ಗುಂಡೇಟಿಗೆ ಬಲಿಯಾದ ಭಾರತೀಯನ ಕುಟುಂಬಕ್ಕೆ ಸುಷ್ಮಾ ನೆರವು
ನವದೆಹಲಿ, ನವೆಂಬರ್ 13: ಅಮೆರಿಕದ ಉತ್ತರ ಕರೋಲಿನಾದಲ್ಲಿ ದುಷ್ಕರ್ಮಿಯ ಗುಂಡೇಟಿಗೆ ಭಾರತ ಮೂಲದ ಹೋಟೆಲ್ ಮಾಲೀಕ ಮೃತಪಟ್ಟಿದ್ದಾರೆ. ಈ ಘಟನೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಮೃತರ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.
40 ವರ್ಷದ ಆಕಾಶ್ ಆರ್ ತಲಾಟಿ ಅವರು ಫಯೆಟ್ಟೆವಿಲ್ಲೆ ನಗರದ ನೈಟ್ಸ್ ಇನ್ ಮತ್ತು ಡೈಮಂಡ್ಸ್ ಜೆಂಟಲ್ಮೆನ್ಸ್ ಕ್ಲಬ್ ಒಡೆತನ ಹೊಂದಿದ್ದರು.
ದುಷ್ಕರ್ಮಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದಾಗ ಆಕಾಶ್ ಮೃತ ಪಟ್ಟಿದ್ದರು. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
The deceased was shot by an assailant who was escorted out of his club. The security guard returned the fire and the assailant was also injured. /2
— Sushma Swaraj (@SushmaSwaraj) November 12, 2017
ಗುಜರಾತಿನ ಆನಂದ್ ಜಿಲ್ಲೆಯವರಾದ ಆಕಾಶ್ ತಲಾಟಿ ಅವರ ಕುಟುಂಬಕ್ಕೆ ಅಗತ್ಯ ನೆರವು ನೀಡುವ ಭರವಸೆಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೀಡಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಶೂಟೌಟ್ ನಲ್ಲಿ ಗಾಯಗೊಂಡಿದ್ದ ನಾಲ್ವರ ಪೈಕಿ ಇಬ್ಬರು ಈಗಾಗಲೇ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ.