ಒಮನ್ ಕನ್ನಡತಿಯಿಂದ 'ನಾ ಕಂಡ ಮಸ್ಕಟ್' ಪುಸ್ತಕ

ವೃತ್ತಿಯಿಂದ ಸಂಸ್ಕೃತ ಶಿಕ್ಷಕಿಯಾಗಿರುವ ಕವಿತಾ ರಾಮಕೃಷ್ಣ ಅವರು ಬರೆದಿರುವ 'ನಾ ಕಂಡ ಮಸ್ಕಟ್' ಎಂಬ ಕನ್ನಡ ಪುಸ್ತಕ ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಪುಸ್ತಕವನ್ನು ಆಂಗ್ಲ ಭಾಷೆಗೂ ಭಾಷಾಂತರಿಸಲಾಗಿದೆ. ಎರಡೂ ಪುಸ್ತಕಗಳು ಏಕಕಾಲಕ್ಕೆ ಬಿಡುಗಡೆ ಭಾಗ್ಯ ಕಾಣುತ್ತಿವೆ.
ಈ ಹೊತ್ತಗೆಯ ಮುಖಾಂತರ ತಾವು ಕಂಡ ಮಸ್ಕಟ್ ಸೊಬಗನ್ನು ಕವಿತಾ ರಾಮಕೃಷ್ಣ ಅವರು ಹಿಡಿದಿಟ್ಟಿದ್ದಾರೆ. ಮಸ್ಕಟ್ ನ ಸುಂದರ ಪರಿಸರ ಮಾತ್ರವಲ್ಲ ಜನಜೀವನವನ್ನೂ ಅವರು ವರ್ಣಿಸಿದ್ದಾರೆ. ಸುಮಾರು ಏಳು ವರ್ಷಗಳಿಂದ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿರುವ ಗಂಡ ಮತ್ತು ಮಗನ ಜೊತೆ ಕವಿತಾ ರಾಮಕೃಷ್ಣ ಅವರು ಒಮನ್ ದೇಶದಲ್ಲಿ ಸಂಸಾರ ಹೂಡಿದ್ದಾರೆ.
"ದೇಶದ ಉದ್ದಗಲಕ್ಕೂ ಸುತ್ತಾಡಿದ್ದು ನನಗೆ ಈ ಸುಂದರ ದೇಶದ ಹಲವಾರು ಸಂಗತಿಗಳ ಬಗ್ಗೆ ಅರಿವು ಮಾಡಿಕೊಟ್ಟಿದೆ. ಕನ್ನಡ ಓದಲು ಬರುವವರಿಗೆ ಜಗತ್ತಿನ ಅತ್ಯಂತ ಸುಂದರ ಮತ್ತು ವಿಶಿಷ್ಟ ದೇಶಗಳಲ್ಲಿ ಒಂದಾಗಿರುವ ಮಸ್ಕಟ್ ಬಗ್ಗೆ ತಿಳಿಸಬೇಕೆಂಬುದು ನನ್ನ ಬಹುದಿನಗಳ ಬಯಕೆಯಾಗಿತ್ತು" ಎಂದು ಕವಿತಾ ಹೇಳಿದ್ದಾರೆ. [ಒಮಾನ್ ಜನಪ್ರಿಯ ಪ್ರವಾಸಿ ತಾಣ ಬಿಮ್ಮ ಸಿಂಕ್ ಹೋಲ್]
"ಒಮನ್ ನಲ್ಲಿ ಕಳೆದ ಏಳು ವರ್ಷಗಳಿಂದ ಜೀವಿಸುತ್ತಿರುವ ನನಗೆ ಈ ದೇಶ ನನ್ನದೇ ಎನ್ನುವ ಭಾವನೆ ಮೂಡಿದೆ. ಇಲ್ಲಿಯ ಜನರು, ಸಂಸ್ಕೃತಿ ಮತ್ತು ಜೀವನದ ಬಗ್ಗೆ ಒಂದು ಬಗೆಯ ಗೌರವ ಭಾವನೆಯಿದೆ. ಇದೆಲ್ಲವನ್ನೂ ನನ್ನ ಪುಸ್ತಕದಲ್ಲಿ ಎರಕಹೊಯ್ದಿದ್ದೇನೆ" ಎಂದು ಕವಿತಾ ಅವರು ವಿವರಿಸಿದ್ದಾರೆ.
ಬರಹಗಾರ್ತಿಯಾಗುವುದರ ಜೊತೆಗೆ ಕವಿತಾ ಅವರು ಭಾರತೀಯ ಕಲೆಯ ಬಗ್ಗೆಯೂ ಪರಿಣತಿ ಪಡೆದಿದ್ದಾರೆ. ತಂಜಾವೂರು ವರ್ಣಚಿತ್ರ ಕಲೆಯನ್ನು ಅವರು ಕಳೆದ 10 ವರ್ಷಗಳಿಂದ ಅಭ್ಯಸಿಸುತ್ತಿದ್ದಾರೆ. ಈ ಕಲೆಯನ್ನು ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರದರ್ಶಿಸಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications