ವೈದ್ಯಲೋಕಕ್ಕೆ ಶಾಕ್: ಡೆಡ್ಲಿ ವೈರಸ್ ಅಟ್ಯಾಕ್
ನಾರ್ಥ್ ಕರೋಲಿನಾ, ಜು.28: ಅತ್ಯಂತ ಮಾರಕ ವೈರಾಣು ಎಂದು ಪರಿಗಣಿಸಲಾಗಿರುವ 'ಎಬೋಲಾ' ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರಿಗೆ ಸೋಂಕು ತಗುಲಿರುವ ಸುದ್ದಿ ಹೊರ ಬಿದ್ದಿದೆ.
ನಾರ್ಥ್ ಕರೋಲಿನಾ ಮೂಲದ ಡಾ. ಕೆಂಟ್ ಬ್ರಾಂಟ್ಲಿ ಅವರು ಲಿಬೇರಿಯಾದ ಎಬೋಲಾ ವೈರಸ್ ಪೀಡಿತ ರೋಗಿಯೊಬ್ಬರಿಗೆ ಹಲವು ಕಾಲದಿಂದ ಚಿಕಿತ್ಸೆ ನೀಡುತ್ತಿದ್ದರು. ಇತ್ತೀಚಿಗೆ ಡಾ. ಕೆಂಟ್ ಅವರ ದೇಹಾರೋಗ್ಯದಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಾಸ ಕಂಡು ಬಂದಿತು. ತಕ್ಷಣವೇ ಪರೀಕ್ಷೆಗೆ ಒಳಪಡಿಸಿದ ನಂತರ 'ಪಾಸಿಟಿವ್' ಎಂದು ತಿಳಿದು ಬಂದಿದೆ. ಲಿಬೇರಿಯಾದ ಮೊನ್ರೊವಿಯಾದ ಆಸ್ಪತ್ರೆಯಲ್ಲಿ ಡಾ. ಕೆಂಟ್ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಅತ್ಯಂತ ವೇಗವಾಗಿ ಹರಡಬಲ್ಲ ಸಾಂಕ್ರಾಮಿಕ ವೈರಸ್ ವಿಶ್ವದ ಅತ್ಯಂತ ಮಾರಕ ವೈರಾಣುಗಳಲ್ಲಿ ಒಂದೆನಿಸಿದೆ. ಎಬೋಲಾ ವೈರಾಣು ಪೀಡಿತ ರೋಗಿಗಳಿಗೆ ನೀಡುವ ಚಿಕಿತ್ಸೆ ಹಾಗೂ ಪ್ರತ್ಯೇಕ ಕೊಠಡಿಗಳ ಬಗ್ಗೆ 33 ವರ್ಷ ವಯಸ್ಸಿನ ಡಾ. ಕೆಂಟ್ ಅವರು ಸಮರಿಥಾನ್ ಪರ್ಸ್ ಸಂಸ್ಥೆಯ ವೆಬ್ ತಾಣಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಅಕ್ಟೋಬರ್ 2013ರಿಂದ ಈ ವೈರಾಣು ಪೀಡಿತರಿಂದ ಚಿಕಿತ್ಸೆ ನೀಡುತ್ತಿದ್ದಾರೆ.

ಎಬೋಲಾ ವೈರಾಣು ಕಾಣಿಸಿಕೊಂಡು ಈ ವರ್ಷದಲ್ಲೇ ಆಫ್ರಿಕಾದ ವಿವಿಧ ದೇಶಗಳಲ್ಲಿ ಸುಮಾರು 672 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಮಲೇರಿಯಾ, ಕಾಲರ, ವೈರಲ್ ಫೀವರ್ ಮಾದರಿಯಲ್ಲೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ, ಗಂಟಲು ನೋವು, ಕೈಕಾಲು ನೋವು, ತಲೆನೋವಿನೊಂದಿಗೆ ಆರಂಭವಾಗಿ ಆಮಶಂಕೆ, ಕರಳು ಬೇನೆ, ಕಿಡ್ನಿ ವೈಫಲ್ಯ ಉಂಟಾಗಲಿದೆ. ಕೊನೆ ಕೊನೆಗೆ ರಕ್ತ ಸ್ರಾವ ಉಂಟಾಗಿ ರೋಗಿ ಸಾವನ್ನಪ್ಪುತ್ತಾನೆ.
1976ರಲ್ಲಿ ಎಬೋಲಾ ಜ್ವರ ಜೈರೆ ಹಾಗೂ ಸುಡಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿತ್ತು.[ಇಲ್ಲಿವರೆಗಿನ ಸಾವು ನೋವಿನ ಪಟ್ಟಿ] ಎಬೋಲಾ ನದಿ ಸಮೀಪದಲ್ಲಿ ವಾಸಿಸುವ ಜನರಿಗೆ ಮೊಟ್ಟ ಮೊದಲು ಈ ವೈರಾಣು ಪ್ರಾಣಿಗಳಿಂದ ಹರಡಿದ ಕಾರಣ ಈ ವೈರಸ್ ಗೆ ಎಬೋಲಾ ವೈರಸ್ ಎಂದು ಹೆಸರಿಡಲಾಗಿದೆ. ಎಬೋಲಾ ವೈರಸ್ ಪೀಡಿತರಿಗೆ ಪ್ರತ್ಯೇಕ ಚುಚ್ಚುಮದ್ದು ಇದುವರೆವಿಗೂ ಕಂಡು ಹಿಡಿಯಲಾಗಿಲ್ಲ. ರೋಗಿ ನಿತ್ರಾಣನಾಗದಂತೆ ಎಚ್ಚರಿಕೆವಹಿಸುತ್ತಾ, ಆಮ್ಲಜನಕ ಪ್ರಮಾಣ, ನೋವು ನಿವಾರಣೆ, ಆಂಟಿ ಬಯೋಟಿಕ್ ನೀಡಿಕೆ ಮೂಲಕ ವೈರಾಣು ರೋಗವನ್ನು ಉಲ್ಬಣಗೊಳಿಸದಂತೆ ತಡೆಗಟ್ಟಲಾಗುತ್ತದೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications