ಇಸ್ಲಾಂ ಕುರಿತು ಪ್ರಶ್ನಿಸಿ, ಭಾರತೀಯನ ಕೊಂದ ಉಗ್ರರು
ನೈರೋಬಿ, ಸೆ.23 : ಇಸ್ಲಾಂ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸದ ಕಾರಣ ಭಾರತೀಯರೊಬ್ಬರನ್ನು ಸೊಮಾಲಿಯಾದ ಶೆಬಾಬ್ ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಉಗ್ರರ ವಶದಿಂದ ಪಾರಾಗಿ ಒಂದ ಜೋಶಾ ಹಕೀಮ್ ಎಂಬುದವವರು ಈ ಆ ಕರಾಳ ಘಟನೆಯ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ್ದಾರೆ.
ಶನಿವಾರ ಶೆಬಾಬ್ ಉಗ್ರಗಾಮಿಗಳು ಕೈಯಲ್ಲಿ ಎಕೆ 47 ಬಂದೂಕುಗಳನ್ನು ಹಿಡಿದು ಮಾಲ್ ನ ಎರಡನೇ ಮಹಡಿಯಲ್ಲಿ ಸಂಚರಿಸುತ್ತಾ, ಕಂಡಕಂಡವರ ಮೇಲೆ ಗುಂಡು ಹಾರಿಸುತ್ತಾ ಸಾಗುತ್ತಿದ್ದ ದೃಶ್ಯವನ್ನು ಹಕೀಮ್ ನೋಡಿದ್ದಾರೆ.

ದಾಳಿಯ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಉಗ್ರಗಾಮಿಗಳು ಮುಸ್ಲಿಂಮರು, ತಮ್ಮ ಗುರುತು ಹೇಳಿ ಹೊರನಡೆಯುವಂತೆ ಮನವಿ ಮಾಡಿದ್ದರು. ಮಾಲ್ ನಿಂದ ಹೊರಹೋಗುತ್ತಿದ್ದ ಜನರ ಹೆಸರು, ಗುರುತು ಕೇಳುತ್ತಾ ಉಗ್ರರು ನಿಂತಿದ್ದರು.
ಹಕೀಮ್ ಸರದಿ ಬಂದಾಗ ಉಗ್ರರು ಗುರುತಿಸ ಪತ್ರ ತೋರಿಸುವಂತೆ ಕೇಳಿದ್ದಾರೆ. ಹಕೀಮ್ ತಮ್ಮ ಬೆರಳಚ್ಚು ಇರುವ ಗುರುತಿನ ಚೀಟಿ ತೋರಿಸಿದ್ದಾರೆ. ಆಗ ಉಗ್ರರು ಹಕೀಮ್ ಅವರನ್ನು ಮಾಲ್ ನಿಂದ ಹೊರಹೋಗುವಂತೆ ಹೇಳಿದ್ದಾರೆ.
ಹಕೀಮ್ ಹಿಂಭಾಗದಲ್ಲಿ ಭಾರತೀಯರೊಬ್ಬರು ಬರುತ್ತಿದ್ದರು. ಅವರನ್ನು ತಡೆದ ಉಗ್ರರು ಮಹಮದ್ ತಾಯಿಯ ಹೆಸರೇನು? ಎಂದು ಕೇಳಿದ್ದಾರೆ. ಈ ಪ್ರಶ್ನಗೆ ಅವರು ಉತ್ತರಿಸಿಲ್ಲ. ತಕ್ಷಣ ಅವರನ್ನು ಕೊಂದು ಹಾಕಿದರು ಎಂದು ಹಕೀಮ್ ಮಾಧ್ಯಮಗಳಿಗೆ ಹೇಳಿದ್ದಾರೆ.
ನೈರೋಬಿ ಶಾಪಿಂಗ್ ಮಾಲ್ ನಲ್ಲಿನ ಉಗ್ರರ ಅಟ್ಟಹಾಸಕ್ಕೆ ಇದುವರೆಗೂ 68 ಜನರು ಬಲಿಯಾಗಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ. ಸದ್ಯ ಉಗ್ರರ ಹಿಡಿತದಲ್ಲಿ 60ಕ್ಕೂ ಹೆಚ್ಚು ಜನರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶೆಬಾಬ್ ಉಗ್ರಗಾಮಿಗಳ ಪರವಾಗಿ ಹೇಳಿಕೆ ನೀಡಿರುವ ಅಲಿ ಮೊಹಮ್ಮದ್ ರೇಜ್ ಎಂಬಾತ, "ನಮ್ಮ ಮೇಲೆ ಒತ್ತಡ ಹೆಚ್ಚಾದಷ್ಟೂ ಕಟ್ಟಡದ ಒಳಗೆ ಬಂಧಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳಲು ಮುಜಾಹಿದ್ದೀನ್ಗಳಿಗೆ ನಾವು ಅಧಿಕಾರ ನೀಡುತ್ತೇವೆ" ಎಂದು ಹೇಳುವ ಮೂಲಕ ಮತ್ತಷ್ಟು ಆತಂಕ ಸೃಷ್ಟಿಸಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications