Shubhanshu Shukla: ಭೂಮಿಯತ್ತ ಪ್ರಯಾಣ ಆರಂಭಿಸಿದ ಶುಭಾಂಶು ಶುಕ್ಲಾ ನೇತೃತ್ವದ ಆಕ್ಸಿಯಮ್-4 ತಂಡ
Shubhanshu Shukla: ಶುಭಾಂಶು ಶುಕ್ಲಾ ನೇತೃತ್ವದ ಆಕ್ಸಿಯಮ್-4 ತಂಡವು ಭೂಮಿಯತ್ತ ಪ್ರಯಾಣ ಆರಂಭಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 18 ದಿನಗಳ ಯಶಸ್ವಿ ವಾಸವನ್ನು ಶುಕ್ಲಾ ತಂಡ ಮುಕ್ತಾಯಗೊಳಿಸಿದೆ. ಆ ನಂತರ ಸೋಮವಾರ ಸಂಜೆ 4:30ರ ( ಭಾರತೀಯ ಸಮಯದಂತೆ ) ಸೂಮಾರಿಗೆ ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಐಎಸ್ಎಸ್ನಿಂದ ಬೇರ್ಪಟ್ಟಿದೆ. ಈ ಬಾರಿಯ ಮಿಷನ್ನಲ್ಲಿ ಶುಭಾಂಶು ಶುಕ್ಲಾ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶುಕ್ಲಾ ನೇತೃತ್ವದ ಡ್ರ್ಯಾಗನ್ ನೌಕೆಯು ಭೂಮಿಗೆ 250 ಕಿಲೋ ಪರಿಕರಗಳು ಮತ್ತು ಅನೇಕ ಪ್ರಯೋಗ ಮಾದರಿಗಳನ್ನು ತರಲಿದೆ. ಜುಲೈ 15ರಂದು ಸುಮಾರು ಮಧ್ಯಾಹ್ನ 3 ಗಂಟೆಗೆ ( ಭಾರತೀಯ ಸಮಯದಂತೆ ) ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ನೌಕೆ ಲ್ಯಾಂಡ್ ಆಗಲಿದೆ. ಹಿಂತಿರುಗುವ ಪ್ರಯಾಣಕ್ಕೆ ಸುಮಾರು 22.5 ಗಂಟೆಗಳ ಸಮಯ ಬೇಕಾಗಲಿದೆ ಎಂದು ನಾಸಾ ತಿಳಿಸಿದೆ.

ಆಕ್ಸಿಯಮ್-4 ತಂಡದಲ್ಲಿ ಇಸ್ರೋನಿಂದ ಶುಭಾಂಶು ಶುಕ್ಲಾ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯಿಂದ ಸ್ಲಾವೋಸ್ ಉಜ್ನಾನ್ಸ್ಕಿ-ವಿಸ್ನೆವ್ಸ್ಕಿ (ಪೋಲೆಂಡ್), ಹಂಗೇರಿಯಿಂದ ಟಿಬೋರ್ ಕಪು ಮತ್ತು ಮಾಜಿ ನಾಸಾ ಬಾಹ್ಯಾಕಾಶಯಾನಿ ಪೆಗಿ ವಿಟ್ಸನ್ ಇದ್ದಾರೆ. ಸುಮಾರು ಎರಡು ವಾರಗಳ ಕಾಲ ವಿವಿಧ ವಿಜ್ಞಾನ ಪ್ರಯೋಗಗಳನ್ನು ಬಾಹ್ಯಾಕಾಶದಲ್ಲಿ ನಡೆಸಿದ್ದಾರೆ.
ಈ ಮಿಷನ್ನಲ್ಲಿ ಆರೋಗ್ಯ, ಕೃಷಿ, ಬಾಹ್ಯಾಕಾಶ ಸಂಶೋಧನೆ, ಮಾನಸಿಕ ಆರೋಗ್ಯ ಮತ್ತು ಬಾಹ್ಯಾಕಾಶ ಪೋಷಣೆಗೆ ಸಂಬಂಧಿಸಿದ ಅನೇಕ ಪ್ರಯೋಗಗಳು ನಡೆದಿವೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಮೈಕ್ರೊಗ್ರಾವಿಟಿಯಲ್ಲಿ ಮನುಷ್ಯರ ಮೂಳೆ ಮತ್ತು ಮಾಂಸಖಂಡಗಳ ಕುಗ್ಗುವಿಕೆ ಕುರಿತ ಅಧ್ಯಯನವನ್ನು ಶುಕ್ಲಾ ನಡೆಸಿದ್ದರೆ. ಜೊತೆಗೆ, ದೀರ್ಘಾವಧಿಯ ಬಾಹ್ಯಾಕಾಶ ಪ್ರಯಾಣಗಳಿಗೆ ಪೋಷಕಾಂಶವಾಗಿ ಮೈಕ್ರೋಆಲ್ಗೀ ಬೆಳೆಸುವ ಪ್ರಯೋಗವನ್ನೂ ಅವರು ನಡೆಸಿದ್ದಾರೆ ಎಂದು ನಾಸಾ ಹೇಳಿದೆ.
ಈ ಮಿಷನ್ ಮೂಲಕ ಭಾರತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಹಕಾರದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. 1984ರಲ್ಲಿ ಭಾರತದ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ತೆರಳಿದ್ದರು. ಆ ನಂತರ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಎಂಬ ಖ್ಯಾತಿಗೆ ಶುಕ್ಲಾ ಭಾಜನರಾಗಿದ್ದಾರೆ.
ಈ ಪ್ರಯಾಣದ ವೇಳೆ ಶುಕ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ದಾರೆ. ಲಖ್ನೋದಲ್ಲಿರುವ ಶುಕ್ಲಾ ಕುಟುಂಬ ಸುರಕ್ಷಿತ ಹಿಂತಿರುಗುವಿಕೆಗೆ ಪ್ರಾರ್ಥನೆ ನಡೆಸುತ್ತಿದೆ. ತಂದೆ ಶಂಭು ದಯಾಲ್ ಶುಕ್ಲಾ ಮತ್ತು ತಾಯಿ ಆಶಾ ದೇವಿ, ಬಾಹ್ಯಾಕಾಶದಲ್ಲಿದ್ದಾಗ ಅವರೊಂದಿಗೆ ಸಂವಾದ ನಡೆಸಿದ ಅನುಭವವನ್ನು ಹಂಚಿಕೊಂಡಿದ್ದಾರೆ.
ಭೂಮಿಗೆ ಮರಳಿದ ನಂತರ, ಶುಕ್ಲಾ ಮತ್ತು ತಂಡವನ್ನು ನಾಸಾ ಜಾನ್ಸನ್ ಸ್ಪೇಸ್ ಸೆಂಟರ್ಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ವೈದ್ಯಕೀಯ ಪರೀಕ್ಷೆಗಳು ಮತ್ತು ಮಾನಸಿಕ ಆರೋಗ್ಯ ಪರೀಕ್ಷೆಗಳು ನಡೆಯಲಿವೆ. ದೀರ್ಘಾವಧಿಯ ಮೈಕ್ರೊಗ್ರಾವಿಟಿ ಅನುಭವದಿಂದ ದೇಹ ಪುನಃ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಈ ಮಿಷನ್ ಯಶಸ್ವಿಗೆ ಭಾರತದಲ್ಲಿ ವಿಜ್ಞಾನ ಸಂಸ್ಥೆಗಳು ಮತ್ತು ಸರ್ಕಾರದಿಂದ ಗೌರವ ಸಿಗಲಿದೆ.
ಶುಭಾಂಶು ಶುಕ್ಲಾ ಅವರ ಈ ಸಾಧನೆ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲಿಗಲ್ಲಾಗಿದೆ. ಇಸ್ರೋ ಮತ್ತು ನಾಸಾ ನಡುವಿನ ಸಹಕಾರದ ಭಾಗವಾಗಿ ಈ ಮಿಷನ್ ಯಶಸ್ವಿಯಾಗಿದ್ದು, ಮುಂದಿನ ಗಗನಯಾನ ಯೋಜನೆಗಳಿಗೆ ದಾರಿ ತೋರಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications