ಗ್ರೀಸ್ ಬಿಕ್ಕಟ್ಟು: ಜನಮತ ಗಣನೆ ಏನೆನ್ನುತ್ತದೆ?
ಅಥೆನ್ಸ್, ಜು, 06: ಸಾಲದ ಬಿಕ್ಕಟ್ಟು ಎದಿರಿಸುತ್ತಿರುವ ಗ್ರೀಸ್ ನಲ್ಲಿ ಜನಮತಗಣನೆ ಮಾಡಲಾಗಿದೆ. ವಿದೇಶಗಳಿಂದ ಪಡೆದ ಸಾಲದ ಮರುಪಾವತಿ ಅವಧಿಯನ್ನು ಹೆಚ್ಚಳ ಮಾಡಿಕೊಳ್ಳಲು ಸಾಲ ನೀಡಿದ ದೇಶಗಳು ಹಾಕುವ ಷರತ್ತುಗಳನ್ನು ಒಪ್ಪಿಕೊಳ್ಳಬೇಕೆ? ಬೇಡವೇ? ಎಂದು ಜನರಿಗೆ ಪ್ರಶ್ನೆ ಕೇಳಲಾಗಿತ್ತು.
ಪ್ರತಿ 5 ಜನರಲ್ಲಿ ಒಬ್ಬ ಷರತ್ತು ವಿರೋಧಿಸಿದ್ದು, ಶೇ.60.4ರಷ್ಟು 'ಬೇಡ' ಎಂದಿದ್ದಾರೆ. ಉಳಿದ ಶೇ. 40 ರಷ್ಟು ನಾಗರಿಕರು ಷರತ್ತುಗಳನ್ನು ಒಪ್ಪಿಕೊಳ್ಳಬಹುದು ಎಂದು ಹೇಳಿದ್ದಾರೆ. ಜನತೆ ಷರತ್ತು ವಿರೋಧಿಸಿರುವುದು ಪ್ರಧಾನಿ ಅಲೆಕ್ಸಿಸ್ ಸಿಪ್ರಸ್ಗೆ ಜಯ ಸಿಕ್ಕಂತೆ ಆಗಿದೆ.
ಮರುಪಾವತಿ ಸಂಬಂಧ ಹಣಕಾಸು ಸಂಸ್ಥೆಗಳ ಜೊತೆ ಮತ್ತೆ ಗ್ರೀಸ್ ಮಾತುಕತೆ ನಡೆಸಬಹುದು. ಇದು ಗ್ರೀಸ್, ಯುರೋಪ್ ಒಕ್ಕೂಟದಿಂದ ಹೊರಬರಲು ಕಾರಣವಾಗಬಹುದು.[ಗ್ರೀಸ್ ದಿವಾಳಿ ರಾಷ್ಟ್ರ?]

ಗ್ರೀಸ್ಗೆ ಭಾರೀ ಪ್ರಮಾಣದ ಸಾಲ ನೀಡಿದ್ದ ಜರ್ಮನಿ ಮತ್ತು ಇತರೆ ಹಲವು ಹಣಕಾಸು ಸಂಸ್ಥೆಗಳು ನಷ್ಟ ಅನುಭವಿಸಬೇಕಾಗುತ್ತದೆ. ಜನತೆ, ಷರತ್ತಿಗೆ ಒಪ್ಪಿಕೊಂಡಿದ್ದರೆ, ಗ್ರೀಸ್ ಸರ್ಕಾರ ಅನಿವಾರ್ಯವಾಗಿ ತೆರಿಗೆ ಪ್ರಮಾಣ ಹೆಚ್ಚಿಸಬೇಕಿತ್ತು, ಆರ್ಥಿಕ ಶಿಸ್ತು ಜಾರಿ ಹಾಗೂ ವೆಚ್ಚ ಕಡಿತದಂತಹ ಕ್ರಮಗಳನ್ನು ಜಾರಿಗೊಳಿಸಬೇಕಿತ್ತು.
ಗ್ರೀಸ್ ನಲ್ಲಾಗುತ್ತಿರುವ ಬೆಳವಣಿಗೆ ಪ್ರಪಂಚದ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿದೆ. ಭಾರತದ ಮಾರುಕಟ್ಟೆ ಹಿನ್ನಡೆಗೂ ಕಾರಣವಾಗಿದೆ. ಈಗಾಗಲೇ ಗ್ರೀಸ್ ನಲ್ಲಿ ಬ್ಯಾಂಕ್ ಗಳು ಬಾಗಿಲು ಹಾಕಿ ವಾರ ಕಳೆದಿದೆ. ಮುಂದೆ ಗ್ರೀಸ್ ತೆಗೆದುಕೊಳ್ಳುವ ನಿರ್ಧಾರ ಯುರೋಪಿಯನ್ ಮಾರುಕಟ್ಟೆಯ ದಿಕ್ಕನ್ನು ತೋರಿಸಲಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications