ಒಮನ್ ಕನ್ನಡತಿಯಿಂದ 'ನಾ ಕಂಡ ಮಸ್ಕಟ್' ಪುಸ್ತಕ

ವೃತ್ತಿಯಿಂದ ಸಂಸ್ಕೃತ ಶಿಕ್ಷಕಿಯಾಗಿರುವ ಕವಿತಾ ರಾಮಕೃಷ್ಣ ಅವರು ಬರೆದಿರುವ 'ನಾ ಕಂಡ ಮಸ್ಕಟ್' ಎಂಬ ಕನ್ನಡ ಪುಸ್ತಕ ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಪುಸ್ತಕವನ್ನು ಆಂಗ್ಲ ಭಾಷೆಗೂ ಭಾಷಾಂತರಿಸಲಾಗಿದೆ. ಎರಡೂ ಪುಸ್ತಕಗಳು ಏಕಕಾಲಕ್ಕೆ ಬಿಡುಗಡೆ ಭಾಗ್ಯ ಕಾಣುತ್ತಿವೆ.
ಈ ಹೊತ್ತಗೆಯ ಮುಖಾಂತರ ತಾವು ಕಂಡ ಮಸ್ಕಟ್ ಸೊಬಗನ್ನು ಕವಿತಾ ರಾಮಕೃಷ್ಣ ಅವರು ಹಿಡಿದಿಟ್ಟಿದ್ದಾರೆ. ಮಸ್ಕಟ್ ನ ಸುಂದರ ಪರಿಸರ ಮಾತ್ರವಲ್ಲ ಜನಜೀವನವನ್ನೂ ಅವರು ವರ್ಣಿಸಿದ್ದಾರೆ. ಸುಮಾರು ಏಳು ವರ್ಷಗಳಿಂದ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿರುವ ಗಂಡ ಮತ್ತು ಮಗನ ಜೊತೆ ಕವಿತಾ ರಾಮಕೃಷ್ಣ ಅವರು ಒಮನ್ ದೇಶದಲ್ಲಿ ಸಂಸಾರ ಹೂಡಿದ್ದಾರೆ.
"ದೇಶದ ಉದ್ದಗಲಕ್ಕೂ ಸುತ್ತಾಡಿದ್ದು ನನಗೆ ಈ ಸುಂದರ ದೇಶದ ಹಲವಾರು ಸಂಗತಿಗಳ ಬಗ್ಗೆ ಅರಿವು ಮಾಡಿಕೊಟ್ಟಿದೆ. ಕನ್ನಡ ಓದಲು ಬರುವವರಿಗೆ ಜಗತ್ತಿನ ಅತ್ಯಂತ ಸುಂದರ ಮತ್ತು ವಿಶಿಷ್ಟ ದೇಶಗಳಲ್ಲಿ ಒಂದಾಗಿರುವ ಮಸ್ಕಟ್ ಬಗ್ಗೆ ತಿಳಿಸಬೇಕೆಂಬುದು ನನ್ನ ಬಹುದಿನಗಳ ಬಯಕೆಯಾಗಿತ್ತು" ಎಂದು ಕವಿತಾ ಹೇಳಿದ್ದಾರೆ. [ಒಮಾನ್ ಜನಪ್ರಿಯ ಪ್ರವಾಸಿ ತಾಣ ಬಿಮ್ಮ ಸಿಂಕ್ ಹೋಲ್]
"ಒಮನ್ ನಲ್ಲಿ ಕಳೆದ ಏಳು ವರ್ಷಗಳಿಂದ ಜೀವಿಸುತ್ತಿರುವ ನನಗೆ ಈ ದೇಶ ನನ್ನದೇ ಎನ್ನುವ ಭಾವನೆ ಮೂಡಿದೆ. ಇಲ್ಲಿಯ ಜನರು, ಸಂಸ್ಕೃತಿ ಮತ್ತು ಜೀವನದ ಬಗ್ಗೆ ಒಂದು ಬಗೆಯ ಗೌರವ ಭಾವನೆಯಿದೆ. ಇದೆಲ್ಲವನ್ನೂ ನನ್ನ ಪುಸ್ತಕದಲ್ಲಿ ಎರಕಹೊಯ್ದಿದ್ದೇನೆ" ಎಂದು ಕವಿತಾ ಅವರು ವಿವರಿಸಿದ್ದಾರೆ.
ಬರಹಗಾರ್ತಿಯಾಗುವುದರ ಜೊತೆಗೆ ಕವಿತಾ ಅವರು ಭಾರತೀಯ ಕಲೆಯ ಬಗ್ಗೆಯೂ ಪರಿಣತಿ ಪಡೆದಿದ್ದಾರೆ. ತಂಜಾವೂರು ವರ್ಣಚಿತ್ರ ಕಲೆಯನ್ನು ಅವರು ಕಳೆದ 10 ವರ್ಷಗಳಿಂದ ಅಭ್ಯಸಿಸುತ್ತಿದ್ದಾರೆ. ಈ ಕಲೆಯನ್ನು ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರದರ್ಶಿಸಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications