ಸಮೀಕ್ಷೆ ವರದಿ: ಸದ್ದಿಲ್ಲದೆ ಸಾಯಿಸುತ್ತಿದೆ ಮತ್ತೊಂದು ವೈರಸ್..!
ಬೆಂಗಳೂರು, ಜುಲೈ 09: ಕೊರೊನಾ.. ಕೊರೊನಾ.. ಕೊರೊನಾ.. ಎಲ್ಲೆಲ್ಲೂ ಈ ಡೆಡ್ಲಿ ವೈರಸ್ನದ್ದೇ ಚರ್ಚೆ. ಹೀಗೆ ಇಡೀ ಭೂಮಂಡಲವನ್ನೇ ಆವರಿಸಿರುವ ಕೊರೊನಾ ಎಲ್ಲರಲ್ಲೂ ಭಯ ಹುಟ್ಟುಹಾಕಿದೆ. ಆದ್ರೆ ಸುಳಿವನ್ನೇ ನೀಡದಂತೆ ಮತ್ತೊಂದು ಮಹಾ ವೈರಸ್ ಮನುಕುಲವನ್ನು ನಾಶಪಡಿಸುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಹಸಿವು ಅನ್ನೋ ವೈರಸ್, 'ಕೊರೊನಾ'ಗಿಂತಲೂ ಭಯಾನಕ ಸ್ವರೂಪ ತಾಳಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ (Oxfam) ವರದಿ ಪ್ರಕಾರ, ಕೊರೊನಾ ವೈರಸ್ ಹಾವಳಿಗಿಂತ ಹಸಿವಿನಿಂದಲೇ ಜನ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರಂತೆ. ಸದ್ಯದ ಮಟ್ಟಿಗೆ ಕೊರೊನಾ ವೈರಸ್ನಿಂದ ಪ್ರತಿನಿತ್ಯ ಸರಾಸರಿ 5 ಸಾವಿರಕ್ಕೂ ಹೆಚ್ಚು ಜನ ಮೃತಪಡುತ್ತಿದ್ದಾರೆ. ಆದರೆ ಮುಂದಿನ ಕೆಲವೇ ದಿನಗಳಲ್ಲಿ ಹಸಿವಿನಿಂದ ಪ್ರತಿದಿನ ಸಾಯುವವರ ಸಂಖ್ಯೆ 12 ಸಾವಿರವನ್ನೂ ಮೀರಿಸಲಿದೆ ಅಂತಾ ಅಂದಾಜಿಸಲಾಗಿದೆ.

ಯುದ್ಧಪೀಡಿತರ ನಾಡು ಅಯೋಮಯ
ಇನ್ನು ಹಸಿವಿನಿಂದ ಸಾಯುವವರ ಪೈಕಿ ಯುದ್ಧಪೀಡಿತ ದೇಶಗಳು ಮುಂಚೂಣಿಯಲ್ಲಿವೆ. ಇದರಲ್ಲಿ ಯೆಮೆನ್, ಸಿರಿಯಾ, ಇಥಿಯೋಪಿಯಾ, ದಕ್ಷಿಣ ಸುಡಾನ್,ಹೈತಿ, ಆಫ್ಘಾನಿಸ್ತಾನ ಹಾಗೂ ಡೆಮಾಕ್ರಟಿಕ್ ಕಾಂಗೋ ದೇಶಗಳ ಸ್ಥಿತಿ ಅಯೋಮಯವಾಗಲಿದೆ ಅಂತಾ ವರದಿಯಲ್ಲಿ ಹೇಳಲಾಗಿದೆ. ಇಷ್ಟೇ ಅಲ್ಲ, ಆಫ್ರಿಕಾದ ಬಹುತೇಕ ಬಡ ರಾಷ್ಟ್ರಗಳು ಹಾಗೂ ಏಷ್ಯಾದ ಬಡ ರಾಷ್ಟ್ರಗಳ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿ ಇರಲಾರದು. ಈಗಾಗಲೇ ಹಸಿವು ಎಂಬ ಕೂಪಕ್ಕೆ ಬಿದ್ದು ನರಳಾಡುತ್ತಿರುವ ಬಡ ರಾಷ್ಟ್ರಗಳಿಗೆ 'ಕೊರೊನಾ' ಅನ್ನೋ ಹೆಮ್ಮಾರಿ ಬಹುದೊಡ್ಡ ಪೆಟ್ಟು ಕೊಟ್ಟಿದೆ. ಇದು 2ನೇ ಮಹಾಯುದ್ಧದ ನಂತರ ಇಡೀ ಜಗತ್ತಿಗೆ ಎದುರಾಗಿರುವ ಮಹಾ ಸಂಕಷ್ಟವಾಗಿದೆ.

ದಾನಿಗಳ ಕೊರತೆಯೇ ಕಾರಣ
ಅಂದಹಾಗೆ ಯುದ್ಧಪೀಡಿತ ದೇಶಗಳು ಹಾಗೂ ಬಡ ರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳಿಂದ ಹರಿದುಬರುವ ದಾನಿಗಳ ಅನುದಾನವೇ ಆಧಾರವಾಗಿತ್ತು. ಆದರೆ ಸದ್ಯದ ಸ್ಥಿತಿ ಶ್ರೀಮಂತ ರಾಷ್ಟ್ರಗಳನ್ನೇ ಜರ್ಜರಿತವಾಗಿಸಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ಡೌನ್ ಹೇರಲಾಗಿದ್ದು, ಅಮೆರಿಕ, ಯುರೋಪ್ ಸೇರಿದಂತೆ ಹಲವು ರಾಷ್ಟ್ರಗಳು ಸ್ತಬ್ಧವಾಗಿವೆ. ಹೀಗೆ ಆಫ್ರಿಕಾ, ಏಷ್ಯಾ ಸೇರಿದಂತೆ ಹಲವು ಬಡ ರಾಷ್ಟ್ರಗಳಿಗೆ ದಾನಿಗಳ ಡೊನೇಷನ್ ಹಣ ಹರಿದುಬರುತ್ತಿಲ್ಲ. ಇದು ಹಸಿವಿನಿಂದ ಸಾಯುವವರ ಪ್ರಮಾಣ ಹೆಚ್ಚಿಸಿದ್ದು, ಮುಂಬರುವ ಕರಾಳ ದಿನಗಳಿಗೆ ಮುನ್ನುಡಿ ಬರೆದಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications