಂಪ್ ಗೆಂದು ಚರ್ಚಿಗೆ ತೆರಳಿದ್ದ 34 ಪುಟ್ಟ ಪುಟ್ಟ ಮಕ್ಕಳ ಶವ ಇಂಡೋನೇಷ್ಯಾದ ಭೀಕರ ಭೂಕಂಪದ ನಂತರ ಪತ್ತೆಯಾಗಿದ್ದು, ಅತ್ಯಂತ ದಾರುಣ ಘಟನೆ ಎಂದೇ ಕರೆಸಿಕೊಳ್ಳುತ್ತಿದೆ.
ಚರ್ಚಿನಲ್ಲಿ ಪ್ರಾರ್ಥನೆ ನಡೆಸುತ್ತಿದ್ದ 34 ಮಕ್ಕಳ ಪ್ರಾರ್ಥನೆ ಬಹುಶಃ ದೇವರಿಗೆ ತಲುಪುವ ಮೊದಲೇ ಅವರನ್ನು ಜವರಾಯ ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿದ್ದಾನೆ!
ಚರ್ಚಿನಲ್ಲಿ ಮತ್ತಷ್ಟು ಮಕ್ಕಳ ಶವಗಳು ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೀಕರ ಭೂಕಂಪ ಮತ್ತು ಸುನಾಮಿ ಅವಘಡದಲ್ಲಿ ಇದುವರೆಗೂ ಸಾವಿಗೀಡಾದವರ ಸಂಖ್ಯೆ 1400 ರ ಗಡಿ ದಾಟಿದೆ.
7.4 ತೀವ್ರತೆಯ ಭೂಕಂಪದಿಂದಾಗಿ ಇಂಡೋನೇಷ್ಯಾದಲ್ಲಿ ಸುನಾಮಿಯೂ ಸಂಭವಿಸಿ ಸಾವಿರಾರು ಜನ ಪ್ರಾಣ ಕಳೆದುಕೊಂಡರೆ, ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ.
ದಿನೇ ದಿನೇ ಇಂಡೊನೇಷ್ಯಾದಲ್ಲಿ ಭೂಕಂಪ ಸಂಭವಿಸುತ್ತಲೇ ಇದ್ದು, ಮಂಗಳವಾರ ಮತ್ತೆ ರಿಕ್ಟರ್ ಮಾಪನದಲ್ಲಿ 5.6 ಮತ್ತು 6.0 ತೀವ್ರತೆಯ ಭೂಕಂಪ ದಾಖಲಾಗಿದೆ.












Click it and Unblock the Notifications