ಭಾರತ & ಅಮೆರಿಕ ನಡುವೆ ವ್ಯಾಪಾರ ಒಪ್ಪಂದ, ಮತ್ತೊಂದು ಇತಿಹಾಸಕ್ಕೆ ವೇದಿಕೆ ಸಿದ್ಧ!
ಭಾರತ & ಅಮೆರಿಕ ನಡುವೆ ಇದೀಗ ಮಹತ್ವದ ಮಾತುಕತೆ ಆರಂಭವಾಗಿ, ವ್ಯಾಪಾರ ಒಪ್ಪಂದ ಬಹುತೇಕ ಅಂತ್ಯಕ್ಕೆ ಬಂದಿದೆ. ಇದು ಪ್ರಪಂಚದ ವ್ಯಾಪಾರ ವೇದಿಕೆಯಲ್ಲಿ ಭಾರತ & ಅಮೆರಿಕ ನಡುವೆ ಸಂಬಂಧ ಗಟ್ಟಿ ಮಾಡುವ ಜೊತೆಗೆ ಹೊಸ ಇತಿಹಾಸ ನಿರ್ಮಾಣ ಮಾಡುವ ಮುನ್ಸೂಚನೆ ಕೂಡ ನೀಡಿದೆ. ಭಾರತದ ಶತ್ರು ದೇಶಗಳಿಗೆ ಇದು ಉರಿ ತಂದರೂ, ಭವಿಷ್ಯದಲ್ಲಿ ಇಡೀ ಜಗತ್ತು ಈ ಒಪ್ಪಂದ ನೆನಪು ಇಡುವಂತಹ ವಾತಾವರಣ ಇದೀಗ ಸೃಷ್ಟಿಯಾಗಿದೆ. ಹಾಗಾದರೆ ಭಾರತ & ಅಮೆರಿಕ ವ್ಯಾಪಾರ ಒಪ್ಪಂದ ಏನೆಲ್ಲಾ ಬದಲಾವಣೆ ತರಬಹುದು?
ಅಮೆರಿಕ ಮತ್ತೆ ಮತ್ತೆ ತನ್ನ ಡಬಲ್ ಗೇಮ್ ನೀತಿಯನ್ನ ಮುಂದುವರಿಸಿ, ಒಂದು ಕಡೆ ಭಾರತಕ್ಕೆ ತೆರಿಗೆ ಹೇರಿಕೆ ಹೊರೆ ಹಾಕುತ್ತಿರುವ ಡೊನಾಲ್ಡ್ ಟ್ರಂಪ್ ಆಡಳಿತ ಮತ್ತೊಂದು ಕಡೆ ಚೀನಾ & ರಷ್ಯಾ ಜೊತೆಗೆ ಸಂಬಂಧ ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ಭಾರತ ಕೂಡ ಚೆಕ್ ಇಟ್ಟು ಚೀನಾ & ರಷ್ಯಾ ಜೊತೆಗೆ ಸಂಬಂಧ ಇನ್ನಷ್ಟು ಗಟ್ಟಿ ಮಾಡಿಕೊಂಡು ಮುಂದೆ ನುಗ್ಗಿತ್ತು...

ಭಾರತಕ್ಕೆ ಇದೀಗ ಭರ್ಜರಿ ಲಾಭ?
ಇದರ ಫಲವಾಗಿ ಇದೀಗ ಟ್ರಂಪ್ ಅಧಿಕಾರಿಗಳೇ ನೇರ ಭಾರತದ ಅಧಿಕಾರಿಗಳ ಜೊತೆ ಸಭೆಯನ್ನ ನಡೆಸಿ, ತೆರಿಗೆ ಯುದ್ಧಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಗಮನ ಸೆಳೆದಿದೆ. ಇದು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬಂದಿದ್ದು, ಮಗು ಚಿವುಟುವುದು & ತೊಟ್ಟಿಲನ್ನು ಕೂಡ ತೂಗುವುದು ಅಮೆರಿಕದ ಬುದ್ಧಿ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಭಾರತಕ್ಕೆ ಲಾಭ ಆಗುವುದು ಗ್ಯಾರಂಟಿ ಅಂತಿದ್ದಾರೆ ತಜ್ಞರು. ಹಾಗಾದರೆ ದಿಢೀರ್ ತೆರಿಗೆ ಹೇರಿಕೆ ವಾಪಸ್ ಪಡೆಯುತ್ತಾ ಅಮೆರಿಕ? ಮುಂದೆ ಓದಿ.
ತೆರಿಗೆ ಪ್ರಮಾಣದಲ್ಲಿ ಭಾರಿ ಇಳಿಕೆ?
ಅಮೆರಿಕ ಎಂಬ ದೇಶವನ್ನು ಪೂರ್ತಿಯಾಗಿ ಯಾಕೆ ನಂಬಬಾರದು ಅನ್ನೋ ವಿಷಯ ಇದೀಗ ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಅದರಲ್ಲೂ ಅಮೆರಿಕ ಯಾವ ಕ್ಷಣದಲ್ಲಿ ಬೇಕಾದರೂ ಮತ್ತೊಂದು ದೇಶದ ಜೊತೆ ಹೋಗುವ ಮೂಲಕ ನಂಬಿದವರಿಗೆ ಕೈಕೊಡುತ್ತೆ ಅನ್ನೋದು ಮತ್ತೆ ಪ್ರೂವ್ ಆಗಿದೆ. ಇಂತಹ ವೇಳೆ ಭಾರತ ಕೂಡ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಭಾರತದ ಮೇಲೆ ಅಮೆರಿಕ ಹೇರಿಕೆ ಮಾಡಿರುವ ತೆರಿಗೆ ಪ್ರಮಾಣ ಶೇಕಡಾ 30ಕ್ಕೆ ಇಳಿಕೆ ಆಗುವ ನಿರೀಕ್ಷೆ ಇದೀಗ ಮೂಡಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications