ಸಿಡ್ನಿ ಫೆಸ್ಟಿವಲ್ ನಲ್ಲಿ ಶ್ರೀಕೃಷ್ಣನ ಅವಹೇಳನ ಕಲಾಕೃತಿ: ಹಿಂದೂಗಳು ಗರಂ
ಶ್ರೀಕೃಷ್ಣನು ಕೊಳಲನ್ನೂದುವ ಚಿತ್ರವನ್ನೇ ಹೋಲುವಂತಿರುವ ಚಿತ್ರದಲ್ಲಿ ಕೊಳಲಿನ ಬದಲಿಗೆ ಮಿತ್ ಪೈಪ್ (ಧೂಮಪಾನ) ಸೇದುವಂತೆ ಮಾಡಿರುವುದು ಹಿಂದೂಗಳ ಕೋಪಕ್ಕೆ ಕಾರಣವಾಗಿದೆ.
ಸಿಡ್ನಿ, ಮಾರ್ಚ್ 9: ಇಲ್ಲಿ ನಡೆಯುತ್ತಿರುವ ಸಿಡ್ನಿ ಫೆಸ್ಟಿವಲ್ ನಲ್ಲಿ ಇಡಲಾಗಿರುವ ಕಲಾವಿದರ ಚಿತ್ರ ಫಲಕಗಳ ಪ್ರದರ್ಶನ ಗ್ಯಾಲರಿಯಲ್ಲಿ ಹಿಂದೂ ದೇವರಾದ ಶ್ರೀ ಕೃಷ್ಣನನ್ನು ಧೂಮಪಾನ ಮಾಡುತ್ತಿರುವಂತೆ ಅಪಮಾನಕವಾಗಿ ಚಿತ್ರಿಸುವ ಚಿತ್ರವೊಂದನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಇದು ಹಿಂದೂಗಳ ಕಣ್ಣು ಕಂಪಾಗಿಸಿದೆ.
ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ 'ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ' ಸಂಸ್ಥೆ ತಕ್ಷಣವೇ ಪ್ರದರ್ಶನದಿಂದ ಕೃಷ್ಣನ ಚಿತ್ರವನ್ನು ಹಿಂಪಡೆಯುವಂತೆ ಸಿಡ್ನಿ ಫೆಸ್ಟಿವಲ್ ಆಯೋಜಕರನ್ನು ಆಗ್ರಹಿಸಿದೆ.

ಸಾಮಾನ್ಯವಾಗಿ ನಾವು ನೋಡಿರುವ ಶ್ರೀ ಕೃಷ್ಣ ಕೊಳಲು ಊದುವ ಚಿತ್ರವನ್ನು ಇಲ್ಲಿ ಬದಲಿಸಲಾಗಿದೆ. ಕೊಳಲಿನ ಬದಲಿಗೆ ಆತ ಪೈಪ್ (ಮಿತ್ ಪೈಪ್) ಸೇದುತ್ತಿರುವಂತೆ ಬಿಂಬಿಸಲಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ಇದಲ್ಲದೆ, ಕೆಲವಾರು ಸ್ಥಳೀಯ ವೆಬ್ ಸೈಟ್ ಗಳು ಈ ಚಿತ್ರವನ್ನು ಆಧುನಿಕತೆಯ ಸ್ಪರ್ಶವೆಂದು ಬಣ್ಣಿಸಿರುವುದು ಹಿಂದೂಗಳ ಕೋಪವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇಲ್ಲಿನ ಮಾರ್ಡಿ ಗ್ರಾಸ್ ಎಂಬ ವೆಬ್ ಸೈಟ್, ಈ ಕಲಾಕೃತಿಯನ್ನು ಕೆಟ್ಟದಾಗಿ ಬಣ್ಣಿಸಿದೆ. ''ಶ್ರೀ ಕೃಷ್ಣನು ಪ್ರೇಮ, ಕಾಮದ ದೇವರು. ಅಷ್ಟೇ ಜ್ಞಾನ, ಸೌಂದರ್ಯಗಳ ಪ್ರತಿನಿಧಿ. ಈತ ಒಬ್ಬ ಮಾದರಿ ಪ್ರೇಮಿ'' ಎಂದು ಹೇಳಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications